Last Updated:
ಎರಡೂ ಇನ್ನಿಂಗ್ಸ್ ಸೇರಿ 5 ಶತಕ ಸಿಡಿಸಿದ್ದ ಯುವ ಮತ್ತು ಹೊಸ ಆಟಗಾರರನ್ನು ಒಳಗೊಂಡ ಈ ತಂಡವು ಮೊದಲ ಪಂದ್ಯವನ್ನು ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೆಯ ದಿನ ನಿರೀಕ್ಷಿತ ಪ್ರದರ್ಶನ ತೋರದೆ ಸೋಲೊಪ್ಪಿಕೊಂಡಿದ್ದು, ಅಭಿಮಾನಿಗಳಿಗೆ ನಿರಾಶೆ ತರಿಸಿದೆ.
ನವದೆಹಲಿ: ಲೀಡ್ಸ್ ಟೆಸ್ಟ್ನಲ್ಲಿ(Leeds Test) ಟೀಮ್ ಇಂಡಿಯಾದ ಐದು ವಿಕೆಟ್ಗಳ ಸೋಲು ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ (Indian cricket Fans) ಆಘಾತ ತರಿಸಿದೆ. ಎರಡೂ ಇನ್ನಿಂಗ್ಸ್ ಸೇರಿ 5 ಶತಕ ಸಿಡಿಸಿದ್ದ ಯುವ ಮತ್ತು ಹೊಸ ಆಟಗಾರರನ್ನು ಒಳಗೊಂಡ ಈ ತಂಡವು ಮೊದಲ ಪಂದ್ಯವನ್ನು ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯವನ್ನು ಕಳೆದುಕೊಂಡ ನಂತರ, ಹಲವು ಪ್ರಶ್ನೆಗಳು ಉತ್ತರಗಳಿಗಾಗಿ ಕಾಯುತ್ತಿವೆ. ಪಂದ್ಯದ ನಂತರ ಕೆಲವು ಅಭಿಮಾನಿಗಳು ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ಶಮಿ ಅಂತಹ ಅನುಭವಿಗಳು ಇದ್ದಿದ್ರೆ ಈ ಪಂದ್ಯದಲ್ಲಿ ಭಾರತ ಸೋಲುತ್ತಿರಲಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.
ವಿರಾಟ್ ಕೊಹ್ಲಿಯಂತೆ ಉತ್ಸಾಹ ತುಂಬುವವರ ಕೊರತೆ
ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯು ಈ ಪಂದ್ಯದಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಅವರ ಅನುಪಸ್ಥಿತಿಯು ಬ್ಯಾಟಿಂಗ್ ಸಮತೋಲನವನ್ನು ಸಮಸ್ಯೆಗೀಡು ಮಾಡಿತು. ಕೊಹ್ಲಿಯಂತಹ ಆಟಗಾರರು ಕೇವಲ ರನ್ ಗಳಿಸುವುದು ಮಾತ್ರವಲ್ಲ, ಅವರು ತಂಡಕ್ಕೆ ಮಾನಸಿಕ ಶಕ್ತಿಯನ್ನು ನೀಡುತ್ತಾರೆ ಮತ್ತು ಎದುರಾಳಿ ತಂಡಕ್ಕೆ ಭಯವನ್ನು ಉಂಟು ಮಾಡುವಲ್ಲಿ ನಿಸ್ಸೀಮರು. ವಿರಾಟ್ ಈ ರೋಚಕ ಪಂದ್ಯದಲ್ಲಿ, ತಂಡದ ಆತ್ಮವಿಶ್ವಾಸವು ಹಾಗೆಯೇ ಉಳಿಯುತ್ತಿತ್ತು. ಆಟಗಾರರು ಇಂಗ್ಲೆಂಡ್ ಮೇಲೆ ಹೆಚ್ಚಿನ ಉತ್ಸಾಹ ಮತ್ತು ಬಲದಿಂದ ದಾಳಿ ಮಾಡುತ್ತಿದ್ದರು.
ವಿರಾಟ್ ಕೊಹ್ಲಿ ಸೋಲುವ ಪಂದ್ಯದಲ್ಲೂ ಕೊನೆಯವರೆಗೂ ಹೋರಾಟ ಮಾಡುತ್ತಾರೆ. 1% ಅವಕಾಶ ಸಿಕ್ಕರೂ ಗೆಲ್ಲಲು ಪ್ರಯತ್ನಿಸಬೇಕೆಂದು ಅವರು ಬಯಸುತ್ತಾರೆ. ಆದರೆ ಈ ಪಂದ್ಯದಲ್ಲಿ ಭಾರತವೇ ಮೇಲುಗೈ ಸಾಧಿಸಿದರೂ ತಂಡದ ಬಾಡಿ ಲಾಂಗ್ವೇಜ್ ತುಂಬಾ ಸಪ್ಪೆಯಾಗಿತ್ತು. ಯಾರಲ್ಲೂ ಗೆಲ್ಲುವ ಹುಮ್ಮಸ್ಸು ಕಾಣಲಿಲ್ಲ. ಇದೇ ಕಾರಣದಿಂದ ಎದುರಾಳಿ ತಂಡ ಭಾರತದ ಮೇಲೆ ನಿರಾತಂಕವಾಗಿ ದಾಳಿ ಮಾಡಿ ಗೆಲುವು ಪಡೆದುಕೊಂಡಿತು.
ಮೊಹಮ್ಮದ್ ಶಮಿಯ ಅನುಭವ
ಭಾರತ ತಂಡ ವೇಗದ ಬೌಲಿಂಗ್ನಲ್ಲಿ ಸಂಪೂರ್ಣವಾಗಿ ಸಮಸ್ಯೆ ಅನುಭವಿಸಿತು. ಜಸ್ಪ್ರೀತ್ ಬುಮ್ರಾ ಏಕಾಂಗಿಯಾಗಿ ಹೋರಾಡುವಂತಾಯಿತು. ಇನ್ನೊಂದು ತುದಿಯಿಂದ ಶಾರ್ದೂಲ್ ಠಾಕೂರ್ ಪರಿಣಾಮಕಾರಿಯಾಗಿ ಆಡಲಿಲ್ಲ ಅಥವಾ ಪ್ರಸಿದ್ಧ್ ಕೃಷ್ಣ ಲಯ ಕಂಡುಕೊಳ್ಳುವಷ್ಟರಲ್ಲಿ ಪಂದ್ಯವೇ ಕೈಮೀರಿ ಹೋಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಮೊಹಮ್ಮದ್ ಶಮಿಯಂತಹ ಅನುಭವಿ ಸ್ವಿಂಗ್ ಬೌಲರ್ ಅನ್ನು ಮಿಸ್ ಮಾಡಿಕೊಂಡಿದ್ದು ನಿಜ. ಶಮಿಯ ಎಸೆತಗಳು ಇಂಗ್ಲೆಂಡ್ನ ಪರಿಸ್ಥಿತಿಯಲ್ಲಿ ಅತ್ಯಂತ ಮಾರಕವಾಗಬಲ್ಲ ಅಂಚನ್ನು ಹೊಂದಿವೆ. ಶಮಿ ಇದ್ದಿದ್ದರೆ, ಆರಂಭಿಕ ವಿಕೆಟ್ಗಳನ್ನು ತೆಗೆದುಕೊಳ್ಳುವ ಮೂಲಕ ಇಂಗ್ಲೆಂಡ್ ಅನ್ನು ಬ್ಯಾಕ್ಫೂಟ್ನಲ್ಲಿ ಸಿಲುಕಿಸಬಹುದಿತ್ತು. ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಕೂಡ ಮಾಡಬಲ್ಲರು.
ಅಜಿಂಕ್ಯಾ ರಹಾನೆ
ಭಾರತ ತಂಡದ ಆರಂಭಿಕರೂ ಉತ್ತಮ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಮಾತ್ರ ಅದ್ಭುತವಾಗಿ ಆಡಿದರು. ಆದರೆ 5,6,7 ಕ್ರಮಾಂಕದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಒಂದು ವೇಳೆ ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ ಅಂತಹ ಅನುಭವಿಗಳು ತಂಡದಲ್ಲಿದ್ದರೆ ವಿಕೆಟ್ ಕಾಯ್ದುಕೊಂಡು ದೊಡ್ಡ ಮೊತ್ತದ ಗುರಿ ನೀಡಲು ನೆರವಾಗುತ್ತಿದ್ದರು.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 26, 2025 5:58 PM IST