Dakshina Kannada: ತಮ್ಮದೇ ಹೆಸರಿನ ರಸ್ತೆ ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್ | Team India senior cricketer sunil gavaskar expressed happiness over the inauguration of road named after him

Dakshina Kannada: ತಮ್ಮದೇ ಹೆಸರಿನ ರಸ್ತೆ ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್ | Team India senior cricketer sunil gavaskar expressed happiness over the inauguration of road named after him

Last Updated:

ಗವಾಸ್ಕರ್ ಆಗಮನಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಸ್ಥಳೀಯ ಅಧಿಕಾರಿಗಳು ಮತ್ತು ಕ್ರಿಕೆಟ್ ಉತ್ಸಾಹಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಈ ಕ್ಷಣವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ಕಾಸರಗೋಡು: ಖ್ಯಾತ ಕ್ರಿಕೆಟಿಗ ಸುನೀಲ್ ಗವಾಸ್ಕರ್ (Sunil Gavaskar) ಅವರ ಗೌರವಾರ್ಥವಾಗಿ ಕೇರಳದ ಕಾಸರಗೋಡು ರಸ್ತೆಯೊಂದಕ್ಕೆ (Kasaragod Road) ಅವರ ಹೆಸರನ್ನು ಶುಕ್ರವಾರ ಮರು ನಾಮಕರಣ ಮಾಡಲಾಯಿತು. ಭಾರತ ಮತ್ತು ಬಾಂಗ್ಲಾದೇಶ (IND vs BAN) ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (ICC Champions Trophy 2025) ಪಂದ್ಯದ ಕಾಮೆಂಟರಿ ಮುಗಿಸಿ ದುಬೈನಿಂದ (Dubai) ಆಗಮಿಸಿದ ಗವಾಸ್ಕರ್ ಸ್ವತಃ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕ್ರಿಕೆಟ್‌ಗೆ ಗವಾಸ್ಕರ್ ಅಪಾರ ಕೊಡುಗೆ

ಕಾಸರಗೋಡು ಪುರಸಭೆಯು ‘ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂ ರಸ್ತೆ’ಯನ್ನು ‘ಸುನೀಲ್ ಗವಾಸ್ಕರ್ ಮುನ್ಸಿಪಲ್ ಸ್ಟೇಡಿಯಂ ರಸ್ತೆ’ ಎಂದು ಮರುನಾಮಕರಣ ಮಾಡಿದೆ. ಕ್ರಿಕೆಟ್‌ಗೆ ಅವರ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಐತಿಹಾಸಿಕ ಕ್ಷಣ

ಗವಾಸ್ಕರ್ ಆಗಮನಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಸ್ಥಳೀಯ ಅಧಿಕಾರಿಗಳು ಮತ್ತು ಕ್ರಿಕೆಟ್ ಉತ್ಸಾಹಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಈ ಕ್ಷಣವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ.

ಸುನೀಲ್ ಗವಾಸ್ಕರ್ ಅವರ ಉಪಸ್ಥಿತಿಯು ಜಿಲ್ಲೆಯ ಕ್ರಿಕೆಟ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ. ರಣಜಿ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಮಿಂಚಿದ ಆಟಗಾರರು ಸೇರಿದಂತೆ ಪ್ರತಿಭಾವಂತ ಆಟಗಾರರನ್ನು ಪೋಷಿಸುವಲ್ಲಿ ಈ ಜಿಲ್ಲೆಗೆ ಶ್ರೀಮಂತ ಇತಿಹಾಸವಿದೆ ಎನ್ನುವ ಮಾತು ಸಮಾರಂಭದಲ್ಲಿ ಉಪಸ್ಥಿತರಿದ್ದವರಿಂದ ಕೇಳಿಬಂದಿದೆ.

ಇದನ್ನೂ ಓದಿ: Karnataka: ರಾಜ್ಯ ಸರ್ಕಾರಕ್ಕೆ ‘ಗ್ಯಾರಂಟಿ’ ಸಂಕಷ್ಟ; ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ಯಾ ಸರ್ಕಾರ?

ಹಲವು ಯುವ ಕ್ರಿಕೆಟಿಗರಿಗೆ ಸ್ಫೂರ್ತಿ

ಭಾರತದ 1983 ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ವ್ಯಕ್ತಿಯಾಗಿದ್ದ ಗವಾಸ್ಕರ್, 10,000 ಟೆಸ್ಟ್ ರನ್‌ಗಳನ್ನು ದಾಟಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿವೃತ್ತಿಯ ನಂತರವೂ ಅವರು ಕಾಮೆಂಟೇಟರ್ ಮತ್ತು ಮಾರ್ಗದರ್ಶಕರಾಗಿ ಕ್ರೀಡೆಗೆ ಕೊಡುಗೆ ನೀಡುತ್ತಿದ್ದಾರೆ.

ಕಾಸರಗೋಡಿಗೆ ಅವರ ಭೇಟಿಯು ಈ ಭಾಗದ ಉದಯೋನ್ಮುಖ ಕ್ರಿಕೆಟಿಗರಿಗೆ ಮತ್ತಷ್ಟು ಸ್ಫೂರ್ತಿ ನೀಡಿದೆ. ಮೂಲತಃ ಮುಂಬೈಯವರಾದ ಸುನಿಲ್ ಗವಾಸ್ಕರ್ ಗೆ ಕಾಸರಗೋಡಿನ ನಾಗರಿಕರ ಪರವಾಗಿ ಪೌರ ಸನ್ಮಾನವನ್ನೂ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗವಾಸ್ಕರ್ ಕೇರಳಕ್ಕೆ ಸಂಬಂಧವೇ ಇಲ್ಲದ ನನ್ನ ಹೆಸರಿನಲ್ಲಿ ರಸ್ತೆ ನಾಮಕರಣ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ.