Last Updated:
ಸನ್ ರೈಸರ್ಸ್ ಹೈದರಾಬಾದ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಆರ್ಸಿಬಿ-ಆರ್ಆರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ನಡುವಿನ ಮಾತುಕತೆ ಫೋಟೋಗಳು ವೈರಲ್ ಆಗಿವೆ.
2025ನೇ ಐಪಿಎಲ್ (IPL 2024) ಆವೃತ್ತಿಯ 43ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಮಣಿಸುವ ಮೂಲಕ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಗೆಲುವು ಪಡೆದುಕೊಂಡಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಚೆಪಕ್ ಕ್ರೀಡಾಂಗಣದಲ್ಲಿ ಹೈದರಾಬಾದ್ ತಂಡ, ಚೆನ್ನೈ ವಿರುದ್ಧ ಗೆಲುವು ಪಡೆದುಕೊಂಡಿದ್ದು, ಇದರೊಂದಿಗೆ ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಕೆಳಕ್ಕೆ ತಳ್ಳಿ 8ನೇ ಸ್ಥಾನಕ್ಕೇರಿದೆ. ಇತ್ತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ಬೆಂಗಳೂರು (Bengaluru) ತಂಡ ಅಭಿಮಾನಿಗಳ ಭರವಸೆಯನ್ನು ಹೆಚ್ಚಿಸಿದೆ. ಆದರೆ ತಂಡವೂ ಈ ಆವೃತ್ತಿಯಲ್ಲಿ ಕೆಲ ಏಳು ಬೀಳುಗಳ ನಡುವೆಯೂ ಕಪ್ ಗೆಲ್ಲುವ ನಿರೀಕ್ಷೆಯನ್ನು ಡಬಲ್ ಮಾಡಿದೆ. ಆದರೆ ಸದ್ಯ ಸಾಮಾಜಿಕ ತಾಲತಾಣದಲ್ಲಿ (Social Media) ವೈರಲ್ ಆಗುತ್ತಿರುವ ಫೋಟೋವೊಂದು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಎಲ್ಲವೂ ಸರಿ ಇದೆಯಾ? ಎಂಬ ಪ್ರಶ್ನೆಗಳನ್ನು ಮೂಡಿಸಿ ಟ್ರೋಲ್ ಮಾಡಲಾಗುತ್ತಿದೆ. ಹಾಗಾದರೆ ಆ ಫೋಟೋ ಯಾವುದು? ಅಷ್ಟಕ್ಕೂ ಆರ್ಸಿಬಿ (RCB) ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ನೀಡಿದ ಹೇಳಿದ್ದೇನು? ಅಂತ ನಾವು ಕ್ಲೀಯರ್ ಆಗಿ ಹೇಳ್ತೀವಿ ಈ ಸ್ಟೋರಿ ಓದಿ.
2025ರ ಆವೃತ್ತಿಯ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು, ರೋಚಕವಾಗಿ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಗೆಲುವಿನ ನಗೆ ಬೀರಿತ್ತು. ಆದರೆ ಪಂದ್ಯದ ವೇಳೆ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರ ನಡುವಿನ ಮಾತುಕತೆ ಕ್ಷಣಗಳ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಹಾಗೂ ಫೋಟೋದಲ್ಲಿ ಆರ್ಸಿಬಿ ಬ್ಯಾಟಿಂಗ್ ಕೋಚ್ ಕಾರ್ತಿಕ್ ಮತ್ತು ಮುಖ್ಯ ಕೋಚ್ ಆಂಡಿ ಫ್ಲವರ್ ಅವರು ಲಾಂಗ್-ಆನ್ ಗಡಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿಗೆ ಸಲಹೆಗಳನ್ನು ನೀಡುತ್ತಿದ್ದರು. ಆದರೆ ವಿರಾಟ್ ಕೊಜ್ಲಿ ಅವರ ಸಲಹೆಗಳನ್ನು ತಿರಸ್ಕಾರ ಮಾಡುವಂತೆ ಕೈ ಮುಗಿದು ಬಿಟ್ಟು ಬಿಡಿ ಎಂಬಂತೆ ಕಾಣಿಸಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ಆತಂಕವನ್ನು ಹೆಚ್ಚು ಮಾಡಿದ್ದು, ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಆದರೆ, ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರ ನಡುವಿನ ಸಂಭಾಷಣೆಯ ನಿಖರವಾದ ಮಾಹಿತಿ ಇದುವರೆಗೂ ಬಹಿರಂಗವಾಗಿಲ್ಲ. ಆದರೆ, ಆರ್ಸಿಬಿ-ಆರ್ಆರ್ ವಿರುದ್ಧ 11 ರನ್ಗಳ ಜಯ ಗಳಿಸಿದ ಬಳಿಕ ಮಾತನಾಡಿದ್ದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್, ಕೊಹ್ಲಿ ಅವರ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ: Virat Kohli: ಕೊಹ್ಲಿ ಸಕ್ಸಸ್ ಹಿಂದೆ ರಾಮಭಕ್ತ ಹನುಮ! ವಿರಾಟ್ ಜೊತೆ ಸದಾ ಇರ್ತಾನೆ ಆಂಜನೇಯ!
ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳಲ್ಲಿ 70 ರನ್ ಗಳಿಸಿ ನಿರ್ಗಮಿಸಿದ್ದರು. ಈ ಬಗ್ಗೆ ಆರ್ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ ಕಾರ್ತಿಕ್, ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದರು. ಅಸಲಿಗೆ ಡಿಕೆ ಹೇಳಿದಾದ್ರು ಏನು ಅಂತ ನೋಡುವುದಾದರೆ, ಕೊಹ್ಲಿ ಅವರ ಕ್ರಿಕೆಟ್ ಆಸಕ್ತಿಯ ಬಗ್ಗೆ ಪದಗಳಲ್ಲಿ ಹೇಳಲು ಆಗೋದಿಲ್ಲ. 18 ವರ್ಷಗಳ ಕಾಲ ಆರ್ಸಿಬಿಯಲ್ಲಿ ಆಡುವುದು ಬೇರೆಯದ್ದೆ ವಿಚಾರ, ಇದು ಅವರ ವ್ಯಕ್ತಿತ್ವವನನ್ನು ತೋರಿಸುತ್ತದೆ. ಯಾವುದೇ ಒಂದು ವಿಚಾರಕ್ಕೆ ಅವರು ಕೈ ಹಾಕಿದರೂ ಪರಿಸ್ಥಿತಿಗಳನ್ನು ಆರ್ಥ ಮಾಡಿಕೊಳ್ಳುವ ರೀತಿ ಅತ್ಯುತ್ತಮ. ಆದರೆ ನಾನು ಅವರ ಬಗ್ಗೆ ಮಾತನಾಡಲು ತುಂಬಾ ಚಿಕ್ಕವನು. ಅವನು ಸಂಪೂರ್ಣ ಚಾಂಪಿಯನ್. ದೇವದತ್ ಪಡಿಕ್ಕಲ್ ಜೊತೆಗೆ, ಇನ್ನಿಂಗ್ಸ್ ಆರಂಭದಲ್ಲಿ ಫಿಲ್ ಸಾಲ್ಟ್ ಜೊತೆಗೆ ಉತ್ತಮವಾಗಿ ಬ್ಯಾಟ್ ಮಾಡಿದರು. ಅವರ ಬಾಡಿ ಲ್ಯಾಂಗ್ವೇಜ್, ಬದ್ಧತೆ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
Dinesh Karthik’s on work ethics of virat kohli…
Fans are loyal to virat and virat is loyal to fans!!! pic.twitter.com/L6q0nHfsrU
— Ram Vedi (@ramvedii) April 26, 2025
ಪಂದ್ಯದಲ್ಲಿ ಆರ್ಆರ್ ಚೆನ್ನಾಗಿ ಕಾಣಿಸಿತು. ಕೇವಲ 12 ಎಸೆತಗಳಲ್ಲಿ 18 ರನ್ಗಳು ಮಾತ್ರ ಬೇಕಾಗಿತ್ತು. ಆದರೆ ಬೌಲರ್ ಜೋಶ್ ಹ್ಯಾಜಲ್ವುಡ್ ಅವರ ಅದ್ಭುತವಾದ ಓವರ್ ನಿಂದ ಆರ್ಸಿಬಿ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿತ್ತು. ಇದರೊಂದಿಗೆ ಈ ಆವೃತ್ತಿಯಲ್ಲಿ ಬೆಂಗಳೂರು ತಂಡ ತವರಿನಲ್ಲಿ ಮೊದಲ ಜಯ ಗಳಿಸಿತ್ತು.
Bangalore [Bangalore],Bangalore,Karnataka
April 26, 2025 5:00 PM IST