Last Updated:
ದಿನಕ್ಕೆ 15 ಟನ್ ಜೇನು ಸಂಸ್ಕರಣಾ ಘಟಕಕ್ಕೆ ಜೇನಿನ ಅನಿವಾರ್ಯತೆಯೂ ಇದೆ. ಮೊದಲಿಗೆ ರಾಜ್ಯದ ನಾಲ್ಕೈದು ಜಿಲ್ಲೆಗಳಿಂದ ಜೇನು ಸಂಗ್ರಹಿಸುವ ಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯೂ ಹೆಚ್ಚಾಗಲಿದೆ. ಜೇನು ಸಂಗ್ರಹದ ಜೊತೆಗೆ ಜೇನು ಪೆಟ್ಟಿಗೆಗಳ ನಿರ್ವಹಣೆಗೂ ಇದೀಗ ಸಂಸ್ಥೆ ಮುಂದಾಗಿದೆ.
ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ಜೇನಿಗೆ(Honey) ಮಾರುಕಟ್ಟೆಯಲ್ಲಿ(Market) ಉತ್ತಮ ಧಾರಣೆ ದೊರೆಯುತ್ತಿದೆ. ಈ ಕಾರಣಕ್ಕಾಗಿ ಜೇನು ಕೃಷಿಯಲ್ಲಿ ಇಂದು ಎಲ್ಲಾ ಮನೆಗಳಲ್ಲೂ, ತೋಟಗಳಲ್ಲೂ ಬೆಳೆಸಲಾಗುತ್ತಿದೆ. ಜೇನು ಕೃಷಿ(Honey Agriculture) ಮಾಡುವವರ ತನ್ನ ಹೆಚ್ಚಿನ ಸಮಯವನ್ನು ಜೇನು ಪೆಟ್ಟಿಗೆಯ ಜೊತೆ ವಿನಿಯೋಗಿಸಿಕೊಂಡಲ್ಲಿ ಮಾತ್ರ ಉತ್ತಮ ಇಳುವರಿಯನ್ನು ಪಡೆಯಬಹುದು. ಆದರೆ ಕೆಲವು ಕೃಷಿಕರು ತಮ್ಮ ತೋಟಗಳಲ್ಲಿ ಜೇನಿನ ಪೆಟ್ಟಿಗೆಯನ್ನಿಟ್ಟರೂ, ಅದರ ನಿರ್ವಹಣೆಗೆ ಬೇಕಾದ ಸಮಯ ಅವರ ಬಳಿ ಇರೋದಿಲ್ಲ. ಇಂಥ ಕೃಷಿಕರಿಗಾಗಿಯೇ ಸಂಸ್ಥೆಯೊಂದು ಜೇನು ನಿರ್ವಹಣೆ ಕಾಯಕಕ್ಕೆ ಮುಂದಾಗಿದೆ.
ಜೇನು ಬೆಳೆಗೆ ಹೆಚ್ಚಿನ ಒತ್ತು ನೀಡುವ ಉದ್ಧೇಶದಿಂದ ಆರಂಭಗೊಂಡ ಗ್ರಾಮಜನ್ಯ ಸಂಸ್ಥೆ ಇದೀಗ ಜೇನು ಪೆಟ್ಟಿಗೆಗಳ ನಿರ್ವಹಣೆಯ ವ್ಯವಸ್ಥೆಯೂ ಮುಂದಾಗಿದೆ. ಈಗಾಗಲೇ ಸಂಸ್ಥೆಯು ದಕ್ಣಿಣ ಭಾರತದ ಏಕೈಕ ದೊಡ್ಡ ಜೇನು ಶೇಖರಣಾ ಮತ್ತು ಸಂಸ್ಕರಣಾ ಘಟಕದ ಕಾಮಗಾರಿಯನ್ನು ಆರಂಭಿಸಿ ಇದೀಗ ಉದ್ಘಾಟನೆಗಾಗಿ ಕಾಯುತ್ತಿದೆ. ದಿನಕ್ಕೆ 15 ಟನ್ ಜೇನು ಸಂಸ್ಕರಣಾ ಘಟಕಕ್ಕೆ ಜೇನಿನ ಅನಿವಾರ್ಯತೆಯೂ ಇದೆ. ಮೊದಲಿಗೆ ರಾಜ್ಯದ ನಾಲ್ಕೈದು ಜಿಲ್ಲೆಗಳಿಂದ ಜೇನು ಸಂಗ್ರಹಿಸುವ ಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯೂ ಹೆಚ್ಚಾಗಲಿದೆ. ಜೇನು ಸಂಗ್ರಹದ ಜೊತೆಗೆ ಜೇನು ಪೆಟ್ಟಿಗೆಗಳ ನಿರ್ವಹಣೆಗೂ ಇದೀಗ ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ: Temple: ಕೇರಳದ ಪುರಾತನ ಮಧೂರು ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ!
ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ನಿರ್ವಹಣೆಯಿಲ್ಲದ ಸಾವಿರಾರು ಸಂಖ್ಯೆಯ ಜೇನು ಪೆಟ್ಟಿಗೆಗಳಿದ್ದು, ಇಂತಹ ಪೆಟ್ಟಿಗೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಸಂಸ್ಥೆ ಹೊತ್ತುಕೊಂಡಿದೆ. ಕೃಷಿಕರು ತಮ್ಮ ಕೃಷಿತೋಟಗಳ ಒಳಗೆ ಜೇನು ಪೆಟ್ಟಿಗಗಳನ್ನೆನೋ ಇಡುತ್ತಾರೆ. ಆದರೆ ಅವುಗಳ ನಿರ್ವಹಣೆಯತ್ತ ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹ ಜೇನು ಕುಟುಂಬಗಳ ಎಲ್ಲಾ ನಿರ್ವಹಣೆಯನ್ನು ಸಂಸ್ಥೆ ಮಾಡಲಿದ್ದು, ಆಸಕ್ತ ಕೃಷಿಕರು ಗ್ರಾಮಜನ್ಯದ ಶಾಖೆಗಳಿಗೆ ಮಾಹಿತಿ ನೀಡಬಹುದಾಗಿದೆ.
ನಿರ್ವಹಣೆಯ ವೆಚ್ಚವನ್ನು ಕೃಷಿಕ ಸಂಸ್ಥೆಗೆ ನೀಡಬೇಕಿದ್ದು, ಕೃಷಿಕನಿಗೆ ಸಿಕ್ಕಿದ ಜೇನನ್ನು ಮಾರಾಟ ಮಾಡಬೇಕು ಎಂದಾದಲ್ಲಿ ಸಂಸ್ಥೆಗೆ ನೀಡಬಹುದಾದ ಆಯ್ಕೆಯನ್ನೂ ಕೃಷಿಕನಿಗೆ ಸಂಸ್ಥೆ ನೀಡಲಿದೆ. ಈಗಾಗಲೇ ಈ ಕುರಿತ ಮಾತುಕತೆಗಳು ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಸಂಸ್ಥೆ ಜೇನಿನ ನಿರ್ವಹಣೆಯನ್ನು ವಹಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯೋಗವಾಗಿ ಜಿಲ್ಲೆಯ ಎಲ್ಲಾ ಜೇನು ಬೆಳೆಗಾರರನ್ನು ಸಂಪರ್ಕಿಸುವ ಮತ್ತು ತನ್ನ ಸಿಬ್ಬಂದಿಗಳಿಗೆ ಜೇನು ನಿರ್ವಹಣೆಯ ತರಬೇತಿಯನ್ನೂ ನೀಡಿದೆ.
ಯಾರಿಗೆ ಜೇನಿನ ಪೆಟ್ಟಿಗೆಗಳನ್ನು ನಿರ್ವಹಿಸಲು ಸಾಧ್ಯವಾಗೋದಿಲ್ವೋ, ಅಂತಹ ತೋಟಗಳಿಗೆ ಗ್ರಾಮಜನ್ಯದ ನುರಿತ ಸಿಬ್ಬಂದಿಗಳು ಬಂದು ಜೇನಿನ ಪೆಟ್ಟಿಗೆಯ ನಿರ್ವಹಣೆ ಮಾಡಲಿದ್ದಾರೆ. ಸಂಸ್ಥೆಯ ಈ ಹಿಸ ಯೋಜನೆ ಕೃಷಿಕರಿಗೆ ಒಳ್ಳೆಯ ಪ್ರಯೋಜನಕಾರಿಯಾಗಲಿದ್ದು, ಇದರಿಂದ ಜಿಲ್ಲೆಯಲ್ಲಿ ಜೇನಿನ ಉತ್ಪಾದನೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ.
Dakshina Kannada,Karnataka
March 31, 2025 4:30 PM IST