Uncategorized

Dakshina Kannada: ಕರಾವಳಿಯಲ್ಲಿ ಮೇ 21ರ ತನಕ ಪೂರ್ವ ಮುಂಗಾರು ಅಬ್ಬರ- ಹವಾಮಾನ ಇಲಾಖೆ ಮುನ್ಸೂಚನೆ! | Dakshina Kannada: Eastern monsoon forecasts till May 21st on the coast- Meteorological Department forecasts!

Dakshina Kannada: ಕರಾವಳಿಯಲ್ಲಿ ಮೇ 21ರ ತನಕ ಪೂರ್ವ ಮುಂಗಾರು ಅಬ್ಬರ- ಹವಾಮಾನ ಇಲಾಖೆ ಮುನ್ಸೂಚನೆ! | Dakshina Kannada: Eastern monsoon forecasts till May 21st on the coast- Meteorological Department forecasts!

Last Updated:

ಭಾರೀ ಬಿರುಗಾಳಿ ಜೊತೆಗೆ ಗುಡುಗು ಮಿಂಚಿನ ಮಳೆಯಾಗುವ ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಜನರ ಮುನ್ನಚ್ಚೆರಿಕಾ ಕ್ರಮ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಜನರಿಗೆ ಮನವಿ ನೀಡಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕರಾವಳಿಯಲ್ಲಿ(Coastal) ಪೂರ್ವ ಮುಂಗಾರು(Eastern Monsoon) ಚುರುಕು ಪಡೆದಿದೆ. ಮಂಗಳೂರು ನಗರ(Mangaluru City) ಸೇರಿದಂತೆ ಇಡೀ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ(Good Rain). ಮಂಗಳೂರು ನಗರದಲ್ಲಿ ಗುರುವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದ ವೇಳೆ ಉತ್ತಮ ಮಳೆಯಾಗಿದೆ. ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಗೆ ಇಳೆ ತಂಪಾಗಿದೆ.

ಮಂಗಳೂರು ನಗರದ ನಂತೂರ್, ಕದ್ರಿ, ಬಂಟ್ಸ್ ಹಾಸ್ಟೆಲ್, ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ಸೇರಿದಂತೆ ನಗರದಾದ್ಯಂತ ಭಾರೀ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭಾರೀ ಗುಡುಗು ಸಿಡಿಲಿನ ವಾತಾವರಣವಿದೆ. ಮೇ 21 ರ ತನಕ ಪೂರ್ವ ಮುಂಗಾರು ಅಬ್ಬರ ಇರುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಭಾರೀ ಬಿರುಗಾಳಿ ಜೊತೆಗೆ ಗುಡುಗು ಮಿಂಚಿನ ಮಳೆಯಾಗುವ ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಜನರ ಮುನ್ನಚ್ಚೆರಿಕಾ ಕ್ರಮ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಜನರಿಗೆ ಮನವಿ ನೀಡಿದೆ.

ಮೇ‌ 27 ರಂದು ಕೇರಳವನ್ನು ಮುಂಗಾರು ಪ್ರವೇಶ ಮಾಡಲಿದೆ. ಜೂನ್ ಮೊದಲ ವಾರದಲ್ಲಿ ಕರಾವಳಿ ಕರ್ನಾಟಕವನ್ನು ಮುಂಗಾರು ಪ್ರವೇಶ ಮಾಡಲಿದೆ. ವಾಡಿಕೆಗಿಂತ ಮೊದಲೇ ಕರಾವಳಿಯಲ್ಲಿ ಮಳೆ ಸುರಿಯುತ್ತಿದ್ದು, ನಗರದಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿತ್ತು.‌ ಕೊಂಚ ಹೊತ್ತು ಕಳೆಯುತ್ತಿದ್ದಂತೆ ಮಳೆ ಸುರಿಯಲಾರಂಭಿಸಿದೆ. ಒಂದು ತಾಸಿಗಿಂತಲೂ ಅಧಿಕ ಹೊತ್ತು ಮಳೆ ಚೆನ್ನಾಗಿ ಸುರಿದು ಭೂಮಿಗೆ ತಂಪೆರೆದಿದೆ. ಬಳಿಕ ಕೆಲ ಹೊತ್ತಿನಲ್ಲೇ ಬಿಸಿಲು ಕಂಡು ಬಂದಿದೆ.

ಕರಾವಳಿಯಲ್ಲಿ ಈಗಾಗಲೇ ಬೇಸಿಗೆ ಮಳೆ ಉತ್ತಮವಾಗಿ ಸುರಿದಿದ್ದು, ಜೂನ್ 5ರ ವೇಳೆಗೆ ಕರಾವಳಿಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಕರಾವಳಿಯಲ್ಲಿ ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಅದರಂತೆ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ.