IND vs ENG: ಸಿರಾಜ್​ಗೆ ಕ್ಯಾಪ್ಟನ್ ಗಿಲ್ ನೀಡಿದ ಅದೊಂದು ಸಲಹೆ ಪಂದ್ಯವನ್ನ ಭಾರತದ ಕಡೆ ತಿರುಗಿಸಿತು! | Maan Le Yeh Leeds Nahi Hai: Shubman Gill s Leadership Proves Critics Wrong

IND vs ENG: ಸಿರಾಜ್​ಗೆ ಕ್ಯಾಪ್ಟನ್ ಗಿಲ್ ನೀಡಿದ ಅದೊಂದು ಸಲಹೆ ಪಂದ್ಯವನ್ನ ಭಾರತದ ಕಡೆ ತಿರುಗಿಸಿತು! | Maan Le Yeh Leeds Nahi Hai: Shubman Gill s Leadership Proves Critics Wrong

Last Updated:

ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತಿಮ ಸೆಷನ್​​ನಲ್ಲಿ, ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರಾಲಿ ಬ್ಯಾಟಿಂಗ್ ಮಾಡಲು ಬಂದರು. ಈ ಜೋಡಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದಿಂದ ಜಯವನ್ನು ಕಸಿದುಕೊಂಡಿತ್ತು. ಅದಕ್ಕಾಗಿಯೇ ಅವರ ವಿಕೆಟ್‌ಗಳನ್ನು ಪಡೆಯುವುದು ಬಹಳ ಮುಖ್ಯವಾಗಿತ್ತು.

ಶುಭ್​ಮನ್ ಗಿಲ್ಶುಭ್​ಮನ್ ಗಿಲ್
ಶುಭ್​ಮನ್ ಗಿಲ್

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಶುಭ್​ಮನ್ ಗಿಲ್ (Shubman Gill) ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವದ ಮೂಲಕ ಅದ್ಭುತವನ್ನೇ ಸೃಷ್ಟಿಸುತ್ತಿದ್ದಾರೆ. ಈ ಪಂದ್ಯದ ನಾಲ್ಕನೇ ದಿನದಂದು ಒಂದು ವಿಶೇಷ ದೃಶ್ಯ ಎಲ್ಲರ ಗಮನ ಸೆಳೆಯಿತು. ಗಿಲ್ ತಮ್ಮ ಅತ್ಯುತ್ತಮ ನಾಯಕತ್ವದಿಂದ ಪಂದ್ಯದಲ್ಲಿ ಭಾರತಕ್ಕೆ ಯಶಸ್ಸು ಸಿಗುವಂತೆ ಮಾಡಿದರು. ಶುಭ್​ಮನ್ ಗಿಲ್ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್‌ಗೆ (Mohammed Siraj) ನೀಡಿದ ಒಂದು ಸಲಹೆ 4ನೇ ದಿನವೇ ಭಾರತಕ್ಕೆ ಪ್ರಮುಖ ಯಶಸ್ಸು ಸಿಗುವಂತೆ ಮಾಡಿದರು.

ಸಿರಾಜ್​ಗೆ ಮಹತ್ವದ ಸಲಹೆ ನೀಡಿದ ಗಿಲ್

ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತಿಮ ಸೆಷನ್​​ನಲ್ಲಿ, ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರಾಲಿ ಬ್ಯಾಟಿಂಗ್ ಮಾಡಲು ಬಂದರು. ಈ ಜೋಡಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದಿಂದ ಜಯವನ್ನು ಕಸಿದುಕೊಂಡಿತ್ತು. ಅದಕ್ಕಾಗಿಯೇ ಅವರ ವಿಕೆಟ್‌ಗಳನ್ನು ಪಡೆಯುವುದು ಬಹಳ ಮುಖ್ಯವಾಗಿತ್ತು. ಈ ಸಮಯದಲ್ಲಿ, ನಾಯಕ ಶುಭ್​ಮನ್ ಗಿಲ್ ಅವರ ಮಾಸ್ಟರ್ ಸ್ಟ್ರೋಕ್ ಕೆಲಸ ಮಾಡಿತ್ತು. ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಇನ್ನಿಂಗ್ಸ್‌ನ ಎರಡನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಸಿರಾಜ್ ಫೀಲ್ಡರ್​ಗಳನ್ನ ಬದಲಾಯಿಸಲು ಬಯಸಿದ್ದರು. ಆದರೆ ಲೀಡ್ಸ್ ಪಿಚ್‌ನಂತಲ್ಲ ಎಂದು ಶುಭ್​ಮನ್ ಗಿಲ್ ಹೇಳಿದರು. ಗಿಲ್ ಅದೇ ಫೀಲ್ಡ್​ ಸೆಟ್ಟಿಂಗ್​​ನೊಂದಿಗೆ ಸಾಮಾನ್ಯ ಔಟ್ ಸ್ವಿಂಗ್ ಬಾಲ್ ಅನ್ನು ಬೌಲ್ ಮಾಡಲು ಹೇಳಿದರು. ಅದರಂತೆ ಸಿರಾಜ್ ಬೌಲಿಂಗ್ ಮಾಡಿದರು, ಕ್ರಾಲೆ ಔಟ್ ಆದರು.

ಭಾರತದ ಪರವಾಗಿ ತಿರುಗಿದ ಪಂದ್ಯ

ಶುಭ್​ಮನ್ ಗಿಲ್ ಸಿರಾಜ್ ಗೆ, ” ಕ್ಯಾಚ್ ಅಲ್ಲಿಗೆ ಹೋಗುತ್ತದೆ, ಅವನು ಮೊದಲು ಇದೇ ರೀತಿ ಔಟ್ ಆಗಿದ್ದಾನೆ. ನನ್ನನ್ನು ನಂಬಿ, ಇದು ಲೀಡ್ಸ್ ವಿಕೆಟ್ ಅಲ್ಲ, ಕಾಮನ್ ಔಟ್​ಸ್ವಿಂಗ್ ಬೌಲಿಂಗ್ ಮಾಡಿ ” ಎಂದು ಹೇಳಿದರು. ಮೊಹಮ್ಮದ್ ಸಿರಾಜ್ ಶುಭ್​ಮನ್ ಗಿಲ್ ಅವರ ಮಾತುಗಳನ್ನು ಕೇಳಿ ಆಫ್-ಸ್ಟಂಪ್ ಬಳಿಯಿಂದ ಔಟ್-ಸ್ವಿಂಗಿಂಗ್ ಚೆಂಡನ್ನು ಎಸೆದರು. ಕ್ರಾಲಿ ಡ್ರೈವ್ ಮಾಡಲು ಪ್ರಯತ್ನಿಸಿದರು. ಚೆಂಡು ಕ್ರಾಲಿಯ ಬ್ಯಾಟ್‌ನ ಅಂಚಿಗೆ ತಗುಲಿ ನೇರವಾಗಿ ಸಾಯಿ ಸುದರ್ಶನ್ ಅವರ ಕೈ ಸೇರಿತು.

4ನೇ ದಿನವೇ ಇಂಗ್ಲೆಂಡ್​ಗೆ ಶಾಕ್

ಶುಭ್​ಮನ್ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಗಿಲ್ ಅವರ 161 ರನ್‌ಗಳ ಇನ್ನಿಂಗ್ಸ್‌ನ ಸಹಾಯದಿಂದ, ಭಾರತವು ಇಂಗ್ಲೆಂಡ್‌ಗೆ 608 ರನ್‌ಗಳ ಗುರಿಯನ್ನು ನೀಡಿತು. ನಾಲ್ಕನೇ ದಿನದ ಅಂತ್ಯಕ್ಕೆ, ಇಂಗ್ಲೆಂಡ್ 72 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಇನ್ನೂ 536 ರನ್‌ಗಳ ಅಗತ್ಯವಿತ್ತು. ಇದೀಗ 5ನೇ ದಿನ ಭಾರತ ಪೋಪ್ (24)​ ಹಾಗೂ ಬ್ರೂಕ್ (23) ವಿಕೆಟ್‌ಗಳನ್ನು ಪಡೆಯಬೇಕಾಗಿದೆ. ಮೊದಲ ದಿನ ಕ್ರಾಲೆ (0), ಜೋ ರೂಟ್ (6) ಹಾಗೂ ಬೆನ್ ಡಕೆಟ್ (25) ವಿಕೆಟ್​ ಪಡೆದಿತ್ತು.

ಭಾರತದ ಪರ ಆಕಾಶ್ ದೀಪ್ 4 ವಿಕೆಟ್ ಪಡೆದಿದ್ದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದಾರೆ. ಭಾರತದ ಗೆಲುವಿಗೆ ಇನ್ನು 5 ವಿಕೆಟ್ ಅಗತ್ಯವಿದೆ