IPL 2025: ಸಾಯಿ, ಬಟ್ಲರ್, ಸಿರಾಜ್ ಅಲ್ಲ! ಬಲಿಷ್ಠ ಮುಂಬೈ ವಿರುದ್ಧದ ಗೆಲುವಿಗೆ ಕನ್ನಡಿಗನೇ ಕಾರಣ ಎಂದ ನಾಯಕ ಗಿಲ್

IPL 2025: ಸಾಯಿ, ಬಟ್ಲರ್, ಸಿರಾಜ್ ಅಲ್ಲ! ಬಲಿಷ್ಠ ಮುಂಬೈ ವಿರುದ್ಧದ ಗೆಲುವಿಗೆ ಕನ್ನಡಿಗನೇ ಕಾರಣ ಎಂದ ನಾಯಕ ಗಿಲ್

Last Updated:

ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 196 ರನ್ ಗಳಿಸಿತು. ಬೃಹತ್ ಮೊತ್ತ ಚೇಸ್ ಆರಂಭಿಸಿದ ಮುಂಬೈ 36 ರನ್‌ಗಳ ಅಂತರದಲ್ಲಿ ಹೀನಾಯ ಗೆಲುವು  ಅನುಭವಿಸಿತು.

ಗಿಲ್ಗಿಲ್
ಗಿಲ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಬಗ್ಗುಬಡಿಯುವಲ್ಲಿ ಗುಜರಾತ್ ತಂಡ ಯಶಸ್ವಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 196 ರನ್ ಗಳಿಸಿತು. ಬೃಹತ್ ಮೊತ್ತ ಚೇಸ್ ಆರಂಭಿಸಿದ ಮುಂಬೈ 36 ರನ್‌ಗಳ ಅಂತರದಲ್ಲಿ ಹೀನಾಯ ಗೆಲುವು  ಅನುಭವಿಸಿತು. ಇನ್ನೂ ಈ ಪಂದ್ಯದ ಬಳಿಕ ಅಮೋಘ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದಾರೆ.

ಕಳೆದ ಪಂದ್ಯದಲ್ಲಿ ಟೀಕೆಗೆ ಒಳಗಾಗಿದ್ದ ಕೃಷ್ಣ

ಹೌದು, ಕಳೆದ ಪಂದ್ಯದಲ್ಲಿ ಇದೇ ಸೀಸನ್‌ನ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ 4 ಓವರ್‌ ಬೌಲಿಂಗ್ ಮಾಡಿ 48 ರನ್ ಬಿಟ್ಟುಕೊಟ್ಟು ತೀವ್ರ ಟೀಕೆಗೆ ಒಳಗಾಗಿದ್ದ ಕೃಷ್ಣ ಅವರು ನಿನ್ನೆ (ಮಾರ್ಚ್ 29ರಂದು ನಡೆದ ಪಂದ್ಯದಲ್ಲಿ ಅಮೋಘ ಬೌಲಿಂಗ್ ಮಾಡಿದರು. ಅದರಲ್ಲೂ ಮೊದಲ ಎರಡು ಓವರ್‌ನಲ್ಲಿ ಕೇವಲ 6 ರನ್ ಬಿಟ್ಟುಕೊಡುವ ಮೂಲಕ ಮುಂಬೈ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು.

ಎರಡು ಬಿಗ್ ವಿಕೆಟ್ ಪಡೆದ ಕೃಷ್ಣ

ಆರಂಭದಿಂದಲೂ ವೇಗವಾಗಿ ಬ್ಯಾಟಿಂಗ್ ಮಾಡ್ತಾ ಇದ್ದ ಮುಂಬೈ ಬ್ಯಾಟರ್‌ಗಳು ಪ್ರಸಿದ್ಧ್ ಕೃಷ್ಣಾ ಅವರ ಸ್ಲೋ ಡಿಲೆವರಿಗಳನ್ನು ಎದುರಿಸಲು ಪರದಾಡಿದರು. ಅದರಲ್ಲೂ ವಿಶೇಷವಾಗಿ ಸೂರ್ಯಕುಮಾರ್ ಯಾದವ್ ಹಾಗೂ ಬಿಗ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಇದ್ದಾಗಲೂ ಕೂಡ ಒಂದೇ ಒಂದು ಬೌಂಡರಿ ಬಿಟ್ಟು ಕೊಡದೆ ಡಾಟ್ ಬಾಲ್ ಹಾಕಿದರು. ಮಾತ್ರವಲ್ಲ ಸೆಟ್ ಬ್ಯಾಟ್ಸಮನ್‌ಗಳಾದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಅವರ ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡಕ್ಕೆ ಆಘಾತ ನೀಡಿದರು.

ಇದನ್ನೂ ಓದಿ: IPL 2025 : ಆತ ಇಲ್ಲ ಅಂದ್ರೆ ಮುಂಬೈ ಇಂಡಿಯನ್ಸ್‌ ಮತ್ತೊಂದು ಜಿಂಬಾಬ್ವೆ! ಗೆಲ್ಲಿಸೋದಕ್ಕೆ ಅವ್ರೇ ಬರಬೇಕು ಎಂದ ಫ್ಯಾನ್ಸ್‌!

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೃಷ್ಣ

ಅವರು ನಿನ್ನೆ ನಡೆದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 4.5ರ ಎಕಾನಮಿಯಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟರು ಮಾತ್ರವಲ್ಲ ಎರಡು ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಹಾಗಾಗಿ ಹಿಂದಿನ ಪಂದ್ಯದಲ್ಲಿ ಟೀಕಿಸಿದವರು ಕೂಡ ನಿನ್ನೆಯ ಪಂದ್ಯದ ಬಳಿಕ ಶಬ್ಬಾಶ್ ಪ್ರಸಿದ್ಧ್ ಎನ್ನುತ್ತಿದ್ದಾರೆ. ಮಾತ್ರವಲ್ಲ ತಮ್ಮ ಅಮೋಘ ಬೌಲಿಂಗ್ ದಾಳಿ ನೆರವಿನಿಂದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡರು.

5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2025ರ ಆವೃತ್ತಿಯ ಐಪಿಎಲ್​ನಲ್ಲಿ ಸತತ 2ನೇ ಸೋಲು ಕಂಡಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 36 ರನ್​ಗಳ ಸೋಲು ಕಂಡಿತು. ಗುಜರಾತ್ ನೀಡಿದ್ದ 197ರನ್​ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ತಂಡ 20 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಸೂರ್ಯಕುಮಾರ್ ಯಾದವ್​ 48, ತಿಲಕ್ ವರ್ಮಾ 39 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ರೋಹಿತ್, ಹಾರ್ದಿಕ್ ಪಾಂಡ್ಯ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿದರು.

197ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಮೊದಲ ಓವರ್​​ನಲ್ಲೇ ಮಾಜಿ ನಾಯಕ ರೋಹಿತ್ ಶರ್ಮಾ (8) ವಿಕೆಟ್ ಕಳೆದುಕೊಂಡಿತು. ಸಿರಾಜ್​ ಬೌಲಿಂಗ್​​ನಲ್ಲಿ ಸತತ 2 ಬೌಂಡರಿ ಬಾರಿಸಿದ ಅವರು 4ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇನ್ನು ರಿಕಲ್ಟನ್(6) ಇಂದೂ ಕೂಡ ವಿಫಲರಾದರು. ಅವರು ಕೂಡ ಸಿರಾಜ್​​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.