Dakshina Kannada: ಕಲ್ಲಡ್ಕ ಚತುಷ್ಪಥ ಫ್ಲೈ ಓವರ್ ಉದ್ಘಾಟನೆ: ಮಂಗಳೂರು-ಬೆಂಗಳೂರು ಸಂಚಾರಕ್ಕೆ ಮಹತ್ವದ ಮೈಲಿಗಲ್ಲು | Kalladka flyover Inaugurated under the leadership of Dr Prabhakar Bhat fulfilling public dream

Dakshina Kannada: ಕಲ್ಲಡ್ಕ ಚತುಷ್ಪಥ ಫ್ಲೈ ಓವರ್ ಉದ್ಘಾಟನೆ: ಮಂಗಳೂರು-ಬೆಂಗಳೂರು ಸಂಚಾರಕ್ಕೆ ಮಹತ್ವದ ಮೈಲಿಗಲ್ಲು | Kalladka flyover Inaugurated under the leadership of Dr Prabhakar Bhat fulfilling public dream

Last Updated:

ಮಂಗಳೂರಿನ ಬಹು ನಿರೀಕ್ಷೆಯ ಕಲ್ಲಡ್ಕ ಫ್ಲೈ ಓವರ್ ಕೊನೆಗೂ ಸಂಚಾರಕ್ಕೆ ತೆರೆದುಕೊಂಡಿದೆ. ಡಾ.ಪ್ರಭಾಕರ್ ಭಟ್ ನೇತೃತ್ವದಲ್ಲಿ ಉದ್ಘಾಟನೆಗೊಂಡ ಈ ಮೇಲ್ಸೇತುವೆ 2.1 ಕಿಮೀ ಉದ್ದವಿದ್ದು, ಜನರ ಸಂಕಷ್ಟ ನಿವಾರಣೆ ಮಾಡಿದೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಕಳೆದ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಮಂಗಳೂರಿನ (Mangaluru) ಬಿಸಿರೋಡ್-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಭಾಗವಾಗಿ ನಿರ್ಮಾಣಗೊಂಡ ಬಹು ನಿರೀಕ್ಷೆಯ ಕಲ್ಲಡ್ಕ ಫ್ಲೈ ಓವರ್ (Kalladka Flyover) ಕೊನೆಗೂ ಸಂಚಾರಕ್ಕೆ ತೆರೆದುಕೊಂಡಿದೆ. ಮಾಣಿ ಭಾಗದಿಂದ ಬಿಸಿ ರೋಡ್ (BC Road) ಭಾಗಕ್ಕೆ ಆಗಮಿಸುವ ವಾಹನಗಳು ಫ್ಲೈ ಓವರ್ ಮೂಲಕ ಸಂಚಾರವನ್ನು ಆರಂಭಿಸಿದೆ. ಸೋಮವಾರ ಬೆಳಗ್ಗೆ 10:30 ಗಂಟೆಗೆ ಫ್ಲೈ ಓವರ್ ನ ಆರಂಭಿಕ ಭಾಗ ಪೂರ್ಲಿಪಾಡಿಯಲ್ಲಿ ವಾಹನ ಸಂಚಾರವನ್ನು ಉದ್ಘಾಟನೆ ಮಾಡಲಾಗಿದೆ.

ಪೂರ್ಲಿಪಾಡಿಯಲ್ಲಿ ಸೇರಿದ ಕಲ್ಲಡ್ಕದ ನಾಗರಿಕರು,ಹಿರಿಯ ಮುಂದಾಳು,ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ಕಲ್ಲಡ್ಕ ದ ನಾಗರಿಕರು ವಾಹನ ಸಂಚಾರವನ್ನು ಸ್ವಾಗತಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅನೇಕ ವರ್ಷಗಳ ಕನಸು ಕಲ್ಲಡ್ಕ ದಲ್ಲಿ ನನಸಾಗಿದೆ.ಇಡೀ ರಾಜ್ಯದಲ್ಲಿ ಬಹಳ ದೊಡ್ಡ ಸಂಪರ್ಕ ಸೇತು ಆಗಿರುವ ಈ ಫ್ಲೈ ಓವರ್ ಜನರ ನಿರೀಕ್ಷೆ ಯ ರಸ್ತೆಗಳಲ್ಲಿ ಒಂದಾಗಿತ್ತು. ರಸ್ತೆ ನಿರ್ಮಾಣ ಮಾಡಿದ ಕಂಪನಿ ಹೇಳಿದ ಸಮಯಕ್ಕೆ ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸಿದ್ದಾರೆ.ಬೆಂಗಳೂರು-ಮಂಗಳೂರು ವಾಹನ ಸಂಚಾರ ಅತ್ಯಂತ ದೀರ್ಘ ಈ ಮೇಲ್ಸೇತುವೆಗೆ ಶ್ರೀರಾಮ ಮೇಲ್ಸೆತುವೆ ಎಂದು ಕಲ್ಲಡ್ಕ ನಾಗರಿಕರು ನಾಮಕಾರಣ ಮಾಡಿದ್ದಾರೆ.

2.1 ಕಿಮೀ ಉದ್ದದ ಈ ಮೇಲ್ಸೇತುವೆ ಜನರ ಬಹುಬೇಡಿಕೆಯ ಸೇತುವೆ ಆಗಿತ್ತು. ಜನ ಕಲ್ಲಡ್ಕ ಫ್ಲೈ ಓವರ್ ನಿರ್ಮಾಣ ಆಗದೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಸರ್ವೀಸ್ ರಸ್ತೆ ಸರಿಯಾಗಿ ನಿರ್ಮಾಣ ಆಗದೇ ಪ್ರಯಾಣಿಕರು ಪರದಾಡಿದ್ದರು. ಇದೀಗ ಫ್ಲೈ ಓವರ್ ನಲ್ಲಿ ಏಕಮುಖ ಸಂಚಾರ ತೆರದುಕೊಂಡಿದ್ದು,ಜನ ನಿಟ್ಟುಸಿರು ಬಿಡುವಂತಾಗಿದೆ.