Dakshina Kannada: ಕಪ್ಪೆರಾಯನ ಹಿಂಬಾಲಿಸಿ ಪೇಚಿಗೆ ಸಿಲುಕಿದ ಹೆಬ್ಬಾವಿನ ಮರಿಗಳು! ಟಾಮ್ & ಜೆರ್ರಿ ಆಟ ನೆನಪಿಸಿದ ಮಂಗಳೂರಿನ ಘಟನೆ | baby pythons fell to tank in search of frog in mangaluru

Dakshina Kannada: ಕಪ್ಪೆರಾಯನ ಹಿಂಬಾಲಿಸಿ ಪೇಚಿಗೆ ಸಿಲುಕಿದ ಹೆಬ್ಬಾವಿನ ಮರಿಗಳು! ಟಾಮ್ & ಜೆರ್ರಿ ಆಟ ನೆನಪಿಸಿದ ಮಂಗಳೂರಿನ ಘಟನೆ | baby pythons fell to tank in search of frog in mangaluru

Last Updated:

ಮಂಗಳೂರು: ಪುತ್ತೂರು ತಾಲೂಕಿನ ಸರ್ವೆ ಗ್ರಾಮದಲ್ಲಿ ಕಪ್ಪೆಯನ್ನು ಹಿಡಿಯಲು ಹೋಗಿ ನಾಲ್ಕು ಹೆಬ್ಬಾವಿನ ಮರಿಗಳು ನೀರಿನ ತೊಟ್ಟಿಯಲ್ಲಿ ಸಿಕ್ಕಿ ಬಿದ್ದವು. ಉರಗತಜ್ಞ ತೇಜಸ್ ಬನ್ನೂರು ಅವರನ್ನು ಕರೆಸಿ ಮರಿಗಳನ್ನು ರಕ್ಷಿಸಲಾಯಿತು.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಪ್ರಾಣಿ ಪ್ರಪಂಚದಲ್ಲಿ ಹಾಸ್ಯಕ್ಕೆ ಕೊರತೆ ಇಲ್ಲ! ಗಮನಿಸುವ ಕಣ್ಣು ಬೇಕಷ್ಟೆ! ಕಪ್ಪೆಯನ್ನು (Frog) ಹಿಡಿಯಲು ಹೋಗಿ ನಾಲ್ಕು ಹೆಬ್ಬಾವಿನ ಮರಿಗಳು (Baby pythons) ನೀರಿನೊಳಗೆ ಸಿಕ್ಕಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಲ್ಲೆಯ ಪುತ್ತೂರು ತಾಲೂಕಿನ (Putturu) ಸರ್ವೆ ಗ್ರಾಮದ ಕೈಯಾರ್ ಮುಗೇರು ಎಂಬಲ್ಲಿನ ರಾಜಗೋಪಾಲ್ ಕಂಪ ಎನ್ನುವವರ ಮನೆಯಲ್ಲಿ ನಡೆದಿದೆ. ಒಟ್ಟು ಆರು ಹೆಬ್ಬಾವು ಮರಿಗಳು ಎರಡು ದೊಡ್ಡ ಕಪ್ಪೆಯನ್ನು ಮನೆಯ ಹೂದೋಟದಲ್ಲಿದ್ದ ಸಣ್ಣ ಕರೆಯಾಕಾರದ ನೀರಿನ ತೊಟ್ಟಿಯಲ್ಲಿ ನೋಡಿದೆ. ಅತ್ಯಂತ ಫೇವರೇಟ್ ಫುಡ್ ಸುಲಭವಾಗಿ ಸಿಕ್ಕಿತು ಎಂದು ಭಾವಿಸಿದ ಹೆಬ್ಬಾವಿನ ಮರಿಗಳೆಲ್ಲಾ ನೇರವಾಗಿ ನೀರಿನ ತೊಟ್ಟಿಗೆ ಇಳಿದಿದೆ. ಆದರೆ ನೀರಿಗೆ (Water) ಇಳಿದ ಬಳಿಕವೇ ಗೊತ್ತಾಗಿರೋದು ಈ ನೀರಿನಿಂದ ಹೊರ ಬರಲು ಪರದಾಡಿದೆ.

ತೊಟ್ಟಿಯಲ್ಲಿ ತೆವಳುತ್ತಾ ಸಿಲುಕಿದ ಹಾವುಗಳು, ಬಚಾವಾದ ಕಪ್ಪೆಗಳು

ಆರು ಮರಿಗಳಲ್ಲಿ ಎರಡು ಮರಿಗಳ ಹೇಗೋ ತೆವಳತ್ತಾ, ಕುಂಟುತ್ತ ನೀರಿಂದ ಮೇಲೆ ಬಂದಿದೆ. ಆದರೆ ಉಳಿದ ನಾಲ್ಕು ಮರಿಗಳಿಗೆ ಮೇಲೆ ಬರಲು ಸಾಧ್ಯವಾಗದೆ ಚಡಪಡಿಸಿವೆ. ನೀರಿನಲ್ಲಿರುವ ಕಪ್ಪೆಗಳಿಗೆ ಹಬ್ಬಾವು ಮರಿಳನ್ನು ಕಂಡು ಹೌಹಾರಿದ್ದು, ಮರಿಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡಿವೆ. ಈ ನಡುವೆ ಕಪ್ಪೆಯನ್ನು ಬಿಟ್ಟು ನೀರಿಂದ ಮೇಲೆ ಹೋಗಲು ಪ್ರಯತ್ನಿಸುತ್ತಿದ್ದ ಹೆಬ್ಬಾವಿನ ಮರಿಗಳ ಪಾಡನ್ನು ಕಂಡು ಕಪ್ಪೆಗಳು ಕೊಂಚ ರಿಲ್ಯಾಕ್ಸ್ ಆಗಿದೆ. ಈ ನಡುವೆ ಹೆಬ್ಬಾವಿನ ಮರಿಗಳು ನೀರಿನಲ್ಲಿರೋದನ್ನ ಕಂಡು ಮನೆ ಮಂದಿ ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ತೆರಳಿ ನೀರಿನ ತೊಟ್ಟಿಯಿಂದ ಹೆಬ್ಬಾವಿನ ಮರಿಗಳನ್ನು ಹೊರತೆಗೆದು ರಕ್ಷಿಸಿದ್ದಾರೆ.

ಜಾರುವ ಮೈ ಹೆಬ್ಬಾವಿನ ಲಕ್ಷಣ

ಹೆಬ್ಬಾವಿನ ಮರಿಗಳನ್ನು ಹೊರ ತೆಗೆಯಲು ಕಷ್ಟಪಟ್ಟ ತೇಜಸ್ ಬಳಿಕ ನಾಲ್ಕೂ ಮರಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ. ಅತ್ಯಂತ ಹೆಚ್ಚು ಜಾರುವ ಚರ್ಮವನ್ನು ಹೊಂದಿರುವ ಹೆಬ್ಬಾವುಗಳ ಮರಿಗಳನ್ನು ಹಲವು ಬಾರಿ ನೀರಿನಿಂದ ಹೊರತೆಗೆದರೂ ಮತ್ತೆ ನೀರಿಗೆ ಬೀಳುತ್ತಿದ್ದ ಹೆಬ್ಬಾವುಗಳನ್ನು ಕೊನೆಗೆ ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಹಾವುಗಳನ್ನು ಹಿಡಿದು, ರಕ್ಷಿಸುತ್ತಿದ್ದ ತೇಜಸ್ ಈ ತನಕ ಸುಮಾರು ಸಾವಿರಕ್ಕೂ ಮಿಕ್ಕಿದ ಹೆಬ್ಬಾವುಗಳನ್ನು ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಯ ವೇಳೆ ತಮಗೆ ದೊರೆತ ಅನಾಥ ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿ ಮಾಡಿಸಿದ್ದಾರೆ.