Last Updated:
ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2025ರ 30ನೇ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ ವಿರುದ್ಧ 5 ವಿಕೆಟ್ಗಳ ರೋಮಾಂಚಕ ಗೆಲುವು ಸಾಧಿಸಿದೆ. ಶೇಖ್ ರಶೀದ್ 27 ರನ್ಗಳೊಂದಿಗೆ ಉತ್ತಮ ಆರಂಭ ಒದಗಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2025ರ (IPL 2025) 30ನೇ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ (LSG) ವಿರುದ್ಧ 5 ವಿಕೆಟ್ಗಳ ರೋಮಾಂಚಕ ಗೆಲುವಿನೊಂದಿಗೆ ಸತತ ಸೋಲಿನ ಸರಪಳಿಯನ್ನ ಮುರಿದಿದೆ. ಏಕನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ (26*), ಶಿವಂ ದುಬೆ (43*), ಮತ್ತು ರಚಿನ್ ರವೀಂದ್ರ (37) ಜೊತೆಗೆ ಯುವ ಆಟಗಾರ ಶೇಖ್ ರಶೀದ್ (27)(Sheikh Rashid) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಉತ್ತಮ ಆರಂಣ ಒದಗಿಸಿದ ರಶೀದ್
ಲಖನೌ ನೀಡಿದ 167 ರನ್ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆಗೆ ಆಂಧ್ರದ 20 ವರ್ಷದ ಶೇಖ್ ರಶೀದ್ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಆಕರ್ಷಕ ಆರಂಭ ಒದಗಿಸಿದರು. 19 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 27 ರನ್ ಗಳಿಸಿದ ರಶೀದ್, ರಚಿನ್ ರವೀಂದ್ರ ಜೊತೆಗೆ 52 ರನ್ಗಳ ಆರಂಭಿಕ ಜೊತೆಯಾಟವಾಡಿದರು. ಈ ಆಕ್ರಮಣಕಾರಿ ಆರಂಭವು ಸಿಎಸ್ಕೆಗೆ ಗುರಿಯನ್ನು 19.3 ಓವರ್ಗಳಲ್ಲಿ ತಲುಪಲು ಆಧಾರವಾಯಿತು. ಕಳೆದ ಕೆಲವು ಪಂದ್ಯಗಳಿಂದ ಸಿಎಸ್ಕೆ ಅಕ್ರಮಣಕಾರಿ ಆರಂಭ ಪಡೆಯುವಲ್ಲಿ ಸತತ ವಿಫಲವಾಗಿತ್ತು. ಆದರೆ ರಶೀದ್ ತಂಡ ಸೇರಿಕೊಂಡ ನಂತರ ಆ ಸಮಸ್ಯೆಗೆ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ: IPL ಮಧ್ಯದಲ್ಲಿ 2 ತಂಡಗಳಲ್ಲಿ ಬದಲಾವಣೆ! CSK ಸೇರಿದ 17 ವರ್ಷದ ಯುವಕ! ಹೈದರಾಬಾದ್ಗೆ ಕನ್ನಡಿಗ ಸೇರ್ಪಡೆ
ಸಿಎಸ್ಕೆ ತಂಡದ ಅತ್ಯಂತ ಕಿರಿಯ ಆರಂಭಿಕ
ಕೇವಲ 27 ರನ್ಗಳಿಸಿದರೂ ಈ ಪಂದ್ಯದಲ್ಲಿ ರಶೀದ್ ದಾಖಲೆಯೊಂದನ್ನು ಸೃಷ್ಟಿಸಿದರು. 20 ವರ್ಷ 202 ದಿನಗಳ ವಯಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಈ ದಾಖಲೆ ಸ್ಯಾಮ್ ಕರನ್ (22 ವರ್ಷ 132 ದಿನ, 2020) ಹೆಸರಿನಲ್ಲಿತ್ತು. ಭಾರತದ ಅಂಡರ್-19 ತಂಡದ ಮಾಜಿ ಉಪನಾಯಕನಾಗಿರುವ ಗುಂಟೂರು ಮೂಲದ ರಶೀದ್, ತಮ್ಮ ಪ್ರತಿಭೆಯನ್ನ ಮೊದಲ ಪಂದ್ಯದಲ್ಲೇ ತೋರ್ಪಡಿಸಿದರು.
30 ಲಕ್ಷಕ್ಕೆ ಖರೀದಿ
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಸಿಎಸ್ಕೆ ರಶೀದ್ರನ್ನು 30 ಲಕ್ಷ ರೂ.ಗೆ ಖರೀದಿಸಿತು. ದೇಶೀಯ ಕ್ರಿಕೆಟ್ನಲ್ಲಿ ರಶೀದ್ 19 ಪ್ರಥಮ ದರ್ಜೆ ಪಂದ್ಯಗಳಲ್ಲಿ 37.62 ಸರಾಸರಿಯಲ್ಲಿ 1204 ರನ್, 12 ಲಿಸ್ಟ್-ಎ ಪಂದ್ಯಗಳಲ್ಲಿ 421 ರನ್, ಮತ್ತು 17 ಟಿ20 ಪಂದ್ಯಗಳಲ್ಲಿ 389 ರನ್ ಗಳಿಸಿದ್ದಾರೆ. ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ರಶೀದ್ ತಂಡಕ್ಕೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲವಾಗಲಿದ್ದಾರೆ. ಈ ಸೀಸನ್ನಲ್ಲಿ ಇನ್ನೂ ಹೆಚ್ಚು ಅವಕಾಶಗಳನ್ನ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ವಿನೋದ್ ಕಾಂಬ್ಳಿ ಬದುಕಿರುವವರೆಗೂ ಪ್ರತೀ ತಿಂಗಳು 30 ಸಾವಿರ ನೆರವು ಘೋಷಿಸಿದ ಲೆಜೆಂಡರಿ ಕ್ರಿಕೆಟರ್
ಮ್ಹಾತ್ರೆ ತಂಡಕ್ಕೆ ಸೇರ್ಪಡೆ
ಸೋಲಿನ ಸರಪಳಿ ಕಳಚಿರುವ ಸಿಎಸ್ಕೆ ತಂಡಕ್ಕೆ ಮತ್ತೊಂದು ಬಲ ಸಿಕ್ಕಿದೆ. 17 ವರ್ಷದ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಯುವ ಆಟಗಾರ ಆಯುಷ್ ಮ್ಹಾತ್ರೆ ತಂಡಕ್ಕೆ ಸೇರಿಕೊಂಡಿದ್ದಾರೆ. ಗಾಯದಿಂದ ಟೂರ್ನಿಯಿಂದ ಹೊರಬಿದ್ದಿರುವ ಗಾಯಕ್ವಾಡ್ ಬದಲಿದೆ ಅವರು ತಂಡ ಸೇರಿಕೊಂಡಿದ್ದಾರೆ. ಕಳಪೆ ಫಾರ್ಮ್ನಲ್ಲಿರುವ ರಾಹುಲ್ ತ್ರಿಪಾಠಿ ಬದಲಿಗೆ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದರೂ ಅಚ್ಚರಿಯಲ್ಲಿ.
April 15, 2025 8:36 PM IST