Last Updated:
ಜಾತ್ರೆಯ ಖುಷಿ, ಆಧ್ಯಾತ್ಮಿಕತೆಯ ಅನುಭೂತಿ ಎರಡನ್ನೂ ಅನುಭವಿಸಲು ಪುತ್ತೂರು ಜಾತ್ರೆಗೆ ಬರುವ ಜನ ಸ್ಯಾಕ್ಸೋಫೋನ್ ಮಾಂತ್ರಿಕ ಪುತ್ತೂರು ಗಣೇಶ್ ಅವರ ಭಕ್ತಿಭಾವತನ್ಮಯತೆಯ ಸೇವೆಗೆ ತಲೆತೂಗುತ್ತಾರೆ.
ದಕ್ಷಿಣ ಕನ್ನಡ: ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(Dakshina Kannada District) ಅತೀ ವಿಜೃಂಭಣೆಯಿಂದ ನಡೆಯುವ ಜಾತ್ರೆಗಳಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ(Puttur Mahalingeshwara Jatre) ಜಾತ್ರೆಯೂ ಒಂದು. ಸೀಮೆಯ ಅಧಿದೇವರು ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅಂದ್ರೆ ಅದು ಹತ್ತೂರಿಗೂ ಹಬ್ಬದ ವಾತವರಣ. ವಾರಕ್ಕೂ ಅಧಿಕ ದಿನಗಳ ನಡೆಯುವ ಜಾತ್ರೆಯಲ್ಲಿ ಎಲ್ಲವೂ ವಿಶೇಷವೇ. ಸಾಕ್ಷಾತ್ ಮಹಾದೇವನೇ ದೇವಳ ಬಿಟ್ಟು ಪೇಟೆ ಸವಾರಿ ಮಾಡೋದರಿಂದ ಜಗತ್ತಿನ ಅತೀ ವಿಶಿಷ್ಟವಾದ ಜಾತ್ರೆಗಳಲ್ಲಿ ಪುತ್ತೂರು ಜಾತ್ರೆಯೂ(Puttur Jatre) ಒಂದು ಎಂಬ ಪ್ರಸಿದ್ಧಿ ಪಡೆದಿದೆ. ಜಾತ್ರೆಯ ಖುಷಿ, ಆಧ್ಯಾತ್ಮಿಕತೆಯ ಅನುಭೂತಿ ಎರಡನ್ನೂ ಅನುಭವಿಸಲು ಪುತ್ತೂರು ಜಾತ್ರೆಗೆ ಬರುವ ಜನ ಸ್ಯಾಕ್ಸೋಫೋನ್ ಮಾಂತ್ರಿಕ ಪುತ್ತೂರು ಗಣೇಶ್ ಅವರ ಭಕ್ತಿಭಾವತನ್ಮಯತೆಯ ಸೇವೆಗೆ ತಲೆತೂಗುತ್ತಾರೆ.
ಇದನ್ನೂ ಓದಿ: Mysuru: ಮೈಸೂರು ಸಾರಿಗೆ ವಿಭಾಗದಿಂದ ವ್ಯವಸ್ಥಿತ ಪ್ರವಾಸಗಳ ಆಯೋಜನೆ!
ದೇವರ ಉತ್ಸವ ಮೂರ್ತಿಯ ಬಲಿ ಪ್ರಾಂಗಣದ ಸುತ್ತಲೂ ಬರುತ್ತಿದ್ದಂತೆಯೇ ಗಣೇಶ್ ಅವರ ಸ್ಯಾಕ್ಸಫೋನ್ನಲ್ಲಿ ದೇವರ ಸ್ತುತಿ ಹೊರಬರುತ್ತಿದ್ದರೆ ಅಲ್ಲಿ ದೇವಲೋಕವೇ ಸೃಷ್ಟಿಯಾದ ಅನುಭವವಾಗುತ್ತದೆ. ತನ್ನ ಹದಿಮೂರನೇಯ ವರ್ಷದಿಂದಲೇ ಸೀಮೆಯ ಒಡೆಯ ಮಹಾಲಿಂಗೇಶ್ವರನ ಸೇವೆ ಮಾಡಲು ಆರಂಭಿಸಿದ ಗಣೇಶ್, ಇಂದಿಗೂ ಅದೇ ಶ್ರದ್ಧೆಯಿಂದ ಸೇವೆ ಮಾಡುತ್ತಾರೆ. ಈ ಸೇವೆ ಗಣೇಶ್ ಅವರ ವಂಶಪಾರಂಪರ್ಯವಾಗಿ ಬಂದಿರುವಂತಹದು. ಗಣೇಶ್ ಅವರ ಅಜ್ಜ, ತಂದೆಯ ಬಳಿಕ ಗಣೇಶ್, ತನ್ನ ತಮ್ಮ, ಮಗನೊಂದಿಗೆ ಇಂದಿಗೂ ಮಹಾಲಿಂಗೇಶ್ವರನ ಉತ್ಸವ ಮೂರ್ತಿಯ ಬಲಿಯ ಸಂದರ್ಭದಲ್ಲಿ ಈ ಸೇವೆ ಮಾಡುತ್ತಾರೆ.
ಕೆಮ್ಮಿಂಜೆ ಸುಬ್ರಹ್ಮಣ್ಯ ದೇವರ ಷಷ್ಠಿ ಉತ್ಸವ ಸೇರಿದಂತೆ ದೇವಸ್ಥಾನಗಳಲ್ಲಿ ಸ್ಯಾಕ್ಸೋಫೋನ್ ಸೇವೆ ನೀಡುವ ಗಣೇಶ್ ಅವರು ಆಂಧ್ರ, ತಮಿಳುನಾಡಿನಲ್ಲಿ ಸುಪ್ರಸಿದ್ಧರು. ಅವರ ಸ್ಯಾಕ್ಸೊಫೋನ್ ವಾದನಕ್ಕೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಇನ್ನೂರಕ್ಕೂ ಅಧಿಕ ಶಿಷ್ಯರಿಗೆ ಗುರುವಾಗಿ ಕಲಾದಾನವನ್ನು ಗಣೇಶ್ ಮಾಡಿದ್ದಾರೆ. ಸಾಧನೆಯ ಉತ್ತುಂಗದಲ್ಲಿದ್ದರೂ ಪೊರದೊಡೆಯ ಮಹಾಲಿಂಗೇಶ್ವರನ ಮುಂದೆ ತನ್ನ ಸಾಧನೆ ಎಲ್ಲಾ ಆತನ ಪದತಳಕ್ಕೆ ಸೀಮಿತ ಅಂತಾ ಸೇವೆ ಮಾಡುತ್ತಿದ್ದಾರೆ ಗಣೇಶ್.
Dakshina Kannada,Karnataka
April 18, 2025 4:07 PM IST