Last Updated:
ಒಂದು ಕಡೆಯಲ್ಲಿ ದಟ್ಟ ಕಾಡುಗಳು ತುಂಬಿದ ಗಿರಿ-ಶಿಖರಗಳ ಮಧ್ಯೆಯಿಂದ ಹರಿದು ಬರುವ ಈ ಹೊಳೆ ಕೃಷಿತೋಟಗಳ ನಡುವೆ ಹರಿದು ತನ್ನ ಇಕ್ಕೆಲಗಳನ್ನೂ ಹರಿರಿನಿಂದ ಕಂಗೊಳಿಸುವಂತೆ ನೀರುಣಿಸಿದೆ.
ದಕ್ಷಿಣ ಕನ್ನಡ: ಮಳೆಗಾಲದಲ್ಲಿ(Rainy Season) ಪ್ರಕೃತಿಯು(Nature) ಒಂದು ರೀತಿಯಾಗಿ ಕಂಡರೆ, ಬೇಸಿಗೆಯಲ್ಲಿ(Summer) ಅದು ಇನ್ನೊಂದು ರೀತಿಯಲ್ಲಿ ಆಕರ್ಷಿಸುತ್ತದೆ. ಪ್ರಕೃತಿಯ ನೈಜ ಸುಂದರ ದೃಶ್ಯ ಕಾವ್ಯಗಳನ್ನು ಕೃತಕವಾಗಿ ನಿರ್ಮಿಸಲು ಎಷ್ಟೇ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡರೂ, ಅದು ನೂರು ಶೇಕಡಾ ಪೂರ್ಣಗೊಳ್ಳೋದು ಅನುಮಾನವೇ. ಇಲ್ಲೊಂದು ಪ್ರಕೃತಿಯ ಸೊಬಗನ್ನು ಸ್ವತಃ ಪ್ರಕೃತಿಯೇ ನಿರ್ಮಿಸಿಕೊಂಡಿದ್ದು, ಈ ಭಾಗದಿಂದ ಸಂಚರಿಸುವ ಜನ ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯದೆ ತೆರಳುವವರು ವಿರಳ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪವಿರುವ ಕೊಡಂಗಾಯಿ ಎನ್ನುವ ಸ್ಥಳ. ಕಣ್ಣು ಹಾಯಿಸಿದ ಉದ್ದಕ್ಕೂ ಹಸಿರು. ಹಸಿರಿನ ಕೊನೆಯಲ್ಲಿ ದಟ್ಟ ಕಾಡುಗಳಿರುವ ಗುಡ್ಡಗಳ ಸಾಲು, ಈ ಹಸಿರಿನ ಮಧ್ಯೆ ಹರಿಯುವ ಹಸಿರಾದ ನೀರು. ಇದು ಕೊಡಂಗಾಯಿ ಎನ್ನುವ ಸ್ಥಳದ ಟ್ರೇಡ್ ಮಾರ್ಕ್.
ಇದನ್ನೂ ಓದಿ: Belagavi: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಸಿಂಹಿಣಿಯ ಸೇರ್ಪಡೆ
ವಿಟ್ಲ- ಸಾಲೆತ್ತೂರು ಸಂಪರ್ಕಿಸುವ ರಸ್ತೆಯ ಮಧ್ಯೆ ಬರುವಂತಹ ಕಿರು ಸೇತುವೆಯ ಇಕ್ಕೆಲಗಳ ಸೊಬಗಿರುವ ಊರಿದು. ಒಂದು ಕಡೆಯಲ್ಲಿ ದಟ್ಟ ಕಾಡುಗಳು ತುಂಬಿದ ಗಿರಿ-ಶಿಖರಗಳ ಮಧ್ಯೆಯಿಂದ ಹರಿದು ಬರುವ ಈ ಹೊಳೆ ಕೃಷಿತೋಟಗಳ ನಡುವೆ ಹರಿದು ತನ್ನ ಇಕ್ಕೆಲಗಳನ್ನೂ ಹರಿರಿನಿಂದ ಕಂಗೊಳಿಸುವಂತೆ ನೀರುಣಿಸಿದೆ. ಈ ಹಸಿರು ರಾಶಿಗಳ ಇನ್ನೊಂದು ಭಾಗದಲ್ಲಿ ಒಣಗಿದ ಭತ್ತದ ಗದ್ದೆ, ಗದ್ದೆಯ ಮಧ್ಯೆಯೊಂದು ದೈವಗಳ ಸ್ಥಾನ.
ಇಲ್ಲಿನ ಪ್ರಕೃತಿಯ ಸೊಬಗಿಗೆ ಮನಸೋಲದೆ ಇರುವವರು ವಿರಳವೇ. ಇದೇ ಕಾರಣಕ್ಕೆ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಒಂದು ಘಳಿಗೆ ಈ ಕಿರು ಸೇತುವೆಯ ಮೇಲೆ ನಿಂತು ಎರಡೂ ಭಾಗದ ಪ್ರಕೃತಿಯ ಸೌಂದರ್ಯವನ್ನು ಸವಿದು ಹೋಗುತ್ತಾರೆ. ಹಲವು ಚಿತ್ರತಂಡಗಳೂ ಈ ಸ್ಥಳದಲ್ಲಿ ಚಿತ್ರಕ್ಕೆ ಬೇಕಾದ ಹಾಡುಗಳ ಚಿತ್ರೀಕರಣ ಹಾಗೂ ಇತರ ಸೀನ್ಗಳನ್ನ ಇದೇ ಜಾಗದಲ್ಲಿ ಚಿತ್ರೀಕರಿಸಿವೆ. ಪ್ರಕೃತಿಯಲ್ಲಿ ಯಾವುದೇ ವ್ಯತ್ಯಾಸಗಳನ್ನು ಮಾಡದೇ, ನೈಜವಾಗಿ ಈ ಪ್ರಕೃತಿಯ ದೃಶ್ಯ ವೈಭವವನ್ನು ಇಂದಿಗೂ ಕಾಯ್ದುಕೊಂಡು ಬರಲಾಗಿದೆ.
Dakshina Kannada,Karnataka
April 03, 2025 1:13 PM IST