Last Updated:
ದಕ್ಷಿಣ ಕನ್ನಡದ ಕುಪ್ಪೆಪದವಿನ ಬದ್ರಿಯಾ ಜಮಾ ಮಸೀದಿ 72 ವರ್ಷಗಳ ನಂತರ ನವೀಕೃತವಾಗುತ್ತಿದೆ. ಹಿಂದೂ ಶಿಲ್ಪಿಗಳು ಕೆತ್ತನೆ ಮಾಡುತ್ತಿದ್ದು, ಕ್ರೈಸ್ತರು ಮರ ಒದಗಿಸಿದ್ದಾರೆ. ಇದು ಕೋಮು ಸೌಹಾರ್ದತೆಯ ಉದಾಹರಣೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ(Dakshina Kannada) ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಜಿಲ್ಲೆ. ಆರ್ಥಿಕ, ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿದೆ.. ಆದ್ರೆ ಕೋಮು ಸಂಘರ್ಷದ(Communal Conflict) ಹಣೆಪಟ್ಟಿ ಇದೆ. ಆದ್ರೂ ಇದಕ್ಕೆ ಮೀರಿದ ಕೋಮು ಸೌಹಾರ್ದ ಸಹಬಾಳ್ವೆ ಇಲ್ಲಿದೆ. ಕಡಲು ಕೆಲವೊಮ್ಮೆ ಶಾಂತವಾಗಿದ್ರೆ, ಕೆಲವೊಮ್ಮೆ ಪ್ರಕ್ಷುಬ್ಧವಾಗಿ ಅಬ್ಬರಿಸುತ್ತದೆ. ಇದೇ ರೀತಿ ರಾಜ್ಯದ ಕರಾವಳಿಯಲ್ಲೂ(Coastal) ಶಾಂತಿ ಸಹಬಾಳ್ವೆ ನೆಲೆಸಿದ್ರೂ ಕೆಲವೊಮ್ಮೆ ಸಂಘರ್ಷ ದ್ವೇಷದ ಜ್ವಾಲೆ ಜೋರಾಗಿ ಹೊತ್ತಿ ಉರಿಯುತ್ತದೆ. ಆದ್ರೆ ಇದಕ್ಕೂ ಮೀರಿದ ಸಾಮರಸ್ಯ ಸಾವಿರಾರು ಕಥೆಗಳು ಇಲ್ಲಿವೆ. ಅದರಲ್ಲೊಂದು ದಕ್ಷಿಣ ಕನ್ನಡ ಜಿಲ್ಲೆಯ ಕುಪ್ಪೆಪದವಿನ ಮಸೀದಿ(Mosque) ಕಥೆ.
ಕುಪ್ಪೆಪದವಿನ ಬದ್ರಿಯಾ ಜಮಾ ಮಸೀದಿ ಕರಾವಳಿಯ ಸಾಮರಸ್ಯ ಮಸೀದಿಯಾಗಿದೆ. 72 ವರ್ಷಗಳ ಮಸೀದಿ ತುಳುನಾಡಿನ ಶೈಲಿಯ ಮರದ ಕೆತ್ತನೆಯೊಂದಿಗೆ ನವೀಕೃತಗೊಳ್ಳುತ್ತಿದ್ದು, ಕೆತ್ತನೆಯನ್ನು ಹಿಂದೂ ಶಿಲ್ಪಿಗಳು ಮಾಡುತ್ತಿದ್ದು, ಸ್ಥಳೀಯ ಕ್ರೈಸ್ತರು ಉಚಿತವಾಗಿ ಮರವನ್ನು ಒದಗಿಸಿದ್ದಾರೆ.
ಸ್ಥಳೀಯ ಇಂಜಿನಿಯರಿಂಗ್ ಪ್ರಣೀತ್ ರೈ ಮಸೀದಿಗೆ ನೀಲನಕ್ಷೆ ತಯಾರಿಸಿದ್ದು, ಕೊಂಕಣಿ ಸಮುದಾಯದ ಶಿವಮೊಗ್ಗದ ರಾಜ ಸಾಗರ್ ನೇತೃತ್ವದಲ್ಲಿ ಕೆತ್ತನೆ ಕೆಲಸ ನಡೆಯುತ್ತಿದೆ. ಜೊತೆಗೆ ಕೆತ್ತನೆ ಕಾರ್ಯಕ್ರಮದಲ್ಲಿ ಸಾಕಷ್ಟು ಹಿಂದೂ ಸಮುದಾಯದ ಶಿಲ್ಪಿಗಳು ಕೈ ಜೋಡಿಸಿದ್ದಾರೆ.
ಒಟ್ಟಿನಲ್ಲಿ, ಕರಾವಳಿಯಲ್ಲೂ ಸೌಹಾರ್ದತೆ ಇದೆ ಅನ್ನೋದಕ್ಕೆ ಇನ್ನೂ ಅನೇಕ ಉದಾಹರಣೆ ಇದೆ. ಸದ್ಯ ಮಸೀದಿ ಸರ್ವ ಧರ್ಮಗಳ ಸಹಕಾರದಿಂದ ನವೀಕೃತವಾಗುತ್ತಿದೆ. ಅದ್ಭುತ ಮರದ ಕೆತ್ತನೆ ಮುಂದಿನ ದಿನಗಳಲ್ಲಿ ಕಂಗೊಳಿಸಲಿದೆ..
Dakshina Kannada,Karnataka
May 20, 2025 12:01 PM IST