Last Updated:
ಮಂಗಳವಾರ (ಜೂನ್ 24) ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ ದಿನ ಕೂಡ ಭಾರತ ತಂಡದ ಮಾಜಿ ಸ್ಟಾರ್ ಕ್ರಿಕೆಟಿಗ ನಿಧರಾದ ಹಿನ್ನೆಲೆ ಕಪ್ಪು ಪಟ್ಟಿ ಜೊತೆ ಕಣಕ್ಕಿಳಿದಿದ್ದಾರೆ.
ಭಾರತೀಯ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯ ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ಜೂನ್ 20 ರಿಂದ ಆರಂಭವಾಗಿದೆ. ಮೊದಲ ದಿನ ಅಹಮದಾಬಾದ್ ವಿಮಾನ ಅಪಘಾತದ ಹಿನ್ನೆಲೆ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದ್ದರು. ಆದ್ರೆ, ಮಂಗಳವಾರ (ಜೂನ್ 24) ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ ದಿನ ಕೂಡ ಭಾರತ ತಂಡದ ಮಾಜಿ ಕ್ರಿಕೆಟಿಗರೊಬ್ಬರು ನಿಧರಾದ ಹಿನ್ನೆಲೆ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕಪ್ಪು ಪಟ್ಟಿಯ ಜೊತೆಗೆ 1 ನಿಮಿಷ ಮೌನ ಕೂಡ ಆಚರಿಸಿದರು.
ಮೌನಾಚರಣೆಗೆ ಕಾರಣವೇನು?

ಭಾರತ ತಂಡದ ಮಾಜಿ ಕ್ರಿಕೆಟಿಗ ದಿಲೀಪ್ ದೋಷಿ
ದಿಲೀಪ್ ದೋಷಿಗೆ ಗೌರವ
ಈ ಕುರಿತು ಬಿಸಿಸಿಐ “ಸೋಮವಾರ ನಿಧನರಾದ ಭಾರತ ತಂಡದ ಮಾಜಿ ಕ್ರಿಕೆಟಿಗ ದಿಲೀಪ್ ದೋಷಿ ಅವರ ಸ್ಮರಣಾರ್ಥ ಎರಡೂ ತಂಡಗಳು ಇಂದು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿವೆ. 5 ನೇ ದಿನದ ಆರಂಭಕ್ಕೂ ಮುನ್ನ ತಂಡಗಳು ಒಂದು ನಿಮಿಷ ಮೌನ ಕೂಡ ಆಚರಿಸಿದವು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದಹಾಗೆ ಈ ಪಂದ್ಯದ ವೇಳೆ ಆಟಗಾರರು ಕಪ್ಪು ಪಟ್ಟಿ ಧರಿಸಿರುವುದು ಇದು ಮೂರನೇ ಬಾರಿ. ಮೊದಲ ದಿನದಂದು, ಭಾರತ ಮತ್ತು ಬ್ರಿಟನ್ ಎರಡೂ ದೇಶಗಳ ಜನರು ಪ್ರಾಣ ಕಳೆದುಕೊಂಡ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಎರಡೂ ತಂಡಗಳು ಗೌರವ ಸಲ್ಲಿಸಿದವು. ಮೂರನೇ ದಿನದಂದು, ಆಟಗಾರರು ಶನಿವಾರ (ಜೂನ್ 21) ನಿಧನರಾದ ಇಂಗ್ಲೆಂಡ್ನ ಮಾಜಿ ಕ್ರಿಕೆಟ್ ಆಟಗಾರ ಡೇವಿಡ್ ಲಾರೆನ್ಸ್ ಅವರಿಗೆ ಗೌರವ ಸಲ್ಲಿಸಿದ್ದರು.
5ನೇ ದಿನದಾಟದಲ್ಲಿ ಪಂದ್ಯ ಸಮಬಲದಿಂದ ಸಾಗುತ್ತಿದ್ದು, ಕೊನೆಯ ದಿನ ಪಂದ್ಯದ ಫಲಿತಾಂಶ ಬರುವ ನಿರೀಕ್ಷೆ ಇದೆ. ಭಾರತ ಇಂಗ್ಲೆಂಡ್ಗೆ 371 ರನ್ಗಳ ಗುರಿ ನೀಡಿದ್ದು, ಆತಿಥೇಯರು ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 20 ರನ್ ಗಳಿಸಿದ್ದಾರೆ. ಆತಿಥೇಯರು ತಮ್ಮ ಆಕ್ರಮಣಕಾರಿ ಶೈಲಿಗೆ ಹೆಸರುವಾಸಿಯಾಗಿದ್ದು, ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಬದಲು ಗುರಿಯನ್ನು ಬೆನ್ನಟ್ಟಲು ನೋಡುತ್ತಿದ್ದಾರೆ. ಆದರೆ ಟೀಂ ಇಂಡಿಯಾ 10 ವಿಕೆಟ್ಗಳನ್ನು ಪಡೆದು ಸರಣಿಯಲ್ಲಿ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 24, 2025 5:18 PM IST