IPL 2025: ಸ್ಫೋಟಕ ವಿಕೆಟ್ ಕೀಪರ್​ ಬ್ಯಾಟರ್​​ಗೆ ಸಿಎಸ್​ಕೆ ದಿಢೀರ್ ಕರೆ! ಧೋನಿ ನಿವೃತ್ತಿ ಖಚಿತವಾಯ್ತಾ? | CSK Eyes New Talent Urvil Patel Summoned for Mid-Season Trials

IPL 2025: ಸ್ಫೋಟಕ ವಿಕೆಟ್ ಕೀಪರ್​ ಬ್ಯಾಟರ್​​ಗೆ ಸಿಎಸ್​ಕೆ ದಿಢೀರ್ ಕರೆ! ಧೋನಿ ನಿವೃತ್ತಿ ಖಚಿತವಾಯ್ತಾ? | CSK Eyes New Talent Urvil Patel Summoned for Mid-Season Trials
ಎಂಎಸ್ ಧೋನಿಎಂಎಸ್ ಧೋನಿ
ಎಂಎಸ್ ಧೋನಿ

ಐಪಿಎಲ್ 2025ರ ಋತುವಿನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಪಂಜಾಬ್ ಕಿಂಗ್ಸ್ (PBKS) ಮುಖಾಮುಖಿಯಾದಾಗ, ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಟಾಸ್ ಸಂದರ್ಭದಲ್ಲಿ ಮಾಡಿದ ಕಾಮೆಂಟ್‌ಗಳು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಟಾಸ್ ಸೋತ ನಂತರ ನಿರೂಪಕ ಡ್ಯಾನಿ ಮಾರಿಸನ್ ಧೋನಿಯೊಂದಿಗೆ ಮಾತನಾಡುವಾಗ, ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಅಭಿಮಾನಿಗಳ ಉತ್ಸಾಹದ ಹರ್ಷೋದ್ಗಾರಗಳು ಗಗನಕ್ಕೇರಿದವು. ಈ ವಾತಾವರಣವನ್ನು ಆನಂದಿಸಿದ ಮಾರಿಸನ್, ಧೋನಿಯ ಭವಿಷ್ಯದ ಯೋಜನೆಗಳ ಬಗ್ಗೆ ತಮಾಷೆಯಾಗಿ ಪ್ರಶ್ನಿಸಿದರು. “ಈ ಜನರ ಉತ್ಸಾಹವನ್ನು ನೋಡಿದರೆ, ಮುಂದಿನ ಋತುವಿನಲ್ಲೂ ನೀವು ಆಡುತ್ತೀರಾ?” ಎಂದು ಕಳಿ ಧೋನಿ, ತಮ್ಮ ವಿಶಿಷ್ಟ ಶೈಲಿಯಲ್ಲಿ ನಗುತ್ತಾ ಉತ್ತರಿಸಿದರು, “ಮುಂದಿನ ಪಂದ್ಯಕ್ಕೆ ಆಡುತ್ತೇನೋ ಇಲ್ಲವೋ, ಅಂತಾ ಗೊತ್ತಿಲ್ಲ” ಎಂದು ಹೇಳಿದ್ದರು. ಈ ಸಸ್ಪೆನ್ಸ್‌ನಿಂದ ಕೂಡಿದ ಉತ್ತರವು ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್ ವಿಶ್ಲೇಷಕರಲ್ಲಿ ಧೋನಿಯ ಐಪಿಎಲ್ ಭವಿಷ್ಯದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿತು.

ಧೋನಿಯ ನಿವೃತ್ತಿ ಚರ್ಚೆ

43 ವರ್ಷದ ಧೋನಿ, ಐಪಿಎಲ್ 2025 ರಲ್ಲಿ ಮೊಣಕಾಲು ನೋವಿನ ಸಮಸ್ಯೆಯ ಹೊರತಾಗಿಯೂ ಆಡುತ್ತಿದ್ದಾರೆ. ಆದರೆ, ಸಿಎಸ್‌ಕೆ ಈ ಋತುವಿನಲ್ಲಿ ಕೇವಲ 2 ಗೆಲುವುಗಳೊಂದಿಗೆ (9 ಪಂದ್ಯಗಳಲ್ಲಿ) ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ, ಇದು ಪ್ಲೇಆಫ್‌ಗೆ ತಲುಪುವ ಸಾಧ್ಯತೆಯನ್ನು ಕ್ಷೀಣಗೊಳಿಸಿದೆ. ಧೋನಿಯ ಕಾಮೆಂಟ್‌ಗಳು, ವಿಶೇಷವಾಗಿ ಮುಂದಿನ ಪಂದ್ಯಕ್ಕೆ ಆಡುತ್ತೇನೋ ಇಲ್ಲವೋ” ಎಂಬ ಹೇಳಿಕೆ, ಅವರು ಐಪಿಎಲ್‌ಗೆ ವಿದಾಯ ಹೇಳುವ ಸಾಧ್ಯತೆಯನ್ನು ಸೂಚಿಸುತ್ತದೆಯೇ ಎಂಬ ಚರ್ಚೆಗೆ ಜೋರಾಗಿದೆ. ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಈ ಹಿಂದೆ ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುತ್ತಾರೆ ಎಂದು ಸುಳಿವು ನೀಡಿದ್ದರು. ಇದು ಈ ಊಹಾಪೋಹಗಳಿಗೆ ಇಂಬು ನೀಡಿದೆ. ಆದರೆ, ಧೋನಿಯ ಹಾಸ್ಯಮಯ ಉತ್ತರವು ಅವರ ನಿರ್ಧಾರವನ್ನು ಇನ್ನೂ ಅಸ್ಪಷ್ಟವಾಗಿರಿಸಿದೆ, ಅಭಿಮಾನಿಗಳನ್ನು ಗೊಂದಲದಲ್ಲಿ ಇರಿಸಿದೆ.

ಸಿಎಸ್‌ಕೆಯ ಕಳಪೆ ಪ್ರದರ್ಶನ

ಐಪಿಎಲ್ 2025 ಸಿಎಸ್‌ಕೆಗೆ ನಿರಾಸೆಯ ಋತುವಾಗಿದೆ. ತಂಡವು ಚೆಪಾಕ್‌ನಲ್ಲಿ ನಾಲ್ಕು ಸತತ ಪಂದ್ಯಗಳಲ್ಲಿ ಸೋತಿದೆ, ಇದು ಅವರ ಗೃಹಾಂಗಣದ ಪ್ರಾಬಲ್ಯಕ್ಕೆ ಧಕ್ಕೆಯುಂಟುಮಾಡಿದೆ. ಮೆಗಾ ಹರಾಜಿನಲ್ಲಿ ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಮತ್ತು ವಿಜಯ್ ಶಂಕರ್‌ರಂತಹ ಆಟಗಾರರನ್ನು ಖರೀದಿಸಿದ ನಿರ್ಧಾರವು ವಿಫಲವಾಗಿದೆ, ಇದು ತಂಡದ ಬ್ಯಾಟಿಂಗ್ ಕೊರತೆಯನ್ನು ಎತ್ತಿ ತೋರಿಸಿದೆ. ಧೋನಿ ಸ್ವತಃ ತಂಡದ ಆಯ್ಕೆಯ ಬಗ್ಗೆ ಕಾಮೆಂಟ್ ಮಾಡಿದ್ದು, “ಈ ಋತುವಿನಲ್ಲಿ ನಾವು ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದೇವೆ, ಆದರೆ ಆಟಗಾರರ ಪ್ರದರ್ಶನ ಸ್ಥಿರವಾಗಿಲ್ಲ. ಮೆಗಾ ಹರಾಜಿನ ನಂತರ ತಂಡವನ್ನು ಹೊಸದಾಗಿ ಕಟ್ಟಿಕೊಳ್ಳುವಾಗ ಇಂತಹ ಸವಾಲುಗಳು ಸಾಮಾನ್ಯ” ಎಂದು ಹೇಳಿದ್ದಾರೆ. ಮಾಜಿ ಆಟಗಾರ ಸುರೇಶ್ ರೈನಾ, ಸಿಎಸ್‌ಕೆಯ ಹರಾಜು ತಂತ್ರದಲ್ಲಿ ಧೋನಿಯ ಪಾತ್ರ ಕಡಿಮೆಯಿತ್ತು ಎಂದು ಸೂಚಿಸಿದ್ದು, ತಂಡದ ವೈಫಲ್ಯಕ್ಕೆ ಆಡಳಿತದ ನಿರ್ಧಾರಗಳೇ ಕಾರಣ ಎಂದು ಒತ್ತಿ ಹೇಳಿದ್ದಾರೆ.

ಧೋನಿಯ ಸಂಭಾವ್ಯ ಉತ್ತರಾಧಿಕಾರಿ?

ಸಿಎಸ್‌ಕೆ ತನ್ನ ಭವಿಷ್ಯದ ಯೋಜನೆಗಳತ್ತ ಗಮನ ಹರಿಸಿದೆ, ವಿಶೇಷವಾಗಿ ಧೋನಿಯ ಸ್ಥಾನಕ್ಕೆ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಪ್ರಕಾರ, ಬರೋಡಾದ ಯುವ ಆಟಗಾರ ಉರ್ವಿಲ್ ಪಟೇಲ್ ಅವರನ್ನು ಸಿಎಸ್‌ಕೆ ಟ್ರಯಲ್ಸ್‌ಗೆ ಆಹ್ವಾನಿಸಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 28 ಎಸೆತಗಳಲ್ಲಿ ಶತಕ ಗಳಿಸಿದ ಉರ್ವಿಲ್, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಗಮನ ಸೆಳೆದಿದ್ದಾರೆ. ಗುಜರಾತ್ ಟೈಟಾನ್ಸ್‌ಗೆ 2024 ರಲ್ಲಿ ಆಯ್ಕೆಯಾಗಿದ್ದರೂ, ಅವರಿಗೆ ಆಡುವ ಅವಕಾಶ ಸಿಗಲಿಲ್ಲ. 2025ರ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದರು. ಆದರೆ, ಸಿಎಸ್‌ಕೆಯ ಆಸಕ್ತಿಯು ಧೋನಿಯ ನಿರ್ಗಮನದ ನಂತರ ವಿಕೆಟ್‌ಕೀಪಿಂಗ್ ಸ್ಥಾನವನ್ನು ತುಂಬುವ ಯೋಜನೆಯನ್ನು ಸೂಚಿಸುತ್ತದೆ. ತಂಡದಲ್ಲಿ ಡೆವೊನ್ ಕಾನ್ವೇ ಮತ್ತು ವಂಶ್ ಬೇಡಿಯಂತಹ ಬ್ಯಾಕಪ್ ವಿಕೆಟ್‌ಕೀಪರ್‌ಗಳಿದ್ದರೂ, ಉರ್ವಿಲ್‌ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಸಿಎಸ್‌ಕೆಗೆ ಆಕರ್ಷಕವಾಗಿದೆ.

ಯುವ ಆಟಗಾರರಿಗೆ ಅವಕಾಶ

ಸಿಎಸ್‌ಕೆ ಆಡಳಿತವು ಈ ಋತುವಿನ ವೈಫಲ್ಯಕ್ಕೆ ಅನುಭವಿ ಆಟಗಾರರ ಮೇಲಿನ ಅತಿಯಾದ ಅವಲಂಬನೆಯನ್ನು ದೂಷಿಸಿದೆ. ರಾಹುಲ್ ತ್ರಿಪಾಠಿ (ಕಳಪೆ ಫಾರ್ಮ್), ದೀಪಕ್ ಹೂಡಾ (ಸ್ಥಿರತೆಯ ಕೊರತೆ), ಮತ್ತು ವಿಜಯ್ ಶಂಕರ್ ತಂಡದ ನಿರೀಕ್ಷೆಗಳನ್ನು ಈಡೇರಿಸಲಿಲ್ಲ. ಇದರಿಂದಾಗಿ, ಕೊನೆಯ ನಾಲ್ಕು ಪಂದ್ಯಗಳಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ನಿರ್ಧಾರವನ್ನು ತಂಡ ಕೈಗೊಂಡಿದೆ ಎಂದು ವರದಿಯಾಗಿದೆ. ಇದು ತಂಡದ ಭವಿಷ್ಯದ ರೂಪುರೇಷೆಯನ್ನು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.