203 ರನ್ಗಳ ಚೇಸಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಇಂದೂ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟರ್ ಕುಸಾಲ್ ಮೆಂಡಿಸ್ ಖಾತೆ ತೆರೆಯದೇ ಗೋಲ್ಡನ್ ಡಕ್ ಆದರು. ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ನಿಸ್ಸಾಂಕ ಹಾಗೂ ಕುಶಾಲ್ ಪೆರೆರಾ ಭಾರತೀಯ ಬೌಲರ್ಗಳನ್ನ ಬೆಂಡೆತ್ತಿದ್ದರು. ಇಬ್ಬರು 70 ಎಸೆತಗಳಲ್ಲಿ 127 ರನ್ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನತ್ತ ಕೊಂಡೊಯ್ಯತ್ತಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್ ಇಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಅಪಾಯಕಾರಿ ಜೋಡಿಯನ್ನ ಬ್ರೇಕ್ ಮಾಡಿ ಪಂದ್ಯದಲ್ಲಿ ಭಾರತ ಕಮ್ಬ್ಯಾಕ್ ಮಾಡುವಂತೆ ಮಾಡಿದರು.
ಕುಸಾಲ್ ಪರೆರಾ 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 58 ರನ್ಗಳಿಸಿ ಸ್ಟಂಪ್ ಔಟ್ ಆದರು. ಈ ಜೋಡಿ ಬ್ರೇಕ್ ಬಳಿಕ ಭಾರತ ಮೇಲುಗೈ ಸಾಧಿಸಿತು. ಪೆರೆರಾ ನಂತರ ಬಂದಂತಹ ಚರಿತ್ ಅಸಲಂಕಾ 5 ರನ್ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದರೆ, ಕಮಿಂದು ಮೆಂಡಿಸ್ 7 ಎಸೆತಗಳಲ್ಲಿ 3 ರನ್ಗಳಿಸಿ ಅರ್ಷದೀಪ್ ಬೌಲಿಂಗ್ನಲ್ಲಿ ಅಕ್ಷರ್ ಪಟೇಲ್ಗೆ ಕ್ಯಾಚ್ ನೀಡಿ ಔಟ್ ಆದರು.
ಮೊದಲ 4 ಎಸೆತಗಳಲ್ಲಿ ಅದ್ಭುತವಾಗಿ ಬೌಲ್ ಮಾಡಿ ಕೇವಲ 5 ರನ್ ಬಿಟ್ಟುಕೊಟ್ಟಿದ್ದ ರಾಣಾ ಕೊನೆಯ 2 ಎಸೆತಗಳಲ್ಲಿ 7 ರನ್ಗಳನ್ನ ಡಿಫೆಂಡ್ ಮಾಡಲು ವಿಫಲಾರದರು. ಶನಕ 5ನೇ ಎಸೆತದಲ್ಲಿ ಬೌಂಡರಿ ಹಾಗೂ 6ನೇ ಎಸೆತದಲ್ಲಿ 2 ರನ್ಗಳಿಸಿ ಪಂದ್ಯವನ್ನ ಟೈ ಮಾಡಲು ಯಶಸ್ವಿಯಾದರು.
ಶ್ರೀಲಂಕಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ಗಳಿಸಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ 7ಕ್ಕೆ1(1 ಓವರ್), ಅರ್ಷದೀಪ್ ಸಿಂಗ್ 46ಕ್ಕೆ1, ಹರ್ಷಿತ್ ರಾಣಾ 54ಕ್ಕೆ1, ಕುಲ್ದೀಪ್ ಯಾದವ್ 31ಕ್ಕೆ1, ವರುಣ್ ಚಕ್ರವರ್ತಿ 31ಕ್ಕೆ1 ವಿಕೆಟ್ ಪಡೆದರು.
ಸೂಪರ್ ಓವರ್ ಆರಂಭಿಸಿದ ಶ್ರೀಲಂಕಾ ಅರ್ಷದೀಪ್ ಸಿಂಗ್ ಎಸೆದ ಮೊದಲ ಎಸೆತದಲ್ಲೇ ಕುಸಾಲ್ ಪೆರೆರಾ ದೊಡ್ಡ ಎಸೆತಕ್ಕೆ ಕೈಹಾಕಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದರು. 2ನೇ ಎಸೆತದಲ್ಲಿ ಕಮಿಂಡು ಮೆಂಡಿಸ್ ಸಿಂಗಲ್ ತೆಗೆದುಕೊಂಡರೆ, 3ನೇ ಎಸೆತದಲ್ಲಿ ಡಾಟ್ ಮಾಡಿ ನಂತರ ವೈಡ್ ಎಸೆದರು. ಮೊದಲ ಮೂರು ಎಸೆತಗಳಲ್ಲಿ 2 ರನ್ ಬಿಟ್ಟುಕೊಟ್ಟ ಅರ್ಷದೀಪ್ 4ನೇ ಎಸೆತದಲ್ಲಿ ಡಾಟ್ ಮಾಡಿದರು. ಆದರೆ ಶನಕ ಬಾಲ್ ಗುರುತಿಸುವಲ್ಲಿ ವಿಫಲರಾದರು. ಚೆಂಡು ನೇರವಾಗಿ ಸಂಜು ಸ್ಯಾಮ್ಸನ್ ಕೈ ಸೇರಿತು. ಬೈ ರನ್ಗಾಗಿ ಓಡುವಾಗ ಸಂಜು ಸ್ಟಂಪ್ಗೆ ಅಪ್ಪಳಿಸಿದರು. ರನ್ ಔಟ್ ಆದರೂ, ಇತ್ತ ಅರ್ಷದೀಪ್ ಕ್ಯಾಚ್ಗಾಗಿ ಮನವಿ ಮಾಡಿ ಎಡವಟ್ಟು ಮಾಡಿಕೊಂಡರು.
ಅಂಪೈರ್ ತಕ್ಷಣ ಕ್ಯಾಚ್ ಔಟ್ ಎಂದು ತೀರ್ಪು ನೀಡಿದರು. ತಕ್ಷಣವೇ ಶನಕ ರಿವ್ಯೂವ್ ತೆಗೆದುಕೊಂಡರು. ರಿಪ್ಲೇನಲ್ಲಿ ಚೆಂಡು ಬ್ಯಾಟ್ಗೆ ತಾಗಿರಲಿಲ್ಲ. ಹಾಗಾಗಿ ಬಾಲ್ ಡೆಡ್ ಎಂದು ಘೋಷಿಸಿಲಾಯಿತು. ಹಾಗಾಗಿ ರನ್ಔಟ್ ವಾಪಸ್ ತೆಗೆದುಕೊಂಡು, ಮತ್ತೆ ಶನಕಾಗೆ ಬ್ಯಾಟ್ ಮಾಡಲು ಅವಕಾಶ ನೀಡಲಾಯಿತು. ಆದರೆ ಈ ಅವಕಾಶವನ್ನ ಶನಕ ಉಪಯೋಗಿಸಿಕೊಳ್ಳಲು ವಿಫಲರಾದರು. 5ನೇ ಎಸೆತದಲ್ಲಿ ಜೀತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನೂ 1 ಎಸೆತ ಇರುವಂತೆ ಶ್ರೀಲಂಕಾ ಸೂಪರ್ ಓವರ್ನಲ್ಲಿ ಆಲ್ಔಟ್ ಆಗಿ ಕೇವಲ 3 ರನ್ ಗುರಿ ನೀಡಿತು.
ಹಸರಂಗ ಎಸೆದ ಸೂಪರ್ ಓವರ್ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್ ಯಾದವ್ 3 ರನ್ ತೆಗೆದು ಭಾರತಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ಗಳಿಸಿತ್ತು. ಗೋಲ್ಡನ್ ಫಾರ್ಮ್ನಲ್ಲಿರುವ ಅಭಿಷೇಕ್ ಶರ್ಮಾ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 61, ತಿಲಕ್ ವರ್ಮಾ 34 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 49 ರನ್ ಸಂಜು ಸ್ಯಾಮ್ಸನ್ 23 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ಗಳ ಸಹಿತ 39 ರನ್ ಹಾಗೂ ಅಕ್ಷರ್ ಪಟೇಲ್ 15 ಎಸೆತಗಳಲ್ಲಿ ತಲಾ 1 ಬೌಂಡರಿ, 1ಸಿಕ್ಸರ್ ಸಹಿತ ಅಜೇಯ 21 ರನ್ಗಳಿ ತಂಡದ ಮೊತ್ತವನ್ನ 200ರ ಗಡಿದಾಟಿಸಿದ್ದರು. ಇನ್ನು ಗಿಲ್ (4), ಹಾರ್ದಿಕ್ ಪಾಂಡ್ಯ 2, ನಾಯಕ ಸೂರ್ಯಕುಮಾರ್ ಯಾದವ್ ಕೇವಲ 12 ರನ್ಗಳಿಗೆ ವಿಕೆಟ್ ಒಪ್ಪಿಸಿದ ನಿರಾಶೆ ಮೂಡಿಸಿದರು.
ಸೆಪ್ಟೆಂಬರ್ 28 ಶನಿವಾರ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ ಆಡಲಿದೆ. ಇದು ಈ ಟೂರ್ನಿಯಲ್ಲಿ ಎರಡೂ ತಂಡಗಳ 3ನೇ ಮುಖಾಮುಖಿಯಾಗಿದೆ. ಮೊದಲೆರಡು ಮುಖಾಮುಖಿಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿ ಜಯ ಸಾಧಿಸಿತ್ತು.
September 27, 2025 12:42 AM IST
IND vs SL: ಶ್ರೀಲಂಕಾ ವಿರುದ್ಧ ಸೂಪರ್ ಓವರ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ! ಸತತ 3ನೇ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶ