Last Updated:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕ್ಯಾಪ್ಟನ್ ಆಗಿ ಕೃನಾಲ್ ಪಾಂಡ್ಯ ಪರ್ಫೆಕ್ಟ್ ಎಂದು ಟೀಂ ಇಂಡಿಯಾ ಲೆಜೆಂಡ್ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಅವರ ಹೇಳಿಕೆ ಇಂದಿನ ಕಾರಣ ಇದೇನಾ?
2025ರ ಐಪಿಎಲ್ ಆವೃತ್ತಿಯಲ್ಲಿ (IPL 2025) ರಾಯಲ್ ಚಾಲೆಂಜರ್ಸ್ ತಂಡದ (Royal Challengers Bengaluru) ಪರ ಆಲ್ ರೌಂಡರ್ ಕೃನಾಲ್ ಪಾಂಡ್ಯ (Krunal Pandya) ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟ್ ಮೂಲಕ 97 ರನ್, ಬಾಲ್ ನಲ್ಲಿ 13 ವಿಕೆಟ್ ಕಿತ್ತು ಭರವಸೆ ಮೂಡಿಸಿದ್ದಾರೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ (Team India) ಲೆಜೆಂಡ್ ಸುನೀಲ್ ಗವಾಸ್ಕರ್ (Sunil Gavaskar), ಕೃನಾಲ್ ಪಾಂಡ್ಯ ಅವರಲ್ಲಿ ನಾಯಕತ್ವದ ಲಕ್ಷಣಗಳು ಕಂಡು ಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ನೀಡುತ್ತಿರುವ ಪ್ರದರ್ಶನದಂತೆ ನಾಯಕತ್ವದ ಜವಾಬ್ದಾರಿ ನಿರ್ವಹಿಸಲು ಅರ್ಹ ಎಂದು ಹೇಳಿದ್ದಾರೆ.
ಹೌದು, ಐಪಿಎಲ್ 2025ಕ್ಕೂ ಮೊದಲು ರಜತ್ ಪತಿದಾರ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದರೂ, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಕೃನಾಲ್ ನಾಯಕತ್ವಕ್ಕೆ ಅರ್ಹರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೃನಾಲ್ ಕ್ಯಾಪ್ಟನ್ ಆದ್ರೆ ಹೇಗಿರುತ್ತೆ ಗೊತ್ತಾ?
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗವಾಸ್ಕರ್, ಕೃನಾಲ್ ಪಾಂಡ್ಯ ಅವರ ಆಲೋಚನೆಗಳು ಮತ್ತು ಆಟದ ಮೇಲಿನ ದೃಷ್ಟಿಯನ್ನು ಗಮನಿಸಿದರೆ ನಾಯಕತ್ವದ ಜವಾಬ್ದಾರಿಗಳಿಗೆ ಅವರು ಸೂಕ್ತ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದರಲ್ಲೂ ಅವರ ಆಟದ ಪ್ರತಿ ಕ್ಷಣದಲ್ಲೂ ಇಂಪ್ರೆಸಿವ್ ಆಗಿ ಕಾಣುತ್ತಿದ್ದಾರೆ. ಆದರೂ ಯಾರೂ ಅವರನ್ನು ನಾಯಕತ್ವಕ್ಕೆ ಪರಿಗಣಿಸಿಲ್ಲ. ಆದರೆ ಅವರ ಆಲೋಚನಾ ವಿಧಾನವನ್ನು ಗಮನಿಸಿದರೆ, ನಾಯಕತ್ವವು ಅವರಿಗೆ ಸೂಕ್ತವಾದ ಜವಾಬ್ದಾರಿಯಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಲಕ್ನೋ ಸೂಪರ್ ಜೈಂಟ್ ತಂಡದಲ್ಲಿ ಕಳೆದ ಬಳಿಕ ಕೃನಾಲ್ ಪಾಂಡ್ಯ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಬಿಡುಗಡೆಯಾಗಿದ್ದರು. ಆರ್ಸಿಬಿ ತಂಡದ ಕೃನಾಲ್ ಅವರನ್ನು 5.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಕೃನಾಲ್ ಪಾಂಡ್ಯ ಈ ಆವೃತ್ತಿಯಲ್ಲಿ ಬಾಲ್ ಮೂಲಕ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದು, ಇದುವರೆಗೂ 10 ಪಂದ್ಯಗಳನ್ನ ಆಡಿ 13 ವಿಕೆಟ್ ಪಡೆದುಕೊಂಡಿದ್ದಾರೆ. 45 ರನ್ ನೀಡಿ 4 ವಿಕೆಟ್ ಪಡೆದುಕೊಂಡಿದ್ದು, 8.62 ಎಕಾನಮಿಯೊಂದಿಗೆ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ವಿಶೇಷ ಎಂದರೆ ಡೆಲ್ಲಿ ವಿರುದ್ಧ ಆಡಿದ ಪಂದ್ಯದಲ್ಲಿ ಅಜೇಯ 73 ರನ್ ಗಳಿಸಿ ಬ್ಯಾಟಿಂಗ್ ನಲ್ಲೂ ತಮ್ಮ ಟ್ಯಾಲೆಂಟ್ ತೋರಿಸಿದ್ದರು.
2025ರ ಆವೃತ್ತಿಯ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಆರ್ಸಿಬಿ ಮೂರನೇ ಸ್ಥಾನದಲ್ಲಿದ್ದು, ಇಂದು ಚಿನ್ನಸ್ವಾಮಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವೂ ಪ್ಲೇ ಆಫ್ಸ್ ರೇಸ್ ಗೆ ಪ್ರಮುಖವಾಗಿದೆ. ಆರ್ಸಿಬಿ ಈಗಾಗಲೇ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಪ್ರಮಖವಾಗಿ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ರಂತಹ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಸಿಎಸ್ಕೆ ತಂಡ ಸತತ ಸೋಲುಗಳಿಂದ ಕಂಗೆಟ್ಟಿ, ಆದರೆ ಪ್ರಮುಖ ಸಂದರ್ಭದಲ್ಲಿ ಸಿಎಸ್ಕೆ ಕಾಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.
ಆರ್ಸಿಬಿ ತಂಡದಲ್ಲಿ ಟಾಪ್ ಆರ್ಡರ್ ನಲ್ಲಿ ಸ್ಥಿರ ಪ್ರದರ್ಶನ ಕಂಡು ಬರುತ್ತಿದ್ದು, ಬೌಲಿಂಗ್ ಯೂನಿಟ್ ಟೀಂ ಆಗಿ ಪ್ರದರ್ಶನ ನೀಡುತ್ತಿದೆ. ಅಲ್ಲದೇ, ಹೋಂ ಪಿಚ್ ನಲ್ಲಿ ಹೊರತು ಪಡಿಸಿದರೆ, ಹೊರಾಂಗಣದ ಕ್ರೀಡಾಂಗಣದಲ್ಲಿ ಸೋಲಿಲ್ಲದ ಸರದಾರರಾಗಿ ಮುನ್ನುಗ್ಗುತ್ತಿದ್ದಾರೆ.
Bangalore [Bangalore],Bangalore,Karnataka