Dakshina Kannada: ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಯನೋತ್ಸವ- ದೇವಿಗೆ ಅರ್ಪಿಸಿದ ಮಲ್ಲಿಗೆ ರಾಶಿಯನ್ನು ನೋಡೋದೇ ಕಣ್ಣಿಗೆ ಹಬ್ಬ! | Dakshina Kannada: Shayanotsavam at Durgaparameshwari Temple

Dakshina Kannada: ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಯನೋತ್ಸವ- ದೇವಿಗೆ ಅರ್ಪಿಸಿದ ಮಲ್ಲಿಗೆ ರಾಶಿಯನ್ನು ನೋಡೋದೇ ಕಣ್ಣಿಗೆ ಹಬ್ಬ! | Dakshina Kannada: Shayanotsavam at Durgaparameshwari Temple

Last Updated:

ಭಕ್ತರಿಂದ ಸಂಗ್ರಹಿಸಲಾದ ಮಲ್ಲಿಗೆಯನ್ನು ದೇವಳದ ಒಳಾಂಗಣದ ಜಗುಲಿಯಲ್ಲಿ ಆರಂಭದಲ್ಲಿ ಜೋಡಿಸಲಾಗುತ್ತದೆ. ಬಳಿಕ ಎಲ್ಲಾ ಮಲ್ಲಿಗೆ ಗಳನ್ನು ಗರ್ಭಗುಡಿಗೆ ಕೊಂಡುಹೋಗಿ ದೇವಿಗೆ ಮಲ್ಲಿಗೆಗಳಿಂದ ಸಿಂಗಾರ ಮಾಡಲಾಗುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಶಕ್ತಿ ದೇವತೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ(Sri Durgaparameshwari Temple) ಶಯನೋತ್ಸವ ನಡೆದಿದೆ‌. ಸಹಸ್ರಾರು ಚೆಂಡು ಮಲ್ಲಿಗೆಯಿಂದ ದೇವಿಗೆ ಶಯನೋತ್ಸವ ನಡೆದಿದೆ. ಇಡೀ ಜಿಲ್ಲೆಯಲ್ಲಿ ಶಯನೋತ್ಸವಕ್ಕೆ ಅತೀ ಹೆಚ್ಚು ಮಲ್ಲಿಗೆ ಸಮರ್ಪಿತ ವಾಗುವ ಬಪ್ಪನಾಡು ಕ್ಷೇತ್ರದಲ್ಲಿ ಈ ಬಾರಿಯೂ ದಾಖಲೆ ಸಂಖ್ಯೆಯಲ್ಲಿ ಮಲ್ಲಿಗೆ ಹೂವು(Jasmine) ಸಮರ್ಪಣೆಯಾಗಿದೆ.

ಬಪ್ಪನಾಡು ದೇವಸ್ಥಾನದ ಶಯನೋತ್ಸವ ಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಾವಳಿ ಭಾಗದ ದೇವಳಗಳಲ್ಲೇ ಬಪ್ಪನಾಡು ದೇವಸ್ಥಾನದ ಶಯನೋತ್ಸವ ಬಹು ಅಪೂರ್ವವಾದದು. ಭಕ್ತರು ಶ್ರೀ ದೇವಿಗೆ ಅರ್ಪಿಸಿದ ಮಲ್ಲಿಗೆ ರಾಶಿಯನ್ನು ನೋಡೋದೇ ಕಣ್ಣಿಗೆ ಹಬ್ಬ. ಮಲ್ಲಿಗೆ ಪ್ರಿಯೆ ದುರ್ಗೆಗೆ ಭಕ್ತರು ಶ್ರದ್ಧಾ ಭಕ್ತಿಯಿಂದ ಅರ್ಪಿಸಿದ ಮಲ್ಲಿಗೆ ಹೂವನ್ನು ರಥೋತ್ಸವದ ದಿನ ಪ್ರಸಾದವಾಗಿ ಸ್ವೀಕರಿಸಿ ಮುಡಿಗೇರಿಸುತ್ತಾರೆ.

ಇದನ್ನೂ ಓದಿ: Mandya: ಮಹಿಳೆಯ ದೂರಿಗೆ ಇಡೀ ಗ್ರಾಮ ಸ್ವಚ್ಛ!

ಭಕ್ತರಿಂದ ಸಂಗ್ರಹಿಸಲಾದ ಮಲ್ಲಿಗೆಯನ್ನು ದೇವಳದ ಒಳಾಂಗಣದ ಜಗುಲಿಯಲ್ಲಿ ಆರಂಭದಲ್ಲಿ ಜೋಡಿಸಲಾಗುತ್ತದೆ. ಬಳಿಕ ಎಲ್ಲಾ ಮಲ್ಲಿಗೆ ಗಳನ್ನು ಗರ್ಭಗುಡಿಗೆ ಕೊಂಡುಹೋಗಿ ದೇವಿಗೆ ಮಲ್ಲಿಗೆಗಳಿಂದ ಸಿಂಗಾರ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಗರ್ಭ ಗುಡಿಯ ಒಳಗೆ ಸುಂಗದ ದ್ರವ್ಯ, ಫಲವಸ್ತು ಸಹಿತ ಶುಭ ದ್ರವ್ಯ, ಕೇಸರಿ ಮಿಶ್ರಿತ ಹಾಲು, ದೀಪಗಳನ್ನು ಇರಿಸಿ ಶ್ರೀ ಭೂತ‌ ಬಲಿ, ಪೀಠ ಪೂಜೆ, ಬಲಿ, ಅಂಕುರ ವಿಸರ್ಜನೆ, ಬಳಿಕ ಆಂಕುರ ಸ್ಥಾಪನೆ, ಕವಾಟ ಬಂಧನದ ಬಳಿಕ ಗರ್ಭ ಗುಡಿಯ ಬಾಗಿಲು, ದೇವಳದ ಮಹಾದ್ವಾರವನ್ನು ಮುಚ್ಚಲಾಗುತ್ತದೆ. ಮಾರನೇ ದಿನ ಬೆಳಗ್ಗೆ ಮಹಾದ್ವಾರ, ಗರ್ಭಗುಡಿಯ ಬಾಗಿಲು ತೆಗೆದಾಗ ಇಡೀ ದೇವಸ್ಥಾನವನ್ನು ಮಲ್ಲಿಗೆ ಹೂವಿನ ಸುಂಗಧ ಆವರಿಸಿರುತ್ತದೆ.

ಕೇವಲ ದಕ್ಷಿಣ ಕನ್ನಡ ,ಉಡುಪಿ ಜಿಲ್ಲೆಯ ಭಕ್ತರದಲ್ಲದೇ ದೂರ ಫ್ರಾನ್ಸ್, ದುಬೈ, ಮುಂಬಯಿ, ಬೆಂಗಳೂರು, ದೆಹಲಿ ಸಹಿತ ವಿದೇಶ, ಹೊರ ರಾಜ್ಯದಿಂದಲೂ ಕರಾವಳಿ ಮೂಲದ ಭಕ್ತರು ದೇವಿಯ ಮಲ್ಲಿಗೆ ಪ್ರಸಾದವನ್ನು ಸ್ವೀಕರಿಸಲು ಸರತಿ ಸಾಲಿನಲ್ಲಿ ನಿಲ್ಲೋದು ಬಪ್ಪನಾಡು ದುರ್ಗೆಯ ಕಾರಣಿಕತೆಗೆ ಇರುವ ಮಹತ್ವದ ಸಾಕ್ಷಿಯಾಗಿದೆ.