ಬಿಜೆಪಿ ಶಾಸಕನಿಂದ ಆರೋಪ
ಶ್ರೀಗಂಗಾನಗರದ ಬಿಜೆಪಿ ಶಾಸಕರಾದ ಬಿಹಾನಿ, “ ಕೊನೆಯ ಓವರ್ನಲ್ಲಿ 9 ರನ್ಗಳನ್ನು ಗಳಿಸಲಾಗದೇ ಸೋತಿರುವುದು ಸಂದೇಹಾಸ್ಪದವಾಗಿದೆ. ಮಕ್ಕಳು ಕೂಡ ಇದನ್ನು ಫಿಕ್ಸಿಂಗ್ ಎಂದು ಕರೆಯುತ್ತಾರೆ,” ಎಂದು News18 ರಾಜಸ್ಥಾನಕ್ಕೆ ನೀಡಿದ ಸಂದರ್ಶನದಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದರು. ಅವರು ಈ ವಿಷಯದಲ್ಲಿ BCCI ಮತ್ತು ಇತರ ಸಂಸ್ಥೆಗಳಿಂದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು. ಇದಲ್ಲದೆ, RCAನನ್ನು ಐಪಿಎಲ್ ಆಯೋಜನೆಯಿಂದ ದೂರವಿಡಲಾಗಿದೆ ಎಂದು ಆರೋಪಿಸಿ ಎಂದು ದೂರಿದ್ದರು.
ಬಿಹಾನಿ ವಿರುದ್ಧ ಕ್ರಮಕ್ಕೆ ಒತ್ತಾಯ
ಈ ಆರೋಪಗಳಿಗೆ RR ತೀವ್ರವಾಗಿ ಪ್ರತಿಕ್ರಿಯಿಸಿತು. ತಂಡದ ಹಿರಿಯ ಅಧಿಕಾರಿ ದೀಪ್ ರಾಯ್, ಬಿಹಾನಿಯ ಹೇಳಿಕೆಗಳನ್ನು “ಸತ್ಯಕ್ಕೆ ದೂರವಾದ, ಆಧಾರರಹಿತ ಮತ್ತು ಪುರಾವೆಯಿಲ್ಲದವು ಎಂದು ಹೇಳಿದ್ದಾರೆ. RR ರಾಜಸ್ಥಾನದ ಮುಖ್ಯಮಂತ್ರಿ, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಠೋಡ್, ಮತ್ತು ಕ್ರೀಡಾ ಕಾರ್ಯದರ್ಶಿಗೆ ಪತ್ರ ಬರೆದು, ಬಿಹಾನಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಆರೋಪಗಳು ತಂಡದ ಖ್ಯಾತಿಗೆ ಧಕ್ಕೆ ತರುವುದಲ್ಲದೆ, BCCI, ರಾಜಸ್ಥಾನ ಸ್ಪೋರ್ಟ್ಸ್ ಕೌನ್ಸಿಲ್, ಮತ್ತು ಕ್ರಿಕೆಟ್ನ ಸಮಗ್ರತೆಯನ್ನು ಕೆಡಿಸುತ್ತವೆ ಎಂದು RR ದೂರಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರ ಸಾವಿಗೆ ಖಂಡನೆ; ಐಪಿಎಲ್ನಿಂದ ಮಹತ್ವದ ನಿರ್ಧಾರ
ಬಿಸಿಸಿಐ ಪ್ರತಿಕ್ರಿಯೆ
BCCI ಕೂಡ ಈ ಆರೋಪಗಳನ್ನು ತಳ್ಳಿಹಾಕಿದೆ. ಹಿರಿಯ BCCI ಅಧಿಕಾರಿಯೊಬ್ಬರು, “ RCAದಲ್ಲಿ ಶೀಘ್ರದಲ್ಲೇ ಚುನಾವಣೆಗಳಿವೆ, ಇದರ ಸುತ್ತ ರಾಜಕೀಯ ನಾಟಕ ನಡೆಯುತ್ತಿದೆ. BCCIನ ಭ್ರಷ್ಟಾಚಾರ ನಿಗ್ರಹ ಘಟಕವು 24/7 ಐಪಿಎಲ್ನ ಮೇಲೆ ನಿಗಾ ಇಡುತ್ತಿದೆ. ಬಿಹಾನಿಯ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ,” ಎಂದು Times of Indiaಗೆ ತಿಳಿಸಿದ್ದಾರೆ. BCCIನ ಪಾರದರ್ಶಕತೆಯ ಕ್ರಮಗಳಾದ ಬ್ಯಾಟ್ ಗಾಜಿಂಗ್ ಟೆಸ್ಟ್ನಂತಹ ಕ್ರಮಗಳು ಆಟದ ಸಮಗ್ರತೆಯನ್ನು ಕಾಪಾಡುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.
ಟಿಕೆಟ್ ನೀಡದಿರುವುಕ್ಕೆ ಆರೋಪ
ಈ ವಿವಾದದ ಹಿಂದೆ ಟಿಕೆಟ್ ವಿತರಣೆಯ ವಿಷಯವೂ ಒಂದು ಕಾರಣವಾಗಿರಬಹುದು. ಸಾಮಾನ್ಯವಾಗಿ RCAಗೆ ಪ್ರತಿ ಪಂದ್ಯಕ್ಕೆ 1800 ಟಿಕೆಟ್ಗಳು ಲಭ್ಯವಾಗುತ್ತಿದ್ದವು, ಆದರೆ ಈ ಋತುವಿನಲ್ಲಿ ಇದು 1000-1200ಕ್ಕೆ ಇಳಿದಿದೆ. ರಾಜಸ್ಥಾನ್ ರಾಯಲ್ಸ್ ಮೂಲಗಳ ಪ್ರಕಾರ, RCAನ ಕೆಲವು ಸದಸ್ಯರು ಹೆಚ್ಚಿನ ಉಚಿತ ಟಿಕೆಟ್ಗಳನ್ನು ಒತ್ತಾಯಿಸಿದ್ದಾರೆ, ಇದನ್ನು RR ನಿರಾಕರಿಸಿದೆ. ಈ ಭಿನ್ನಾಭಿಪ್ರಾಯವೇ ಆರೋಪಗಳಿಗೆ ಕಾರಣವಾಗಿರಬಹುದು ಎಂದು Times of India ವರದಿ ಮಾಡಿದೆ.
ಇದನ್ನೂ ಓದಿ: ಪ್ಲೇ ಆಫ್ ರೇಸ್ನಿಂದ ಆ 3 ತಂಡಗಳು ಬಹುತೇಕ ಔಟ್! ಡೆಲ್ಲಿ, RCB ಸೇರಿ ಯಾವ ತಂಡಕ್ಕೆ ಹೆಚ್ಚು ಚಾನ್ಸ್?
ಪ್ರೇಕ್ಷಕರ ಸಂಖ್ಯೆಯಲ್ಲಿ ಕುಸಿತ
RRನ ಕಳಪೆ ಪ್ರದರ್ಶನದಿಂದಾಗಿ ಜೈಪುರದ ಪಂದ್ಯಗಳಿಗೆ ಪ್ರೇಕ್ಷಕರ ಸಂಖ್ಯೆಯೂ ಕುಸಿದಿದೆ. ಟಿಕೆಟ್ ಮಾರಾಟವು 1800ರಿಂದ 1000-1200ಕ್ಕೆ ಇಳಿದಿರುವುದು ತಂಡದ ಜನಪ್ರಿಯತೆಯ ಮೇಲೆ ಪರಿಣಾಮ ಬೀರಿದೆ. 2013ರ ಸ್ಪಾಟ್ ಫಿಕ್ಸಿಂಗ್ ಕಾರಣದಿಂದ RR ಮತ್ತು CSKಗೆ 2016-17ರಲ್ಲಿ ನಿಷೇಧ ಎದುರಾಗಿತ್ತು, ಇದು ಈ ಆರೋಪ ಮತ್ತೆ ದೊಡ್ಡ ಆಘಾತ ತಂದಿತ್ತು.
ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಫಿಕ್ಸಿಂಗ್ಗೆ ಪ್ರಯತ್ನಿಸುತ್ತಿದ್ದಾರೆ ಎಂಬ BCCI ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಆರೋಪಗಳು ಗಮನ ಸೆಳೆದಿವೆ. ಆದರೆ, BCCI ಈ ವಿಷಯದಲ್ಲಿ ಯಾವುದೇ ದೃಢೀಕೃತ ತನಿಖೆಯನ್ನು ಘೋಷಿಸಿಲ್ಲ, ಮತ್ತು RR ತನ್ನ ಖ್ಯಾತಿಯನ್ನು ರಕ್ಷಿಸಿಕೊಳ್ಳಲು ಕಾನೂನು ಕ್ರಮಕ್ಕೆ ಮುಂದಾಗಿದೆ.
April 23, 2025 5:08 PM IST