IPL 2025: ಸಿಎಸ್‌ಕೆ ಮಾಡಿದ ‘ಆ’ ಒಂದು ತಪ್ಪಿನಿಂದಲೇ ಇಂದು ಈ ಗತಿ ಬಂದಿದೆ! ಚಿನ್ನತಲಾ ಕಿಡಿಕಾರಿದ್ದು ಯಾರ ವಿರುದ್ಧ? | CSK Poor Performance Auction Mistakes Reason Says Suresh Raina

IPL 2025: ಸಿಎಸ್‌ಕೆ ಮಾಡಿದ ‘ಆ’ ಒಂದು ತಪ್ಪಿನಿಂದಲೇ ಇಂದು ಈ ಗತಿ ಬಂದಿದೆ! ಚಿನ್ನತಲಾ ಕಿಡಿಕಾರಿದ್ದು ಯಾರ ವಿರುದ್ಧ? | CSK Poor Performance Auction Mistakes Reason Says Suresh Raina

Last Updated:

ಈ ಬಾರಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡುತ್ತಿರುವ ಕಳಪೆ ಪ್ರದರ್ಶನದ ಕುರಿತು ಮಾಜಿ ಆಟಗಾರ ಸುರೇಶ್ ರೈನಾ ಪ್ರತಿಕ್ರಿಯೆ ನೀಡಿದ್ದಾರೆ.

ಸುರೇಶ್ ರೈನಾಸುರೇಶ್ ರೈನಾ
ಸುರೇಶ್ ರೈನಾ

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಈ ಬಾರಿ ಅತ್ಯಂತ ಹೀನಾಯ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆ ಮೂಲಕ ಈ ಬಾರಿ ಸೆಮಿಫೈನಲ್ (Semi Final) ರೇಸ್‌ನಿಂದ ಬಹುತೇಕ ಹೊರಬಿದ್ದದೆ. ಇನ್ನುಳಿದ ಪ್ರತೀ ಪಂದ್ಯಗಳನ್ನು ಗೆದ್ದು, ಉತ್ತಮ ರನ್‌ರೇಟ್‌ ಉಳಿಸಿಕೊಂಡರೆ ಮಾತ್ರ ಸೆಮಿಫೈನಲ್ ಅವಕಾಶ ಪಡೆಯಬಹುದು. ಈ ನಡುವೆ ಸಿಎಸ್‌ಕೆ ತಂಡದ ಕಳಪೆ ಪ್ರದರ್ಶನದ ಕುರಿತು ಮಾಜಿ ಆಟಗಾರ ಸುರೇಶ್ ರೈನಾ (Suresh Raina) ಪ್ರತಿಕ್ರಿಯೆ ನೀಡಿದ್ದಾರೆ.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

5 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ‘ಮೆನ್ ಇನ್ ಯೆಲ್ಲೋ’ ಅಂತಲೇ ಫೇಮಸ್. ಪ್ರತೀ ಟೂರ್ನಿಯಲ್ಲೂ ಉತ್ತಮ ತಂಡದೊಂದಿಗೆ ಬರ್ತಾ ಇದ್ದ ತಂಡ ಈ ಬಾರಿ ಹೇಳಿಕೊಳ್ಳುವಂತ ಆಟಗಾರರನ್ನು ಖರೀದಿಸಿಲ್ಲ. ಆದಾಗ್ಯೂ ಆಡಿರುವ 8 ಪಂದ್ಯಗಳಲ್ಲಿ 6 ಸೋಲು ಹಾಗೂ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಕೋಚ್ ಮತ್ತು ಮ್ಯಾನೇಜ್‌ಮೆಂಟ್ ತಪ್ಪು ನಿರ್ಧಾರ

ಐಪಿಎಲ್ 2025 ರ ಹರಾಜಿನ ಸಮಯದಲ್ಲಿ ಕೋಚ್ ಮತ್ತು ಮ್ಯಾನೇಜ್‌ಮೆಂಟ್ ಮಾಡಿದ ತಪ್ಪುಗಳೇ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಎಂದು ಸಿಎಸ್‌ಕೆ ತಂಡದ ಮಾಜಿ ಸ್ಟಾರ್ ಆಟಗಾರ ಚಿನ್ನ ತಲಾ ಅಂತಲೇ ಕರೆಸಿಕೊಳ್ಳುವ ಸುರೇಶ್ ರೈನಾ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅವರು, ಹರಾಜಿನಲ್ಲಿ ಕಳಪೆ ಆಯ್ಕೆಗಳೇ ಈ ಋತುವಿನ ಸಿಎಸ್‌ಕೆಯ ಸಂಕಷ್ಟಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಪ್ರತಿಭಾನ್ವಿತ ಆಟಗಾರರನ್ನು ಖರೀದಿಸಿಲ್ಲ!

ಸಿಎಸ್‌ಕೆ ವಿರುದ್ಧ ಶತಕ ಬಾರಿಸಿದ ಪಂಜಾಬ್‌ನ ಪ್ರಿಯಾಂಶ್ ಆರ್ಯ ಅವರಂತಹ ಹಲವು ಯುವ ಮತ್ತು ಪ್ರತಿಭಾನ್ವಿತ ಆಟಗಾರರು ಹರಾಜಿನಲ್ಲಿ ಲಭ್ಯವಿದ್ದರು ಆದ್ರೆ, ಸಿಎಸ್‌ಕೆ ಅವರ ಖರೀದಿಗೆ ಮುಂದಾಗದೇ ಇರುವುದು ಇಂದಿನ ಈ ಸ್ಥಿತಿಗೆ ಕಾರಣ ಎಂದಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘ಸಿಎಸ್‌ಕೆ ಈ ರೀತಿ ಕಷ್ಟಪಟ್ಟಿರುವುದನ್ನು ನಾನೆಂದು ನೋಡಿಲ್ಲ’ ಎಂದು ತಮ್ಮ ಮಾಜಿ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: IPL 2025: ಇಷ್ಟು ದಿನ ಅಲ್ಲ, ಇವತ್ತು ನಡೆಯೋದು ಅಸಲಿ ಹೈವೋಲ್ಟೇಜ್ ಪಂದ್ಯ! ಹಳೆ ಬಾಕಿ ಚುಕ್ತಾ ಮಾಡ್ತಾರಾ ಕನ್ನಡಿಗ ಕೆಎಲ್‌ ರಾಹುಲ್?

ಸಿಎಸ್‌ಕೆ 5 ಟ್ರೋಫಿ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದ ರೈನಾ, ತಂಡವು ಇಷ್ಟು ಕೆಟ್ಟ ಪ್ರದರ್ಶನ ನೀಡುವುದನ್ನು ಅಭಿಮಾನಿಗಳು ನೋಡಲು ಬೇಸರಗೊಂಡಿದ್ದಾರೆ ಎಂದು ಮುಂಬೈ ವಿರುದ್ಧ ಸಿಎಸ್‌ಕೆ ಸೋತ ಬಳಿಕ ಹೇಳಿದರು.

ಧ್ವನಿಗೂಡಿಸಿದ ಹರ್ಭಜನ್ ಸಿಂಗ್

ಇನ್ನೂ ಇದೇ ಸಂದರ್ಭದಲ್ಲಿ ಜೊತೆಗಿದ್ದ ಹರ್ಭಜನ್ ಸಿಂಗ್ ಕೂಡ ಇದೇ ಮಾತುಗಳನ್ನು ಹೇಳಿದರು. ‘ ಚೆನ್ನೈ ಯಾವಾಗಲು ಅತ್ಯುತ್ತಮ ತಂಡವಾಗಿರುತ್ತಿತ್ತು. ಆದರೆ ಈ ಬಾರಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಲು ಮುಂದಾಗಲಿಲ್ಲ. ಅವರು ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲು ಮುಂದಾಗಲಿಲ್ಲ. ಸದ್ಯ ಆಯ್ಕೆಯಾಗಿರುವ ಯುವ ಆಟಗಾರರು ಪಂದ್ಯ ದಲಾಯಿಸುವ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲ’ ಎಂದರು.