Last Updated:
ಬಂಟಾಜೆ ರಕ್ಷಿತಾರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟು ಪ್ರದೇಶದಲ್ಲಿ ಕಾಣೋದು ಮುಳಿಹುಲ್ಲಿನ ಬಯಲುಗಳಷ್ಟೇ.
ದಕ್ಷಿಣ ಕನ್ನಡ: ಸುಮಾರು 50 ವರ್ಷಗಳ ಹಿಂದಿನ ಸಾಮಾನ್ಯನ ಮನೆಯ ದೃಶ್ಯವನ್ನೊಮ್ಮೆ ಮೆಲುಕು ಹಾಕಿದ ಕಣ್ಣಿಗೆ ಕಾಣೋದು ಮುಳಿಹುಲ್ಲುಗಳ ಮನೆಗಳೇ(Homes). ಆರ್.ಸಿ.ಸಿ, ಹೆಂಚು ಹಾಕಲು ಸಾಮರ್ಥ್ಯವಿಲ್ಲದ ಬಡವರ(Poor People) ಪಾಲಿಗೆ ಆಗಿನ ಸಂದರ್ಭದಲ್ಲಿ ಬೇಕಾಗಿದ್ದು ತೆಂಗಿನ ಸೋಗೆ ಮತ್ತು ಮುಳಿಹುಳ್ಳುಗಳೇ. ತೆಂಗಿನ ಸೋಗೆಯನ್ನು ಯಾವುದಾದರೂ ಕೃಷಿತೋಟದಿಂದ(Agriculture Land) ಪಡೆಯಬಹುದಾಗಿದ್ದರೂ, ಮುಳಿಹುಲ್ಲು ಬೆಳೆಯುವ ಪ್ರದೇಶಕ್ಕಾಗಿ ಅಂದು ಹುಡುಕಾಡಬೇಕಾದ ಪರಿಸ್ಥಿತಿಯಿತ್ತು.
ಮುಳಿಹುಲ್ಲು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ನೈಸರ್ಗಿಕವಾಗಿ ಬೆಳೆಯುತ್ತವೆ. ಇಂಥಹ ಪ್ರದೇಶದಲ್ಲಿ ದಕ್ಷಿಣ ಕನ್ನಡ ಮತ್ತು ಕೇರಳದ ಗಡಿಭಾಗವಾದ ಪಾಣಾಜೆಯ ಚೆಂಡೆತ್ತಡ್ಕ ಬಯಲೂ ಒಂದು. ಬಂಟಾಜೆ ರಕ್ಷಿತಾರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟು ಪ್ರದೇಶದಲ್ಲಿ ಕಾಣೋದು ಮುಳಿಹುಲ್ಲಿನ ಬಯಲುಗಳಷ್ಟೇ. ಇತ್ತೀಚಿನ ಕೆಲವು ವರ್ಷಗಳವರೆಗೂ ಈ ಪ್ರದೇಶದಿಂದ ಜನ ಮುಳಿಹುಲ್ಲನ್ನು ಸಂಗ್ರಹಿಸಿ ತಮ್ಮ ದನದ ಕೊಟ್ಟಿಗೆಗೋ, ಅಥವಾ ಇತರ ಕೆಲಸಕ್ಕೋ ಉಪಯೋಗಿಸುತ್ತಿದ್ದರು. ಅತ್ಯಂತ ಹುಲುಸಾಗಿ ಬೆಳೆಯುವ ಈ ಹುಲ್ಲುಗಳು ಚೆಂಡೆತ್ತಡ್ಕ ಬಯಲು ಪ್ರದೇಶದ ಅಂದವನ್ನು ದುಪ್ಪಟ್ಟು ಮಾಡಿವೆ. ದೂರದಿಂದ ಕಾಣುವ ಹಸಿರು ಗಿಡ-ಮರಗಳ ನಡುವೆ ಒಣಗಿ ಕಂದು ಬಣ್ಣಕ್ಕೆ ತಿರುಗಿದ ಮುಳಿಹುಲ್ಲುಗಳನ್ನು ನೋಡೋದೇ ಕಣ್ಣಿಗೆ ಒಂದು ರೀತಿಯ ಹಬ್ಬ.
ಇದನ್ನೂ ಓದಿ: Chamarajanagara: 20 ದಿನಗಳಲ್ಲಿ ಕೋಟಿ ಕೋಟಿ ಒಡೆಯನಾದ ಮಲೆ ಮಹದೇಶ್ವರ!
ಹೆಂಚಿಗೆ ಪರ್ಯಾಯವಾಗಿ ಮುಳಿಹುಲ್ಲನ್ನು ಬಳಸುತ್ತಿದ್ದ ಸಂದರ್ಭದಲ್ಲಿ ಲಾರಿಗಟ್ಟಲೇ ಲೋಡ್ ಹುಲ್ಲನ್ನು ಇಲ್ಲಿಂದ ಸಾಗಿಸಲಾಗುತ್ತಿತ್ತು. ಪಾಣಾಜೆ ಮತ್ತು ಪಕ್ಕದ ಕೇರಳ ರಾಜ್ಯಕ್ಕೆ ಸಂಬಂಧಪಟ್ಟ ಸ್ಥಳೀಯರು ಈ ಮುಳಿಹುಲ್ಲುಗಳನ್ನು ಸಾಗಿಸುತ್ತಿದ್ದರು. ಉರಿ ಬಿಸಿಲಿನಲ್ಲೂ ಈ ಹುಲ್ಲುಗಳು ಕಾಡ್ಗಿಚ್ಚಿಗೆ ಬಲಿಯಾದ ಘಟನೆಗಳೂ ಇಲ್ಲಿ ಅಪರೂಪವಾಗಿದೆ.
ಈ ಮುಳಿಹುಲ್ಲುಗಳ ಆಶ್ರಯದಲ್ಲೇ ಕೆಲವು ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳೂ ಬದುಕುತ್ತಿದ್ದು, ಇದರ ಒಳಗಡೆ ಅವಿತು ಕುಳಿತಲ್ಲಿ ತಕ್ಷಣಕ್ಕೆ ಹುಲ್ಲಿನ ಮಧ್ಯೆ ಇರುವ ಜೀವಿಗಳನ್ನು ಗುರುತಿಸಲೂ ಕೂಡಾ ಸಾಧ್ಯವಿಲ್ಲ.
Dakshina Kannada,Karnataka
March 15, 2025 10:59 AM IST