Dakshina Kannada: ಜಾಂಬ್ರಿ ಗುಹಾಲಯದ ಹಿಂದಿದೆ ರೋಚಕ ಕಥೆ! | Dakshina Kannada: There is an exciting story behind Jambri Caves!

Dakshina Kannada: ಜಾಂಬ್ರಿ ಗುಹಾಲಯದ ಹಿಂದಿದೆ ರೋಚಕ ಕಥೆ! | Dakshina Kannada: There is an exciting story behind Jambri Caves!

Last Updated:

ಚೆಂಡೆತ್ತಡ್ಕ ಬಯಲಿನ ಕೆಲವು ಪ್ರದೇಶ ಗುಹೆಯ ಇರುವಿಕೆಯಿಂದ ಅಡಿ ನೆಲದಡಿ ಟೊಳ್ಳಾಗಿದ್ದು ನಡೆದಾಡುವಾಗ ಚೆಂಡೆಯ ಶಬ್ದ ಕೇಳುತ್ತದೆ. ಇದರಿಂದಾಗಿಯೇ ಈ ಪ್ರದೇಶಕ್ಕೆ ಚೆಂಡೆತ್ತಡ್ಕ ಎಂಬ ಹೆಸರು ಬಂದಿದೆ ಎಂದೂ ಹೇಳಲಾಗುತ್ತಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕೇರಳ ಮತ್ತು ಕರ್ನಾಟಕದ ಗಡಿಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada) ಪುತ್ತೂರು ತಾಲೂಕಿನ ಪಾಣಾಜೆಯಲ್ಲಿರುವ ಜಾಂಬ್ರಿ ಗುಹೆಗೆ(Jambri Cave) ಐತಿಹಾಸಿಕ ಹಿನ್ನಲೆಯಿದೆ. 12 ವರ್ಷಕ್ಕೊಮ್ಮೆ ಈ ಗುಹಾಲಯದ ಒಳಗೆ ಐವರು ಪ್ರವೇಶ ಮಾಡಿ ಗುಹಾಲಯದೊಳಗೆ ಪೂಜೆ ನೆರವೇರಿಸಿದ ಬಳಿಕ ಗುಹಾಲಯದೊಳಗಿಂದ ಮೃತ್ತಿಕಾ ಪ್ರಸಾದವನ್ನು ತಂದು ಭಕ್ತರಿಗೆ ಹಂಚಲಾಗುತ್ತದೆ‌. ಈ ಗುಹಾಲಯ ಹೇಗೆ ಉಂಟಾಯಿತು ಎನ್ನುವ ಕುರಿತ ರೋಚಕ ಕಥೆಯೊಂದು ಈ ಕ್ಷೇತ್ರದ ಇತಿಹಾಸವನ್ನು(History) ಹೇಳುತ್ತದೆ.

ರಾವಣ ಸಹೋದರ ಖರಾಸುರ ಹಿಮಾಲಯದಲ್ಲಿ ತಪಸ್ಸು ಮಾಡಿ ಶಿವನನ್ನು ಒಲಿಸಿ, ಶಿವನಿಂದ ಮೂರು ಶಿವಲಿಂಗಗಳನ್ನು ಪಡೆದು ಒಂದು ಶಿವಲಿಂಗವನ್ನು ಎಡಗೈ, ಇನ್ನೊಂದನ್ನು ಬಲಗೈ ಹಾಗೂ ಮೂರನೆಯದನ್ನು ಬಾಯಲ್ಲಿ ಇರಿಸಿ ಕಾಶಿಯಿಂದ ಗುಹಾ ಮಾರ್ಗದಲ್ಲಿ ಮರಳುತ್ತಾನೆ. ಊರಿಗೆ ತಲುಪುವ ಮುನ್ನ ಯಾವ ಕಾರಣಕ್ಕೂ ತಲೆ ಎತ್ತಿ ನೋಡಬಾರದೆಂದೂ ಶಿವ ಹೇಳಿದ್ದರೂ ದಕ್ಷಿಣ ಭಾರತ ತಲುಪಿದಾಗ ಊರು ತಲುಪಿದ ಸಂತೋಷದಲ್ಲಿ ಶಿವಧ್ಯಾನದಿಂದ ವಿಮುಖನಾಗಿ ಮೇಲೆ ನೋಡುತ್ತಾನೆ. ಆಗ ಇದ್ದಕ್ಕಿದ್ದಂತೆ ಶಿವಲಿಂಗದ ಭಾರ ಹೆಚ್ಚಾಗಿ ಹಿಡಿತ ತಪ್ಪುತ್ತದೆ ಆಗ ಕೇಳಿ ಬಂದ ಅಶರೀರವಾಣಿಯ ಪ್ರಕಾರ ಶಿವಗಣ ಗುಳಿಗನು ಶಂಖಪಾಲನ ರೂಪದಲ್ಲಿ ಖರನಿಗೆ ಮಾರ್ಗ ತೋರಿಸುತ್ತಾನೆ.

ಇದನ್ನೂ ಓದಿ: Dakshina Kannada: ಜೇನು ಪೆಟ್ಟಿಗೆಗಳ ನಿರ್ವಹಣೆ ಜವಾಬ್ದಾರಿ ಹೊತ್ತ ಗ್ರಾಮಜನ್ಯ ಸಂಸ್ಥೆ!

ಖರನು ಎಡಗೈಯ್ಯಲ್ಲಿದ್ದ ಲಿಂಗವನ್ನು ಬೆಟ್ಟಂಪಾಡಿ, ಬಲಗೈಯ್ಯಲ್ಲಿದ್ದ ಲಿಂಗವನ್ನು ಆಲಂಕೂಡ್ಲುವಿನಲ್ಲಿ ಪ್ರತಿಷ್ಠಾಪಿಸುತ್ತಾನೆ. ಬಾಯೊಳಗಿದ್ದ ಶಿವಲಿಂಗವೂ ಮಾಯವಾಗಿ ಪೂರ್ವ ಬಯಲಿನ ಮಧ್ಯೆ ಪ್ರತ್ಯಕ್ಷವಾಗುತ್ತದೆ. ಇದುವೆ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಕಾಶಿಯಿಂದ ಹೊರಟ ಖರ ಗವಿಯಿಂದ ಹೊರ ಬಂದ ಸ್ಥಳವೇ ಜಾಂಬ್ರಿ ಗುಹೆ ಎಂದು ನಂಬಲಾಗಿದೆ. ಚೆಂಡೆತ್ತಡ್ಕ ಬಯಲಿನ ಕೆಲವು ಪ್ರದೇಶ ಗುಹೆಯ ಇರುವಿಕೆಯಿಂದ ಅಡಿ ನೆಲದಡಿ ಟೊಳ್ಳಾಗಿದ್ದು ನಡೆದಾಡುವಾಗ ಚೆಂಡೆಯ ಶಬ್ದ ಕೇಳುತ್ತದೆ. ಇದರಿಂದಾಗಿಯೇ ಈ ಪ್ರದೇಶಕ್ಕೆ ಚೆಂಡೆತ್ತಡ್ಕ ಎಂಬ ಹೆಸರು ಬಂದಿದೆ ಎಂದೂ ಹೇಳಲಾಗುತ್ತಿದೆ.

ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪ್ರತಿ 12 ವರ್ಷಕ್ಕೊಮ್ಮೆ ಜಾಂಬ್ರಿ ಗುಹಾ ಪ್ರವೇಶ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತಿದೆ. ಇಲ್ಲಿನ ಮೂಲ ನಿವಾಸಿಗಳಾದ ಕಾಪಾಡರು 48 ದಿನಗಳ ಕಾಲ ಅಜ್ಞಾತರಾಗಿ ದೀಕ್ಷೆ ಮುಗಿಸಿ ಗುಹಾ ಪ್ರವೇಶದಂದು ಶುಭ್ರ ವಸ್ತ್ರಧಾರಿಗಳಾಗಿ, ಎಲೆ ಸೊಪ್ಪುಗಳನ್ನು ಮೈಗೆ ಸುತ್ತಿ, ಶಿವನಾಮ ಸ್ಮರಿಸುತ್ತಾ, ಬಿದಿರಿನ ಅಂಡೆಗಳಲ್ಲಿ ಎಣ್ಣೆ ಸಹಿತ ದೊಂದಿಯೊಂದಿಗೆ ಮೊದಲು ಗುಹೆಗೆ ಇಳಿಯುತ್ತಾರೆ. ವಿಧಿ ವಿಧಾನ ಮುಗಿಸಿ ಗುಹೆಯಿಂದ ಮರಳಿದ ಬಳಿಕ, ಕೈ ದೀಪವನ್ನು ಹಿಡಿದ ಸ್ಥಾನಿಕರು ತಂತ್ರಿಗಳಿಗೆ ದಾರಿ ತೋರಿಸುತ್ತಾರೆ. ಸುಮಾರು ಒಂದೂವರೆ ತಾಸಿನ ಧಾರ್ಮಿಕ ವಿಧಿಯ ಬಳಿಕ ಭಕ್ತರಿಗೆ ವಿತರಿಸಲು ಮೃತ್ತಿಕಾ ಪ್ರಸಾದದೊಂದಿದೆ ಗುಹೆಯಿಂದ ಮರಳುತ್ತಾರೆ.