Dakshina Kannada: ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಪುತ್ತೂರಿನ ಬೀರಮಲೆ ಬೆಟ್ಟ! | Dakshina Kannada: Puttur’s Beeramale Hill is beckoning nature lovers!

Dakshina Kannada: ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಪುತ್ತೂರಿನ ಬೀರಮಲೆ ಬೆಟ್ಟ! | Dakshina Kannada: Puttur’s Beeramale Hill is beckoning nature lovers!

Last Updated:

ಮಹಾತ್ಮಾ ಗಾಂಧಿ ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಬೆಟ್ಟದ ತುದಿಯಲ್ಲಿ ಕುಳಿತು ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಿದ್ದರು. ಆ ನೆನಪಿಗಾಗಿ ಇಲ್ಲಿ ಗಾಂಧಿ ಮಂಟಪವನ್ನು ಸ್ಥಾಪಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸಮುದ್ರ ಮಟ್ಟದಿಂದ ಸುಮಾರು 1000 ಅಡಿಗೂ ಹೆಚ್ಚಿನ ಎತ್ತರದಲ್ಲಿರುವ, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿರುವ ಬೀರಮಲೆ ಬೆಟ್ಟ (Beeramale Hill) ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಾರದಲ್ಲಿರುವ ಪ್ರಕೃತಿ ವೀಕ್ಷಣೆಯ ತಾಣ. ಮಾಣಿ-ಮೈಸೂರು ಹೆದ್ದಾರಿಯ ದರ್ಬೆ ಎಂಬಲ್ಲಿಂದ ಕೂಗಳತೆಯ ದೂರದಲ್ಲಿರುವ ಈ ಬೆಟ್ಟವನ್ನು ಒಮ್ಮೆ ಹತ್ತಿ ನೋಡಿದಲ್ಲಿ ಇಡೀ ಪುತ್ತೂರು ನಗರದ(Puttur City) ದರ್ಶನವಾಗುತ್ತೆ. ಪುಂಡ-ಪೋಕರಿಗಳ ಮಜಾ ತಾಣವಾಗಿದ್ದ ಈ ಬೆಟ್ಟವನ್ನು ಅಭಿವೃದ್ಧಿಪಡಿಸಲು ಪ್ರಗತಿ ಕಾರ್ಯಗಳು ಸಾಗುತ್ತಿವೆ.

ಇದನ್ನೂ ಓದಿ: Belagavi: ಯಲ್ಲಮ್ಮನ ಸನ್ನಿಧಿಯಲ್ಲಿ ಹಸಿರು ಬಳೆಗಳ ಕಲರವ- ಧರ್ಮಕ್ಕೆ ಅಡ್ಡಿಯಾಗದ ಬಳೆಗಳ ಹಬ್ಬ!

ಪ್ರಕೃತಿ ಪ್ರಿಯರನ್ನು ಸೆಳೆಯಬೇಕು ಎನ್ನುವ ಕಾರಣಕ್ಕೆ, ಈ ಬೆಟ್ಟದ ಮೇಲೆ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿಯಲು ವ್ಯವಸ್ಥೆಯನ್ನೂ ಮಾಡಲಾಗಿದೆ. ಮಹಾತ್ಮಾ ಗಾಂಧಿ ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಬೆಟ್ಟದ ತುದಿಯಲ್ಲಿ ಕುಳಿತು ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಿದ್ದರು. ಆ ನೆನಪಿಗಾಗಿ ಇಲ್ಲಿ ಗಾಂಧಿ ಮಂಟಪವನ್ನು ಸ್ಥಾಪಿಸಲಾಗಿದೆ. ಜನರನ್ನು ಸೆಳೆಯಬೇಕು ಎನ್ನುವ ಕಾರಣಕ್ಕೆ ಅರಣ್ಯ ಇಲಾಖೆ ವತಿಯಿಂದ ಸಾಲು ಮರ ತಿಮ್ಮಕ್ಕ ಉದ್ಯಾನವನವನ್ನೂ ನಿರ್ಮಿಸಲಾಗಿದೆ.

ಇದೀಗ ಮತ್ತೆ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಶಾಸಕ ಅಶೋಕ್ ಕುಮಾರ್ ರೈ ಮುತುವರ್ಜಿ ವಹಿಸಿದ್ದಾರೆ. ಬೆಟ್ಟದ ಸುತ್ತ ವಿದ್ಯುತ್ ದೀಪಾಲಂಕಾರ, ಸ್ಪಾಟ್ ಲೈಟ್, ಪ್ರಕೃತಿ ವೀಕ್ಷಣಾ ಗೋಪುರ ಸೇರಿದಂತೆ ಹಲವು ವ್ಯವಸ್ಥೆಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಈ ಕಾಮಗಾರಿಗಳನ್ನು ಮುಗಿಸಿ, ಬೆಟ್ಟಕ್ಕೆ ಇನ್ನಷ್ಟು ವೀಕ್ಷಕರನ್ನು ಸೆಳೆಯುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.