Dakshina Kannada: ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಪುತ್ತೂರಿನ “ಜ್ಞಾನದೀಪಾರ್ಪಣಂ” ಕಾರ್ಯಕ್ರಮ! |A Special Program at Vivenkananda English Medium School Puttur Dakshina Kannada

Dakshina Kannada: ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಪುತ್ತೂರಿನ “ಜ್ಞಾನದೀಪಾರ್ಪಣಂ” ಕಾರ್ಯಕ್ರಮ! |A Special Program at Vivenkananda English Medium School Puttur Dakshina Kannada


Last Updated:

ತಂದೆ-ತಾಯಿಯನ್ನು ಕೂರಿಸಿ ಹರಿವಾಣದಲ್ಲಿ ಅವರ ಪಾದಗಳನ್ನು ಮಕ್ಕಳು ತೊಳೆದು, ಅರಿಶಿನ, ಕುಂಕುಮಗಳನ್ನು ಪಾದಗಳಿಗೆ ಹಚ್ಚಿ, ಪುಷ್ಪವನ್ನು ಪಾದಗಳಿಗೆ ಅರ್ಪಿಸಿ, ಬಳಿಕ ಆರತಿ ಬೆಳಗಿದರು. ಮಕ್ಕಳ ತಲೆಗೆ ಅಕ್ಷತೆ ಹಾಕುವ ಮೂಲಕ ಪೋಷಕರು ಆಶೀರ್ವದಿಸಿದರು.

X

ವಿಡಿಯೋ

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಅಲ್ಲಿ ತಂದೆ-ತಾಯಿಗೆ(Father-Mother) ಮಕ್ಕಳು(Children) ಯಾವ ರೀತಿಯಲ್ಲಿ ವಿಧೇಯರಾಗಿರಬೇಕು, ಜತೆಗೆ ತಾಯಿ-ಮಗಳ ಸಂಬಂಧ, ತಂದೆ-ಮಗಳ ಸಂಬಂಧ, ಭಾವುಕ ಕ್ಷಣ, ನೆರೆದಿದ್ದ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಭರಿಸುವ ದೃಶ್ಯಗಳು ಕಂಡು ಬಂದಿದ್ದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ(Vivenkananda English Medium School). ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಪ್ರಥಮವಾಗಿ ದೀಪ ಪ್ರದಾನ “ಜ್ಞಾನದೀಪಾರ್ಪಣಂ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹತ್ತನೇ ತರಗತಿ ಮಕ್ಕಳು ಹಾಗೂ ಅವರ ಪೋಷಕರಿಗಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಪೋಷಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಭಾರತಮಾತೆ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅತಿಥಿಗಳು ಪುಷ್ಪಾರ್ಚನೆ ಸಲ್ಲಿಸಿದರು. ಆ ಬಳಿಕ ಸಭಾಂಗಣದ ತುಂಬಾ ಕಂಡುಬಂತು ಭಾವುಕ ಕ್ಷಣಗಳ ದೃಶ್ಯಗಳು. ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಪೋಷಕರ ಜತೆ ತಾಯಿ ಭಾರತಮಾತೆಗೆ ಹಣತೆಯ ದೀಪ ಇಟ್ಟರು. ತಂದೆ-ತಾಯಿಯನ್ನು ಕೂರಿಸಿ ಹರಿವಾಣದಲ್ಲಿ ಅವರ ಪಾದಗಳನ್ನು ಮಕ್ಕಳು ತೊಳೆದು, ಅರಿಶಿನ, ಕುಂಕುಮಗಳನ್ನು ಪಾದಗಳಿಗೆ ಹಚ್ಚಿ, ಪುಷ್ಪವನ್ನು ಪಾದಗಳಿಗೆ ಅರ್ಪಿಸಿ, ಬಳಿಕ ಆರತಿ ಬೆಳಗಿದರು. ಮಕ್ಕಳ ತಲೆಗೆ ಅಕ್ಷತೆ ಹಾಕುವ ಮೂಲಕ ಪೋಷಕರು ಆಶೀರ್ವದಿಸಿದರು. ಪೋಷಕರು ಹಾಗೂ ಮಕ್ಕಳು ಪರಸ್ಪರ ಸಿಹಿತಿಂಡಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಇಡೀ ಸಭಾಸದನದಲ್ಲಿ ಆಸೀನರಾದ ವಿದ್ಯಾರ್ಥಿಗಳು ಸಹಿತ ಪೋಷಕರ ಕಣ್ಣಂಚಿನಲ್ಲಿ ನೀರು ಬಂದು ಭಾವುಕ ಕ್ಷಣದತ್ತ ಜಾರಿದರು.

ಇದನ್ನೂ ಓದಿ: Holi Festival: ಹೋಳಿ ರಂಗು- ಅವಳಿ ನಗರದಲ್ಲಿ ಹಲಗೆ ಮಾರಾಟ ಬಲು ಜೋರು!

ಬಳಿಕ ಹತ್ತನೇ ತರಗತಿ ವಿದ್ಯಾರ್ಥಿಗಳು 9 ನೇ ತರಗತಿ ವಿದ್ಯಾರ್ಥಿಗಳಿಗೆ ದೀಪಪ್ರದಾನ ಮಾಡಿದರು. ಪುರೋಹಿತರಾದ ದಾಮೋದರ ಶರ್ಮ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಪೋಷಕರ ಜತೆ ಮಕ್ಕಳು ಹೇಗಿರಬೇಕು, ಶಿಕ್ಷಕರ ಜತೆ ಹೇಗಿರಬೇಕು ಎಂಬ ಬಗೆಗಿನ ಅವರ ಒಂದೊಂದು ಮಾತುಗಳು ಒಂದು ಕ್ಷಣ ಪೋಷಕರು ಸಹಿತ ಮಕ್ಕಳ ಕಣ್ಣಿನಲ್ಲಿ ನೀರು ಭರಿಸಿತು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಶಾಲೆಗೆ ಹೋಗುವ ಟೆನ್ಷನ್, ಪೋಷಕರಿಗೆ ಮಕ್ಕಳನ್ನು ಹೊರಡಿಸೋ ಟೆನ್ಷನ್.

ಈ ಮಧ್ಯೆ ಸಂಸ್ಕಾರ, ಸಂಪ್ರದಾಯಗಳು ಮರೆತು ಹೋದ ಕಾರಣ ಈ ಸಂಸ್ಕಾರಗಳನ್ನು ಶಾಲೆಯಲ್ಲೇ ನಿರ್ವಹಿಸಲು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ‌ ಪೋಷಕರಿಗೆ ಅವಕಾಶವನ್ನು ನೀಡಿತ್ತು. ಭಾರತೀಯ ಶಿಕ್ಷಣದ ಸಂಸ್ಕಾರವನ್ನು ಸ್ವತಃ ಅನುಭವಿಸಿದ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ತುಂಬಾ ಭಾವುಕರಾಗಿಯೇ ಉಳಿದರು.