Last Updated:
ದಕ್ಷಿಣ ಕನ್ನಡ: ಭಾರೀ ಮಳೆಯಿಂದ ನೇತ್ರಾವತಿ, ಕುಮಾರಧಾರ ನದಿಗಳು ತುಂಬಿ ಹರಿಯುತ್ತಿವೆ. ಅರಬ್ಬೀ ಸಮುದ್ರದ ಅಲೆಗಳು ಬಿರುಸಿನಿಂದ ಅಪ್ಪಳಿಸುತ್ತಿವೆ, ಜನ ಕಡಲ ತೀರಕ್ಕೆ ಹೆದರುತ್ತಿದ್ದಾರೆ.
ದಕ್ಷಿಣ ಕನ್ನಡ: ಕರಾವಳಿಯಾದ್ಯಂತ(Coastal) ಕಳೆದ ಒಂದು ವಾರಂದಿಂದೀಚೆಗೆ ಭಾರೀ ಮಳೆಯಾಗುತ್ತಿದೆ (Heavy Rain). ಭಾರೀ ಮಳೆಯಿಂದಾಗಿ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಧಾರ ಸೇರಿದಂತೆ ಎಲ್ಲಾ ಹಳ್ಳ, ತೊರೆಗಳು ತುಂಬಿ ಹರಿಯಲಾರಂಭಿಸಿದೆ. ಈ ನದಿ-ತೊರೆಗಳ ನೀರು ಒಂದಲ್ಲ, ಒಂದು ಕಡೆ ಸಮುದ್ರವನ್ನೇ (Sea) ಸೇರುತ್ತವೆ. ಈ ಎಲ್ಲಾ ನೀರುಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡ ಕಡಲಿನ ಸದ್ಯದ ಪರಿಸ್ಥಿತಿ ಮಾತ್ರ ಭಯಾನಕವಾಗಿದೆ.
ಸದಾ ಶಾಂತವಾಗಿದ್ದ ಅರಬ್ಬೀ ಸಮುದ್ರ ಇಂದು ತನ್ನ ರೌದ್ರನರ್ತನವನ್ನು ತೋರುತ್ತಿದೆ. ಶಾಂತವಾಗಿ ಚಿಮ್ಮತ್ತಿದ್ದ ಕಡಲ ಅಲೆಗಳು ಇಂದು ಬಿರುಸಿನಿಂದ ಕಿನಾರೆಗೆ ಅಪ್ಪಳಿಸುತ್ತಿದ್ದು, ಕಡಲ ತೀರಕ್ಕೆ ತೆರಳಲು ಜನ ಹಿಂದೇಟು ಹಾಕುವಂತಹ ಸ್ಥಿತಿಯಲ್ಲಿದೆ. ನೀಲಿ ಬಣ್ಣದಿಂದ ಕಂಗೊಳಿಸುತ್ತಿದ್ದ ಅರಬ್ಬೀ ಸಮುದ್ರದ ನೀರು ಇದೀಗ ಕೆಸರುಮಯವಾಗಿದ್ದು, ಕಡಲಿನ ಭೀಕರತೆಗೆ ಸಾಕ್ಷಿಯಂತಿದೆ.
ಸಮುದ್ರ ತೀರದ ಶಾಂತ ವಾತಾವರಣವನ್ನು ಇಷ್ಟಪಟ್ಟು ಕಡಲ ತೀರಕ್ಕೆ ತೆರಳುತ್ತಿದ್ದ ಜನ ಇತ್ತೀಚಿನ ದಿನಗಳಲ್ಲಿ ಕಡಲಿನ ಕಡೆಗೇ ಮುಖ ಮಾಡುತ್ತಿಲ್ಲ. ಭಾರೀ ಗಾತ್ರದ ಅಲೆಗಳು ತೀರವನ್ನು ಅಪ್ಪಳಿಸಲಾರಂಭಿಸಿದ್ದು, ತೀರಕ್ಕೆ ಬರುವ ಜನರ ಜೊತೆಗೆ ಕಡಲತಡಿಯಲ್ಲಿ ವಾಸಿಸುತ್ತಿರುವ ಕುಟುಂಬಳಿಗೂ ಭಯ ಹುಟ್ಟಿಸುವ ರೀತಿಯಲ್ಲಿದೆ.
ಅಲೆಗಳ ಜೊತೆಗೆ ಬೀಸುತ್ತಿರುವ ಗಾಳಿ ತೀರಕ್ಕೆ ಯಾರು ಬಂದರೂ ಎತ್ತಿ ಎಸೆಯುವ ಸಾಮರ್ಥ್ಯದಲ್ಲಿದ್ದು, ಶಾಂತ ಕಡಲು ಕಳೆದ ಒಂದು ವಾರದಿಂದೀಚೆಗೆ ರೌದ್ರ ಕಡಲಾಗಿ ಮಾರ್ಪಟ್ಟಿದೆ. ಶಾಂತ ಕಡಲನ್ನು ನೋಡಿದ ಜನರಿಗಾಗಿ ರೌದ್ರ ನರ್ತನದ ಕಡಲಿನ ಚಿತ್ರಣ ಇಲ್ಲಿದೆ.
Dakshina Kannada,Karnataka