Last Updated:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 22 ನೇ ವರ್ಷದ ಇಫ್ತಾರ್ ಕೂಟ ಈ ಬಾರಿಯೂ ಸಂಭ್ರಮ ಸಡಗರದಿಂದ ನಡೆದಿದೆ. ಆಳ್ವಾಸ್ನ ಕೃಷಿ ಸಿರಿ ಆವರಣದಲ್ಲಿ ಇಫ್ತಾರ್ ಕೂಟ ನಡೆದಿದೆ.
ದಕ್ಷಿಣ ಕನ್ನಡ: ಮುಸ್ಲಿಂ ಬಾಂಧವರ ರಂಜಾನ್ ಮಾಸದ(Ramzan) ಉಪವಾಸ ವ್ರತ ನಡೆಯುತ್ತಿದೆ. ಅಲ್ಲಲ್ಲಿ ಇಫ್ತಾರ್ ಕೂಟಗಳೂ (Iftar Party) ನಡೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ(Alvas College) 22 ನೇ ವರ್ಷದ ಆಳ್ವಾಸ್ ಇಫ್ತಾರ್ ಕೂಟ ನಡೆದಿದೆ.
ಈ ಬಾರಿಯ ಇಫ್ತಾರ್ ಕೂಟದಲ್ಲಿ ಮಹಿಳೆಯರು ಮಕ್ಕಳು ಎನ್ನದೇ ಸುಮಾರು 12 ಸಾವಿರ ಜನರು ಭಾಗವಹಿಸಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 22 ನೇ ವರ್ಷದ ಇಫ್ತಾರ್ ಕೂಟ ಈ ಬಾರಿಯೂ ಸಂಭ್ರಮ ಸಡಗರದಿಂದ ನಡೆದಿದೆ. ಆಳ್ವಾಸ್ನ ಕೃಷಿ ಸಿರಿ ಆವರಣದಲ್ಲಿ ಇಫ್ತಾರ್ ಕೂಟ ನಡೆದಿದೆ.
ಇದನ್ನೂ ಓದಿ: Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲೊಬ್ಬ ಆಪತ್ಭಾಂದವ ಉರಗತಜ್ಞ!
ಪ್ರತಿ ವರ್ಷ ಮುಸ್ಲಿಂ ಸಂಪ್ರದಾಯದಂತೆ ಆಳ್ವಾಸ್ನಲ್ಲಿ ಇಫ್ತಾರ್ ಕೂಟ ನಡೆಸಲಾಗುತ್ತಿದ್ದು, ಈ ಬಾರಿಯೂ ಆವರಣದೊಳಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಜಮಾಅತೆ ಇಸ್ಲಾಮಿ ಹಿಂದ್ನ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ರಂಜಾನ್ ಸಂದೇಶ ನೀಡಿದರು.
ಪುರುಷರು ಮತ್ತು ಮಹಿಳೆಯರಿಗೆ ನಮಾಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಫ್ತಾರ್ ಕೂಟದಲ್ಲಿ ವಿವಿಧ ಬಗೆಯ ಹಣ್ಣುಗಳು, ಡ್ರೈಫ್ರೂಟ್ಸ್, ಜ್ಯೂಸ್, ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳನ್ನು ಜನರಿಗೆ ಉಣಬಡಿಸಲಾಗಿದೆ.
Dakshina Kannada,Karnataka
March 21, 2025 3:43 PM IST