Last Updated:
ಊರಿಗೆ ಬಂದ ಮಾರಿಯನ್ನು ಆಟಿ ಕಳಂಜ ಹೊಡೆದೋಡಿಸುತ್ತಾನೆ ಎನ್ನುವ ಆಶಯದೊಂದಿಗೆ ಆಟಿ ಕಳಂಜನನ್ನು ಮನೆಗೆ ಆಹ್ವಾನಿಸಿ ಹಣ, ಅಕ್ಕಿ, ತೆಂಗಿನಕಾಯಿಯನ್ನು ಕಾಣಿಕೆಯಾಗಿ ನೀಡುತ್ತಾರೆ. ಹಳ್ಳಿಗರು ಆಟಿ ಕಳಂಜನನ್ನು ಜಾನುವಾರುಗಳು, ಬೆಳೆ ಹಾಗೂ ಮನುಕುಲದ ಕಲ್ಯಾಣಕ್ಕಾಗಿ ಬರುವ ಚೇತನ ಎಂದೇ ನಂಬಿದ್ದಾರೆ.
ದಕ್ಷಿಣಕನ್ನಡ: ಕೇರಳ ಕರ್ನಾಟಕ ಗಡಿಭಾಗದಲ್ಲಿ ಹಲವು ಐತಿಹಾಸಿಕ ಸ್ಥಳಗಳಿವೆ. ಇಂಥಹ ಸ್ಥಳಗಳಲ್ಲಿ ಉಭಯ ರಾಜ್ಯಗಳ ರಕ್ಷಿತಾರಣ್ಯ ವಲಯದ ಸರಹದ್ದು ಚೆಂಡೆತ್ತಡ್ಕ ಬಯಲು ಎನ್ನುವ ಪ್ರದೇಶ ಹಲವು ರೀತಿಯ ಪ್ರಕೃತಿ ವಿಸ್ಮಯಗಳಿಂದ ಕೂಡಿದೆ. ಐತಿಹಾಸಿಕ ಹಿನ್ನೆಲೆಗಳಿಂದ ಕೂಡಿದ ಪ್ರಕೃತಿ ರಮಣೀಯ ಪ್ರದೇಶದ ಚೆಂಡೆತ್ತಡ್ಕದ ಜಾಂಬ್ರಿ ಗುಹೆ, ಪರಿಸರದ ಗುಡ್ಡ ಬೆಟ್ಟಗಳು, ಕಲ್ಲು ಬಂಡೆಗಳು ಒಂದೊಂದು ಕತೆ ಹೇಳುತ್ತಿವೆ.
ಜಾಂಬ್ರಿಯಲ್ಲಿ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಗುಹಾಯಾತ್ರೆ ಕೈಗೊಳ್ಳಲಾಗುತ್ತಿದೆ. ಇದರ ಪಕ್ಕದಲ್ಲಿರುವ ಕಳಂಜನ ಗುಂಡಿಯೂ ಪ್ರಕೃತಿ ವಿಸ್ಮಯದ ಇನ್ನೊಂದು ವಿಶೇಷತೆಯಾಗಿ ಗುರುತಿಸಿಕೊಂಡಿದೆ. ಸೂರ್ಯನ ಪ್ರಖರ ಬಿಸಿಲಿಗೂ ಈ ಗುಂಡಿಯೊಳಗಿನ ನೀರು ಆವಿಯಾಗದೆ ಕಾಡು ಪ್ರಾಣಿಗಳಿಗೆ, ಸಣ್ಣ ಪುಟ್ಟ ಜಂತುಗಳಿಗೆ ವರ್ಷ ಪೂರ್ತಿ ನೀರುಣಿಸುತ್ತಿದೆ.
ಇದನ್ನೂ ಓದಿ: Mysuru: ಕಾಡಾನೆ ದಾಳಿಯಲ್ಲಿ ಮೃತಪಟ್ಟ ಅಧಿಕಾರಿಯ ಪ್ರತಿಮೆ ನಿರ್ಮಾಣ!
ಹಿಂದಿನ ಕಾಲದಲ್ಲಿ ಮಳೆ ಆರಂಭವಾದ ಬಳಿಕ ಒಂದೆರಡು ತಿಂಗಳು ಕಷ್ಟದ ಸಮಯವಾಗಿರುತ್ತಿತ್ತು. ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳು ಇರಲಿಲ್ಲ. ಹೀಗಾಗಿ ಯಾರಿಗೂ ಕೆಲಸವಿರಲಿಲ್ಲ. ಯಾರೂ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಂದು ಶುರುವಾಗಿ ಸಿಂಹ ಸಂಕ್ರಮಣ (ಸೋಣ ತಿಂಗಳು) ವರೆಗಿನ ದಿನ, ಆಷಾಢ ತಿಂಗಳಿನಲ್ಲಿ ಯಾವುದೇ ಶುಭ ಸಮಾರಂಭಗಳು, ಪೂಜೆ ಇತ್ಯಾದಿ ನಡೆಯುವುದಿಲ್ಲ. ಬೇಸಾಯದ ಅವಧಿ ಮುಗಿದ ದಿನಗಳಲ್ಲಿ ಆಹಾರದ ಕೊರತೆ, ಹವಾಮಾನದ ವೈಪರೀತ್ಯದಿಂದ ಶೀತ, ನೆಗಡಿ, ಜ್ವರ ಇತ್ಯಾದಿ ರೋಗ ರುಜಿನಗಳ ಕಾಟ.. ಹೀಗೆ ಒಟ್ಟಿನಲ್ಲಿ ಆಟಿ ಊರಿಗೆ ಮಾರಿ ಬರುವ ತಿಂಗಳು ಎಂದೇ ನಂಬಲಾಗಿತ್ತು. ಊರಿಗೆ ಬಂದ ಮಾರಿಯನ್ನು ಆಟಿ ಕಳಂಜ ಹೊಡೆದೋಡಿಸುತ್ತಾನೆ ಎನ್ನುವ ಆಶಯದೊಂದಿಗೆ ಆಟಿ ಕಳಂಜನನ್ನು ಮನೆಗೆ ಆಹ್ವಾನಿಸಿ ಹಣ, ಅಕ್ಕಿ, ತೆಂಗಿನಕಾಯಿಯನ್ನು ಕಾಣಿಕೆಯಾಗಿ ನೀಡುತ್ತಾರೆ. ಹಳ್ಳಿಗರು ಆಟಿ ಕಳಂಜನನ್ನು ಜಾನುವಾರುಗಳು, ಬೆಳೆ ಹಾಗೂ ಮನುಕುಲದ ಕಲ್ಯಾಣಕ್ಕಾಗಿ ಬರುವ ಚೇತನ ಎಂದೇ ನಂಬಿದ್ದಾರೆ.
ಕಳಂಜನ ಗುಂಡಿಯ ಹಿನ್ನೆಲೆ
ಆಟಿ ತಿಂಗಳಲ್ಲಿ ಮನೆ-ಮನೆಗಳಿಗೆ ತೆರಳಿ ಕಷ್ಟಗಳನ್ನು ಕಳೆಯುವ ಆಟಿ ಕಳಂಜ, ಕೈ ತುಂಬಾ ದಾನ-ಧರ್ಮಗಳನ್ನು ಪಡೆದು ಆಟಿ ತಿಂಗಳು ಕಳೆದು ಸಿಂಹ ಸಂಕ್ರಾಂತಿ (ಸೋಣ ತಿಂಗಳು) ಬಂದರೂ ಇದರ ಪರಿವೆಯೇ ಇಲ್ಲದೆ ಯಾತ್ರೆ ಮುಂದುವರಿಸುತ್ತಾನೆ. ಸಿಂಹ ಮಾಸದಲ್ಲಿ ಧರ್ಮ ಬೇಡುವುದು ನಿಷಿದ್ಧವಾದರೂ ಕಟ್ಟಳೆಯನ್ನು ಮೀರಿ ಸಿಂಹ ಮಾಸದ ಮೊದಲ ದಿನ ಚೆಂಡೆತ್ತಡ್ಕ ಜಾಂಬ್ರಿ ಗುಹೆ ಸಮೀಪದ ಪ್ರದೇಶಕ್ಕೆ ತಲುಪಿದಾಗ ಅದೃಶ್ಯನಾಗುತ್ತಾನೆ.
ಕಳಂಜ ಅದೃಶ್ಯವಾಗುವ ಸ್ಥಳವೇ ಕಳೆಂಜನ ಗುಂಡಿ ಎಂದೇ ಪ್ರಸಿದ್ದಿ ಪಡೆದಿದೆ. ಈ ಗುಂಡಿ ಸಮೀಪ, ಕಳಂಜ ತನ್ನ ಬಳಿ ಇದ್ದ ತಾಳೆ ಮರದ ಗರಿಗಳಿಂದ ನಿರ್ಮಿಸಿದ ಕೊಡೆಯನ್ನು ಊರಿದ ಸ್ಥಳವೆಂದು ನಂಬಲಾದ ಚಿಕ್ಕ ರಂಧ್ರವೂ ಈ ಸ್ಥಳದಲ್ಲಿದೆ.
Dakshina Kannada,Karnataka
March 05, 2025 6:00 PM IST