IPL 2025: ಕರುಣ್ ನಾಯರ್‌ಗೆ ಇರೋದು ಇದೊಂದೇ ಆಸೆಯಂತೆ! ಡಿಸಿ ಪರ ಆರ್ಭಟಿಸಲು ಸಿದ್ದವಾಗಿರುವ ಕನ್ನಡಿಗನ ಮನದಾಳದ ಮಾತು | IPL 2025 Delhi Capitals Karun Nair Ready to Shine

IPL 2025: ಕರುಣ್ ನಾಯರ್‌ಗೆ ಇರೋದು ಇದೊಂದೇ ಆಸೆಯಂತೆ! ಡಿಸಿ ಪರ ಆರ್ಭಟಿಸಲು ಸಿದ್ದವಾಗಿರುವ ಕನ್ನಡಿಗನ ಮನದಾಳದ ಮಾತು | IPL 2025 Delhi Capitals Karun Nair Ready to Shine

ಅದ್ಭುತ ಫಾರ್ಮ್‌ನಲ್ಲಿದ್ದಾರೆ ಕರುಣ್ ನಾಯರ್

ಆದ್ರೆ, ಕರುಣ್ ನಾಯರ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ದೇಶೀಯ ಋತುವಿನಲ್ಲಿ ಅಬ್ಬರಿಸಿದ್ದಾರೆ. ವಿವಿಧ ಮಾದರಿಗಳಲ್ಲಿ 2000 ರನ್‌ಗಳು ಮತ್ತು 9 ಶತಕಗಳನ್ನು ಸಿಡಿಸಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದಾರೆ. ನಾಯರ್ ವಿದರ್ಭ ಪರ ಅಸಾಧಾರಣ ಇನ್ನಿಂಗ್ಸ್‌ಗಳೊಂದಿಗೆ ಆಡಿದ್ದು ಎಲ್ಲರ ಗಮನಕ್ಕೆ ಬಂದಿದೆ. ಡ್ರೀಮ್ ಋತುವಿನ ಬಳಿಕ ಅವರು ಮಾರ್ಚ್ 22ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಋತುವಿನಲ್ಲಿ ಅವರು ದೆಹಲಿ ಕ್ಯಾಪಿಟಲ್ಸ್ ಪರ ಅಬ್ಬರಿಸಲು ಸಜ್ಜಾಗಿದ್ದಾರೆ.

ದೆಹಲಿ ತಂಡದ ಪರ ಆಡಲು ಸಿದ್ದವಾಗಿರುವ ಕನ್ನಡಿಗ ನಾಯರ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಪರ ಆಡಲು ಉತ್ಸುಕನಾಗಿದ್ದೇನೆ. ಅವಕಾಶ ನೀಡಿರುವುದರಕ್ಕೆ ಡಿಸಿ ಫ್ರಾಂಚೈಸಿಗೆ ಕೃತಜ್ಞನಾಗಿದ್ದೇನೆ. ನಾನು ಸಾಧ್ಯವಾದಷ್ಟು ಅಭ್ಯಾಸ ಮಾಡಿಕೊಂಡು ಚೆನ್ನಾಗಿ ಆಡಲು ಭಯಸುತ್ತೇನೆ. ವೈಯಕ್ತಿಕವಾಗಿ ಮತ್ತು ತಂಡವಾಗಿ ನಾವು ಅದ್ಭುತ ಪ್ರದರ್ಶನ ತೋರಲು ಪ್ರಯತ್ನಿಸುತ್ತೇವೆ ಎಂದರು. ಈ ಋತುವಿನಲ್ಲಿ ನನಗೆ ತಂಡದ ಪರವಾಗಿ ಯಾವುದೇ ಕ್ರಮಾಂಕದಲ್ಲಿ ಆಡಲು ಅವಕಾಶ ಸಿಕ್ಕರೂ ತಂಡಕ್ಕಾಗಿ ಉತ್ತಮ ಆಟವಾಡಲು ಪ್ರಯತ್ನಿಸುತ್ತೇನೆ ಎಂದರು.

ಕರುಣ್ ಅವರು ಕೊನೆಯದಾಗಿ ಡೆಲ್ಲಿ ಪರ ಆಡಿ 8 ವರ್ಷಗಳು ಕಳೆದಿವೆ. ಆದ್ರೆ, ಅವರು ದೆಹಲಿ ತಂಡದ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಅವರು ಡೆಲ್ಲಿ ತಂಡದ ಪರವಾಗಿ ಆಡಿದ ಋತುವಿನಲ್ಲಿ 638 ರನ್‌ಗಳು ಮತ್ತು ನಾಲ್ಕು ಅರ್ಧಶತಕಗಳೊಂದಿಗೆ ಅಮೋಘ ಪ್ರದರ್ಶನ ತೋರಿದ್ದರು.

ಇನ್ನೂ ಉತ್ತಮ ಆಟವಾಡುವ ಗುರಿ ಹೊಂದಿದ್ದೇನೆ

ವಯಸ್ಸಾಗುತ್ತಿದ್ದಂತೆ ನನಗೆ ನನ್ನ ಆಟದ ಬಗ್ಗೆ ಹೆಚ್ಚು ಅರ್ಥ ಆಗುತ್ತಿದೆ. 2017 ರಲ್ಲಿ ದೆಹಲಿ ಪರ ಆಡಿದ್ದಕ್ಕಿಂತ ಈಗ ನಾನು ಬದಲಾಗಿದ್ದೇನೆ. ನನ್ನ ಗಮನ ಮತ್ತು ತಂಡವನ್ನು ಗೆಲ್ಲಿಸುವ ಕಡೆ ಮಾತ್ರ ಗುರಿ ಇದೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ನಾಯರ್ ಮತ್ತೆ ಭಾರತ ತಂಡಕ್ಕೆ ಆಡುವ ಅವಕಾಶಕ್ಕೆ ಹತ್ತಿರವಾಗಿದ್ದಾರೆ. ಆದರೆ ಈಗ ಅವರ ಗಮನ 2025 ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸುವುದರ ಹೊಣೆ ಇದೆ. ಭಾರತ ತಂಡಕ್ಕೆ ಮರಳುವುದು ನನ್ನ ಮನಸ್ಸಿನಲ್ಲಿದೆ ಆದರೆ ಈಗ ನಾನು ಐಪಿಎಲ್‌ಗೆ ಚೆನ್ನಾಗಿ ತಯಾರಿ ಮಾಡಿಕೊಳ್ಳುವ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ ಎಂದರು.

ಮುಕ್ತವಾಗಿ ಬ್ಯಾಟಿಂಗ್ ಆಡಲು ಮುಂದಾಗಿದ್ದೇನೆ

ನಾನು ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಈ ಬಾರಿ ನಾಯರ್ ಯಾವುದೇ ನಿರೀಕ್ಷೆ ಅಥವಾ ಒತ್ತಡವಿಲ್ಲದೆ ಮುಕ್ತವಾಗಿ ಆಡಲು ಬಯಸುತ್ತಾರೆ. ನಾನು ಬೇರೆಯವರಂತೆ ಆಗಲು ಪ್ರಯತ್ನಿಸುವುದಿಲ್ಲ. ನನಗೆ ತಿಳಿದಿರುವ ರೀತಿಯಲ್ಲಿಯೇ ಆಡುತ್ತೇನೆ. ನಾನು ಪರಿಸ್ಥಿತಿಗೆ ತಕ್ಕಂತೆ ಆಡಲು ಪ್ರಯತ್ನಿಸುತ್ತೇನೆ. ಇದು ತುಂಬಾ ಸರಳವಾಗಿದೆ ಎಂದು ನಾಯರ್ ಹೇಳಿದರು.

ಇದನ್ನೂ ಓದಿ: Masters League: ಕನ್ನಡಿಗನ ಮಾರಕ ದಾಳಿಗೆ ವಿಂಡೀಸ್ ಉಡೀಸ್! ಮಾಸ್ಟರ್ಸ್‌ ಲೀಗ್ ಟ್ರೋಫಿ ಗೆದ್ದು ಬೀಗಿದ ಭಾರತ

ಭಾರತ ತಂಡಕ್ಕೆ ಮರಳುವುದು ಅವರ ಏಕೈಕ ಗುರಿ

ನಾಯರ್ ಅವರ ಕ್ರಿಕೆಟ್ ಜೀವನ ಏರಿಳಿತಗಳಿಂದ ಕೂಡಿದೆ. ಆದರೆ ಈ ಏರಿಳಿತಗಳು ಅವರಿಗೆ ಸ್ಥಿತಿಸ್ಥಾಪಕತ್ವ, ತಾಳ್ಮೆ ಮತ್ತು ಯಶಸ್ಸಿನ ಹಸಿವನ್ನು ಕಲಿಸಿವೆ. ಭಾರತ ತಂಡಕ್ಕೆ ಮರಳುವುದು ಅವರ ಏಕೈಕ ಗುರಿಯಾಗಿದೆ. ಭಾರತ ತಂಡಕ್ಕೆ ಮರಳುವ ದಾರಿ ಕಠಿಣವಾಗಿದೆ ಎಂದು ನಾಯರ್‌ಗೆ ತಿಳಿದಿದೆ. ಆದರೆ ಅವರು ಎಂದಿಗೂ ಬಿಟ್ಟುಕೊಡುವವರಲ್ಲ. ಭಾರತ ತಂಡಕ್ಕೆ ಮರಳಲು ಸ್ಥಿರವಾಗಿ ರನ್ ಗಳಿಸಬೇಕೆಂದು ಅವರಿಗೆ ತಿಳಿದಿದೆ.

ಭಾರತ ತಂಡಕ್ಕೆ ಆಡುವುದು ನನ್ನ ಏಕೈಕ ಗುರಿ

ಐಪಿಎಲ್ 2025 ಕೇವಲ ಒಂದು ಟೂರ್ನಿಗಿಂತ ಅವರಿಗೆ ಹೆಚ್ಚಾಗಿದೆ. ಇದು ಅವರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಅವಕಾಶ. ನಾಯರ್ ಹೇಳುತ್ತಾರೆ, ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ನಾವು ಅವುಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯ. ಕಷ್ಟದ ಸಮಯಗಳು ನನಗೆ ಬಹಳಷ್ಟು ಕಲಿಸಿವೆ. ಭಾರತ ತಂಡಕ್ಕೆ ಆಡುವುದು ನನ್ನ ಏಕೈಕ ಗುರಿ. ಅದಕ್ಕಾಗಿ ನಾನು ಸ್ಥಿರವಾಗಿ ರನ್ ಗಳಿಸಬೇಕು ಮತ್ತು ನನಗೆ ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಾಯರ್ ಹೇಳಿದರು.