Dasara: ಮೈಸೂರಿನಷ್ಟೇ ಫೇಮಸ್‌ ಇಲ್ಲಿನ ದಸರಾ! ರಂಗು ರಂಗಿನ ಹುಲಿಗಳ ಮೇಳದಲ್ಲಿ ಮಿಂಚಲಿದೆ ಕುಡ್ಲ!! | Mangaluru Dasara 2024 Kudroli 11 days celebration devotees rejoice | ರಾಜ್ಯ

Dasara: ಮೈಸೂರಿನಷ್ಟೇ ಫೇಮಸ್‌ ಇಲ್ಲಿನ ದಸರಾ! ರಂಗು ರಂಗಿನ ಹುಲಿಗಳ ಮೇಳದಲ್ಲಿ ಮಿಂಚಲಿದೆ ಕುಡ್ಲ!! | Mangaluru Dasara 2024 Kudroli 11 days celebration devotees rejoice | ರಾಜ್ಯ

Last Updated:

ಮಂಗಳೂರು ದಸರಾ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ 11 ದಿನಗಳ ಆಚರಣೆ, ಶಾರದಾಮಾತೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ, ಭವ್ಯ ಮೆರವಣಿಗೆ ಮತ್ತು ವಿಸರ್ಜನೆ ವಿಶೇಷ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು (Mangaluru) ನಗರದ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಸೋಮವಾರ (Monday) ವಿದ್ಯುಕ್ತ ಚಾಲನೆ (Opening) ದೊರಕಿತು. ನವರಾತ್ರಿಯ 10 ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ (Devoted) ಶಾರದಾಮಾತೆ, ಶ್ರೀಮಹಾಗಣಪತಿ ಮತ್ತು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.

ಅಸಂಖ್ಯಾತ ಭಕ್ತರ ಸೇವೆ, ಮಂಗಳೂರು ದಸರಾಕ್ಕೆ ಭರ್ಜರಿ ಚಾಲನೆ

ಕೇಂದ್ರದ ಮಾಜಿ ಸಚಿವ‌ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಮಂಗಳೂರು ರಾಮಕೃಷ್ಣ ಮಿಷನ್‌ನ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಸ್ಥೆ ಬ್ರಹ್ಮಕುಮಾರಿ ವಿಶ್ವೇಶ್ವರಿ ಜೀ ಚಾಲನೆ ನೀಡಿದರು. ಭವ್ಯ ಕಲಾಮಂಟಪದಲ್ಲಿ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಸಹಿತ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿ, ಸಿದ್ಧಿಧಾತ್ರಿಯರ ಮೂರ್ತಿಯನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು. ಅಸಂಖ್ಯಾತ ಭಕ್ತರು ದಸರಾ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಪುನೀತರಾದರು.

ಈ ಬಾರಿ ದಸರಾದ ವಿಶೇಷತೆಯೇನು?

ಈ ಬಾರಿ ತದಿಗೆ ಉಪರಿ ಬಂದಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ದಸರಾ ಪೂಜೆ ಸಂಪನ್ನವಾಗಿ ಎಲ್ಲಾ ಮೂರ್ತಿಗಳನ್ನು ಅಕ್ಟೋಬರ್ 2ರಂದು ಸಂಜೆ ವಿಸರ್ಜನಾ ಪೂಜೆ ನಡೆದು ನಗರದಾದ್ಯಂತ ಮೆರವಣಿಗೆ ನಡೆಯಲಿದೆ. ಮರುದಿನ ಬೆಳಗ್ಗೆ ಎಲ್ಲಾ ಮೂರ್ತಿಗಳನ್ನು ದೇವಸ್ಥಾನದ ಕಲ್ಯಾಣಿಯಲ್ಲಿ ವಿಸರ್ಜಿಸಲಾಗುತ್ತದೆ.

ಹೇಗೆ ನಡೆಯುತ್ತದೆ ಕುದ್ರೋಳಿಯ ದಸರಾ? ಏನೇನಿರಲಿದೆ ಸಂಭ್ರಮ?

ಇದನ್ನೂ ಓದಿ: Innovation: ಮಂಗಳೂರಿನ ವಿದ್ಯಾರ್ಥಿಗಳು ಮಾಡಿದ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರ! ಇನ್ಮೇಲೆ ರಸ್ತೆ ಸಮಸ್ಯೆ ಇರೋದಿಲ್ವಾ?!

ವಿಜಯದಶಮಿಯ ದಿನದಂದು ಸಂಜೆಯ ಹೊತ್ತು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. ಮಾರನೆಯ ದಿನ ಮುಂಜಾನೆಯ ಹೊತ್ತಿಗೆ ದೇವಸ್ಥಾನದ ಸಂಕೀರ್ಣದಲ್ಲಿರುವ ಪುಷ್ಕರಣಿಯಲ್ಲಿ ವಿಗ್ರಹಗಳ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ. ಪೂಜಿಸಿದಂತಹ ಎಲ್ಲಾ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ಮೆರವಣಿಗೆಯಲ್ಲಿ ಎಲ್ಲಾ ರೀತಿಯ ಕಲಾಪ್ರಕಾರಗಳು ಮೇಳೈಸುತ್ತವೆ. ಚಂಡೆ ವಾದನ ಬ್ಯಾಂಡ್, ವೈವಿಧ್ಯಮಯ ಅಲಂಕಾರಗಳು, ಜನಪದ ನೃತ್ಯ ಯಕ್ಷಗಾನ ಪಾತ್ರಗಳು, ಡೊಳ್ಳು ಕುಣಿತ, ಹುಲಿಕುಣಿತ ಹೀಗೆ ಎಲ್ಲಾ ಸಾಂಸ್ಕೃತಿಕ ಕಲೆಗಳನ್ನು ನಾವು ಈ ಮೆರವಣಿಗೆಯಲ್ಲಿ ಕಾಣಬಹುದು. ಮೆರವಣಿಗೆಯು ಕುದ್ರೋಳಿಯಿಂದ ಪ್ರಾರಂಭವಾಗಿ ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿಬರುತ್ತದೆ.