Last Updated:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇರುವಂತೆಯೇ ಪುತ್ತೂರಿನ ಬ್ರಹ್ಮರಥವನ್ನು ಸಿದ್ಧಪಡಿಸುವ ಜವಾಬ್ದಾರಿ ಕುಕ್ಕೆ ಸುಬ್ರಹ್ಮಣ್ಯದ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದ ಮೇಲಿದೆ.
ದಕ್ಷಿಣ ಕನ್ನಡ: ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ(Puttur Mahatobhara Mahalingeshwar Temple) ವಾರ್ಷಿಕ ಜಾತ್ರೋತ್ಸವಕ್ಕೆ ಮೊದಲು ದೇವರ ಬ್ರಹ್ಮರಥವನ್ನು ರಥದ ಕೊಠಡಿಯಿಂದ ಹೊರಗೆ ಎಳೆಯುವ ಪ್ರಕ್ರಿಯೆ ನಡೆಯುತ್ತದೆ. ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಬ್ರಹ್ಮರಥವನ್ನು(Brahma Ratha) ರಥಬೀದಿ ಬಳಿ ತರಲಾಗುತ್ತದೆ. ಬ್ರಹ್ಮರಥದಲ್ಲಿರುವ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಅಧಿಕೃತವಾಗಿ ವಾರ್ಷಿಕ ಜಾತ್ರೋತ್ಸವಕ್ಕೆ ಎಲ್ಲಾ ಸಿದ್ಧತೆಗಳನ್ನು ಆರಂಭಿಸಲಾಗುತ್ತದೆ. ಒಂದು ಬಾರಿ ರಥವನ್ನು ರಥಬೀದಿಗೆ ತಂದು ನಿಲ್ಲಿಸಿದ ತಕ್ಷಣ ಭಕ್ತಾಧಿಗಳಿಗೆ(Devotees) ಜಾತ್ರೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿತು ಎನ್ನುವ ಸೂಚನೆ ನೀಡುತ್ತದೆ. ಬ್ರಹ್ಮರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಬ್ರಹ್ಮರಥವನ್ನು ಕಟ್ಟುವ ಕೆಲಸ ಆರಂಭಗೊಳ್ಳುತ್ತದೆ.
ಇದನ್ನೂ ಓದಿ: Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲೊಬ್ಬ ಆಪತ್ಭಾಂದವ ಉರಗತಜ್ಞ!
ಬಳಿಕ ರಥಕ್ಕೆ ಗೋಪುರಾಕಾರಣ ಆಕೃತಿ, ಧ್ವಜಗಳು ಹೀಗೆ ರಥವನ್ನು ಅಲಂಕಾರಗೊಳಿಸುವ ಪ್ರಕ್ರಿಯೆಯು ರಥವನ್ನು ರಥದ ಕೊಠಡಿಯಿಂದ ಹೊರಗೆ ತಂದ ಬಳಿಕ ನಡೆಯುತ್ತದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇರುವಂತೆಯೇ ಪುತ್ತೂರಿನ ಬ್ರಹ್ಮರಥವನ್ನು ಸಿದ್ಧಪಡಿಸುವ ಜವಾಬ್ದಾರಿ ಕುಕ್ಕೆ ಸುಬ್ರಹ್ಮಣ್ಯದ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದ ಮೇಲಿದೆ. ಸುಬ್ರಹ್ಮಣ್ಯದ ರಥವನ್ನು ಕಟ್ಟುವ ಜನರೇ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥವನ್ನು ಕಟ್ಟಿ ಸಿದ್ಧಪಡಿಸುತ್ತಾರೆ.
ಏಪ್ರಿಲ್ 1 ರಂದು ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತ ನಡೆಯಲಿದ್ದು, ಏಪ್ರಿಲ್ 10 ರಿಂದ ಮಹಾಲಿಂಗೇಶ್ವರ ಸ್ವಾಮಿಯ ನಗರ ಸಂಚಾರ ನಡೆಯಲಿದೆ. ಏಪ್ರಿಲ್ 17 ರಂದು ದೇವರ ಬ್ರಹ್ಮರಥೋತ್ಸವ ನಡೆಯಲಿದ್ದು, ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ.
Dakshina Kannada,Karnataka
March 18, 2025 11:36 AM IST