Last Updated:
ದಕ್ಷಿಣ ಕನ್ನಡದಲ್ಲಿ ಕಸ ಎಸೆಯುವವರ ವಿರುದ್ಧ ಸ್ಥಳೀಯ ಆಡಳಿತಗಳು ಸಿಸಿ ಕ್ಯಾಮರಾ ಅಳವಡಿಸಿ ಕ್ರಮ ಕೈಗೊಂಡಿವೆ. ಸಾರ್ವಜನಿಕರು ಖಾರದ ಬರಹಗಳನ್ನು ಬಳಸಿ ಎಚ್ಚರಿಕೆ ನೀಡುತ್ತಿದ್ದಾರೆ.
ದಕ್ಷಿಣ ಕನ್ನಡ: ರಸ್ತೆ ಬದಿಯಲ್ಲಿ(Road Side), ಖಾಲಿ ಇದ್ದ ಜಾಗದಲ್ಲಿ, ನದಿ-ತೊರೆ-ತೋಡುಗಳಲ್ಲಿ ಕಸ(Garbage) ಎಸೆಯಬೇಡಿ ಎಂದು ಊರಿಡೀ ಡಂಗುರ ಹೊಡಿಸಿದರೂ ಕೆಲವರು ಮಾತ್ರ ಇನ್ನೂ ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಸ್ಥಳೀಯ ಆಡಳಿತಗಳು ಕಸ ಎಸೆಯುವ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಎಸೆಯುವವರ ವಿರುದ್ಧ ಕ್ರಮಕ್ಕೂ ಮುಂದಾಗಿದೆ. ಆದರೆ ಸಿಸಿ ಕ್ಯಾಮರಾ ಇಲ್ಲದ ಜಾಗದಲ್ಲಿ ಕೆಲವು ಎಚ್ಚರಿಕೆಯ ಬೋರ್ಡ್ಗಳನ್ನು(Board) ಅಳವಡಿಸಲಾಗುತ್ತದೆ.
ಸ್ಥಳೀಯ ಆಡಳಿತ ಈ ವ್ಯವಸ್ಥೆಗಳ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಿದರೆ, ರಸ್ತೆ ಪಕ್ಕದಲ್ಲಿರುವ ಖಾಸಗಿ ಜಾಗಕ್ಕೂ ಕಸಗಳು ಇಂದು ಬಂದು ಬೀಳುತ್ತಿವೆ. ಅಲ್ಲದೇ ನೀರಿನ ಮೂಲಗಳಾದ ತೊರೆ-ತೋಡುಗಳಿಗೂ ಕಸ ಎಸೆಯುವುದನ್ನು ಕಂಟ್ರೋಲ್ ಮಾಡಲು ಇದೀಗ ಕೆಲವು ಕಡೆಗಳಲ್ಲಿ ಸಾರ್ವಜನಿಕರೇ ಮುಂದಾಗಿದ್ದಾರೆ. ಕಸ ಎಸೆಯುವವರಿಗೆ ಶಾಂತ, ಸೌಮ್ಯ ಸ್ವಭಾವದ ಬರಹಗಳು ಹೆಚ್ಚು ಪರಿಣಾಮವನ್ನು ಬೀರುವುದಿಲ್ಲ ಎನ್ನುವುದನ್ನು ಅರಿತ ಸ್ಥಳೀಯರು ಇದೀಗ ಖಾರದ ಬರಹಗಳನ್ನು ಬರೆಯಲಾರಂಭಿಸಿದ್ದಾರೆ.
ಕಸ ಎಸೆದವರಿಗೆ ಕಠಿಣ ಕ್ರಮ, ಶಿಸ್ತು ಕ್ರಮ, ದಂಡ-ಪಿಂಡ ಎನ್ನುವ ಬರಹಗಳಿಂದ ಕಸ ಎಸೆಯುವವರಿಗೆ ಬುದ್ಧಿ ಬರುವುದಿಲ್ಲ ಎಂದು, ಇದೀಗ ಕಸ ಎಸೆಯುವವರ ವೈಯುಕ್ತಿಕ ವಿಚಾರವನ್ನೇ ಬರೆದು ಮುಡಿಪು ಹತ್ತಿರದ ನೂಜ ಎಂಬಲ್ಲಿ ಬೋರ್ಡ್ ಅಳವಡಿಸಲು ಆರಂಭಿಸಿದ್ದಾರೆ.
ಈ ಬೋರ್ಡ್ ಗಳನ್ನು ಗಮನಿಸುವ ವ್ಯಕ್ತಿ ಆ ಜಾಗದಲ್ಲಿ ಕಸ ಎಸೆಯಲು ಹಿಂದೆ-ಮುಂದೆ ನೋಡಬೇಕಾದಂತಹ ಬರಹಗಳು ಇರುವ ಕಾರಣಕ್ಕೆ ಇಂತಹ ಬರಹಗಳಿರುವ ಕಡೆಗಳಲ್ಲಿ ಕಸ ಎಸೆಯೋದು ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಓದಲು-ಬರೆಯಲು ಬರದ ಜನ ಮಾತ್ರ ಈ ಬರಹಗಳನ್ನೂ ಮಾಮೂಲಿ ಎಂದು ತಿಳಿದು ಕಸ ಎಸೆಯುತ್ತಿದ್ದಾರೆ.
Dakshina Kannada,Karnataka