IPL Replacement: ಐಪಿಎಲ್ ಮಧ್ಯದಲ್ಲಿ 2 ತಂಡಗಳಲ್ಲಿ ಬದಲಾವಣೆ! ಚೆನ್ನೈ ಸೇರಿದ 17 ವರ್ಷದ ಯುವಕ! ಹೈದರಾಬಾದ್​ಗೆ ಕನ್ನಡಿಗ ಸೇರ್ಪಡೆ | CSK Replace Ruturaj Gaikwad with Ayush Mhatre SRH Sign Smaran Ravichandran as Injury Replacements

IPL Replacement: ಐಪಿಎಲ್ ಮಧ್ಯದಲ್ಲಿ 2 ತಂಡಗಳಲ್ಲಿ ಬದಲಾವಣೆ! ಚೆನ್ನೈ ಸೇರಿದ 17 ವರ್ಷದ ಯುವಕ! ಹೈದರಾಬಾದ್​ಗೆ ಕನ್ನಡಿಗ ಸೇರ್ಪಡೆ | CSK Replace Ruturaj Gaikwad with Ayush Mhatre SRH Sign Smaran Ravichandran as Injury Replacements

Last Updated:

ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಬದಲಾವಣೆ. ಜಂಪಾ ಬದಲಿಗೆ ಸ್ಮರಣ್, ಗಾಯಕ್ವಾಡ್ ಬದಲಿಗೆ ಆಯುಷ್.

ಸ್ಮರಣ್ ರವಿಚಂದ್ರನ್, ಆಯುಷ್ ಮ್ಹಾತ್ರೆಸ್ಮರಣ್ ರವಿಚಂದ್ರನ್, ಆಯುಷ್ ಮ್ಹಾತ್ರೆ
ಸ್ಮರಣ್ ರವಿಚಂದ್ರನ್, ಆಯುಷ್ ಮ್ಹಾತ್ರೆ

ಐಪಿಎಲ್ 2025ರ (IPL 2025) ಋತುವಿನ ಹಿನ್ನೆಲೆಯಲ್ಲಿ, ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK)ತಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಎರಡೂ ತಂಡಗಳಿಗೆ ಹೊಸ ಆಟಗಾರರು ಸೇರ್ಪಡೆಗೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಸ್ಪಿನ್ನರ್ ಆಡಮ್ ಜಂಪಾ ಗಾಯದ ಕಾರಣದಿಂದಾಗಿ ಈ ಋತುವಿನ ಉಳಿದ ಪಂದ್ಯಗಳಿಗೆ ಹೊರಗುಳಿದಿದ್ದಾರೆ ಮತ್ತು ಅವರ ಬದಲಿಗೆ ಕರ್ನಾಟಕದ ಬ್ಯಾಟ್ಸ್‌ಮನ್ ರವಿಚಂದ್ರನ್ ಸ್ಮರಣ್ ಅವರನ್ನು ಆಯ್ಕೆ ಮಾಡಲಾಗಿದೆ

ಜಂಪಾ ಬದಲಿಗೆ ಸ್ಮರಣ್

ತಂಡದ ಅನುಭವಿ ಸ್ಪಿನ್ನರ್ ಗಾಯದಿಂದಾಗಿ ಲೀಗ್‌ನ 18 ನೇ ಸೀಸನ್‌ನಿಂದ ಹೊರಗುಳಿದಿದ್ದಾರೆ. ಐಪಿಎಲ್ ಎಕ್ಸ್ ನಲ್ಲಿ ಈ ಮಾಹಿತಿಯನ್ನು ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್, ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಮ್ ಜಂಪಾ ಅವರನ್ನು ಲೀಗ್‌ನಿಂದ ಹೊರಬಿದ್ದಿರುವುದನ್ನ ದೃಢಪಡಿಸಿದೆ. ಜಂಪಾ ಭುಜದ ಗಾಯದಿಂದ ಬಳಲುತ್ತಿದ್ದರು. ಅವರು ಮೊದಲೆರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದರು.

30 ಲಕ್ಷಕ್ಕೆ ಹೈದರಾಬಾದ್ ಸೇರಿ ಕನ್ನಡಿಗ

ಜಂಪಾ ಸ್ಥಾನಕ್ಕೆ ಕರ್ನಾಟಕದ 21 ವರ್ಷದ ಎಡಗೈ ಬ್ಯಾಟ್ಸ್‌ಮನ್ ಸ್ಮರಣ್ ರವಿಚಂದ್ರನ್ ಅವರನ್ನು ಹೈದರಾಬಾದ್ ತಂಡವು ಅವರ ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಿದೆ. ಸ್ಮರಣ್ ಏಳು ಪ್ರಥಮ ದರ್ಜೆ ಪಂದ್ಯಗಳಲ್ಲಿ 64.50 ಸರಾಸರಿಯಲ್ಲಿ 516 ರನ್ ಗಳಿಸಿದ್ದಾರೆ. ಕಳೆದ ವರ್ಷ ಪಂಜಾಬ್ ವಿರುದ್ಧ ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 10 ಪಂದ್ಯಗಳಲ್ಲಿ 72.16 ಸರಾಸರಿಯಲ್ಲಿ 433 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಕೂಡ ಸೇರಿವೆ. ಆರು ಟಿ20 ಪಂದ್ಯಗಳಲ್ಲಿ ಅವರ ಬ್ಯಾಟ್​ನಿಂದ 170 ರನ್ ಬಂದಿವೆ. ಸ್ಮರಣ್ ರವಿಚಂದ್ರನ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಅವನು ತನ್ನ ಆಫ್ ಸ್ಪಿನ್ ಅನ್ನು ಎಸೆಯಬಹುದು.

ಇದನ್ನೂ ಓದಿ: ವಿನೋದ್ ಕಾಂಬ್ಳಿ ಬದುಕಿರುವವರೆಗೂ ಪ್ರತೀ ತಿಂಗಳು 30 ಸಾವಿರ ನೆರವು ಘೋಷಿಸಿದ ಲೆಜೆಂಡರಿ ಕ್ರಿಕೆಟರ್

ಗಾಯಕ್ವಾಡ್ ಜಾಗಕ್ಕೆ ಆಯುಷ್

ಇನ್ನು ಮೊಣಕೈ ಗಾಯದಿಂದ ಇಡೀ ಋತುವಿಗೆ ಹೊರಗುಳಿದ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬದಲಾಯಿಸಿದ್ದು, ಮುಂಬೈನ 17 ವರ್ಷದ ಕ್ರಿಕೆಟಿಗ ಆಯುಷ್ ಮ್ಹಾತ್ರೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದನ್ನು ಐಪಿಎಲ್ ಸಂಘಟಕರು ಸೋಮವಾರ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.

ಆಯುಷ್ ಮ್ಹಾತ್ರೆ ಮುಂಬೈ ಪರ 9 ಪ್ರಥಮ ದರ್ಜೆ ಪಂದ್ಯಗಳು ಮತ್ತು 7 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದು 962 ರನ್ ಗಳಿಸಿದ್ದಾರೆ. ಆಯುಷ್​ರನ್ನ ಸಿಎಸ್‌ಕೆ ಮೂಲಬೆಲೆ 30 ಲಕ್ಷಕ್ಕೆ ಖರೀದಿಸಿದೆ.