KKR vs PBKS: ರಹಾನೆ ಮಾಡಿದ ಆ ಒಂದೇ ಒಂದು ತಪ್ಪಿನಿಂದ ಕೆಕೆಆರ್​ಗೆ ಹೀನಾಯ ಸೋಲು! ಸ್ವತಃ ಒಪ್ಪಿಕೊಂಡ ಕೆಕೆಆರ್ ಕ್ಯಾಪ್ಟನ್ | My Mistake Cost Us the Game Ajinkya Rahane Admits Error in Not Taking Review

KKR vs PBKS: ರಹಾನೆ ಮಾಡಿದ ಆ ಒಂದೇ ಒಂದು ತಪ್ಪಿನಿಂದ ಕೆಕೆಆರ್​ಗೆ ಹೀನಾಯ ಸೋಲು! ಸ್ವತಃ ಒಪ್ಪಿಕೊಂಡ ಕೆಕೆಆರ್ ಕ್ಯಾಪ್ಟನ್ | My Mistake Cost Us the Game Ajinkya Rahane Admits Error in Not Taking Review

ಈ ಸೋಲಿನ ಕುರಿತು ಮಾತನಾಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡೆ ಮತ್ತು ಗೆಲ್ಲಲೇಬೇಕಾದ ಪಂದ್ಯವನ್ನು ಸೋತಿದ್ದು ತನ್ನ ತಪ್ಪಿನಿಂದ ಎಂದು ಅವರು ಒಪ್ಪಿಕೊಂಡಿದ್ದಾರೆ. ಬೌಲರ್‌ಗಳ ಕಠಿಣ ಪರಿಶ್ರಮದ ಹೊರತಾಗಿಯೂ, ಕಳಪೆ ಬ್ಯಾಟಿಂಗ್‌ನಿಂದಾಗಿ ಪಂಜಾಬ್ ವಿರುದ್ಧ ಸೋಲಬೇಕಾಯಿತು ಎಂದು ಅವರು ಹೇಳಿದ್ದಾರೆ.

ನನ್ನ ತಪ್ಪಿನಿಂದಲೇ ಸೋಲು

“ಮೈದಾನದಲ್ಲಿ ಏನಾಯಿತು ಎಂದು ನಾನು ನಿರ್ದಿಷ್ಟವಾಗಿ ಹೇಳಲು ಬಯಸುವುದಿಲ್ಲ.” ಈ ಸೋಲು ಎಲ್ಲಕ್ಕಿಂತ ಹೆಚ್ಚಾಗಿ ನೋವುಂಟು ಮಾಡುತ್ತದೆ. ಇದಕ್ಕೆ ನಾನೇ ಸಂಪೂರ್ಣ ಹೊಣೆಗಾರ. ನಾನು ಶಾಟ್ ಆಯ್ಕೆಯಲ್ಲಿ ತಪ್ಪು ಮಾಡಿದೆ. ಅಂಪೈರ್ ಎಲ್ಬಿಡಬ್ಲ್ಯೂ ನೀಡಿದ ನಂತರ, ನಾನು ಇನ್ನೊಂದು ತುದಿಯಲ್ಲಿದ್ದ ಅಂಗ್ಕ್ರಿಶ್ ಜೊತೆ ಚರ್ಚಿಸಿದೆ. ಅಂಪೈರ್ ಕಾಲ್​ ಆಗಬಹುದು ಎಂದೂ ಅವರು ಹೇಳಿದರು. ಅದಕ್ಕಾಗಿಯೇ ಆ ಸಮಯದಲ್ಲಿ ನಾನು ಚಾನ್ಸ್​ ಪಡೆಯಲು ಬಯಸಲಿಲ್ಲ. ನನಗೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲದ ಕಾರಣ ನಾನು ರಿವ್ಯೂವ್ ತೆಗದುಕೊಳ್ಳಲು ಹೋಗಲಿಲ್ಲ ಎಂದು ಹೇಳಿದರು. ಆದರೆ ಟಿವಿ ರಿಪ್ಲೇನಲ್ಲಿ ಚೆಂಡ್​ ಔಟ್​ ಸೈಡ್ ಲೆಗ್​ ಇರುವುದು ಸ್ಪಷ್ಟವಾಗಿತ್ತು. ಒಂದು ವೇಳೆ ರಿವ್ಯೂವ್ ತೆಗೆದುಕೊಂಡಿದ್ದರೆ, ರಹಾನೆ ಜೀವದಾನ ಪಡೆದು ಪಂದ್ಯವನ್ನು ಗೆಲ್ಲುವ ಸಾಧ್ಯತೆ ಇತ್ತು.

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಪಂಜಾಬ್ ಕಿಂಗ್ಸ್! ಕೆಕೆಆರ್​ ವಿರುದ್ಧ 112 ರನ್​ಗಳ ಗುರಿಯನ್ನ ಡಿಫೆಂಡ್ ಮಾಡಿ ಗೆಲುವು

ನಿರ್ಲಕ್ಷ್ಯದ ಆಟ ಸೋಲಿಗೆ ಕಾರಣ

ನಮ್ಮ ಬ್ಯಾಟಿಂಗ್ ವಿಭಾಗ ಇಂದು ಅತ್ಯಂತ ಕೆಟ್ಟದಾಗಿ ಆಡಿತು. ನಾವು ಸಾಮೂಹಿಕವಾಗಿ ವಿಫಲರಾಗಿದ್ದೇವೆ. ಬೌಲರ್‌ಗಳು ತುಂಬಾ ಶ್ರಮವಹಿಸಿ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಅನ್ನು ಕೇವಲ 111 ರನ್‌ಗಳಿಗೆ ಆಲೌಟ್ ಮಾಡಿದರು. ಆದರೆ ನಾವು ಅವರ ಕಠಿಣ ಪರಿಶ್ರಮಕ್ಕೆ ಯಾವುದೇ ಪ್ರತಿಫಲವಿಲ್ಲದಂತೆ ಮಾಡಿದ್ದೇವೆ. ನಮ್ಮ ನಿರ್ಲಕ್ಷ್ಯದ ಆಟವೇ ನಮ್ಮ ಸೋಲಿಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಈಗ ನನ್ನ ಮನಸ್ಸಿನಲ್ಲಿ ಅನೇಕ ಭಾವನೆಗಳು ಓಡಾಡುತ್ತಿವೆ. ಸುಲಭವಾಗಿ ಸಾಧಿಸಬಹುದಾದ ಗುರಿಯನ್ನು ನಾವು ದಾಟಲು ಸಾಧ್ಯವಾಗಲಿಲ್ಲ. ನನ್ನ ಜನರೊಂದಿಗೆ ಏನು ಮಾತನಾಡಬೇಕೆಂದು ನನಗೆ ತಿಳಿದಿಲ್ಲ. ಇನ್ನೂ ಅರ್ಧದಷ್ಟು ಟೂರ್ನಿ ಬಾಕಿ ಇದೆ. ಆದಾರೂ, ನಾವು ಸಕಾರಾತ್ಮಕ ಮನೋಭಾವದಿಂದ ಮುಂದುವರಿಯಬೇಕು ಎಂದು ಅಜಿಂಕ್ಯ ರಹಾನೆ ಹೇಳಿದರು.

ರಿವ್ಯೂವ್​ ತಗೆದುಕೊಳ್ಳದಿರುವುದು ತಪ್ಪು

ಪಂಜಾಬ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೆಕೆಆರ್ ಇನ್ನಿಂಗ್ಸ್‌ನ ಎಂಟನೇ ಓವರ್ ಬೌಲ್ ಮಾಡಿದರು. ರಹಾನೆ ಎಸೆದ ನಾಲ್ಕನೇ ಎಸೆತದಲ್ಲಿ ಸ್ವೀಪ್ ಶಾಟ್ ಮಾಡುವಲ್ಲಿ ವಿಫಲರಾದರು, ಚೆಂಡು ಪ್ಯಾಡ್‌ಗೆ ತಗುಲಿದ್ದರಿಂದ ಪಂಜಾಬ್ ಎಲ್​ಬಿಡಬ್ಲ್ಯೂಗೆ ಮನವಿ ಸಲ್ಲಿಸಿತು. ಅಂಪೈರ್ ಅದನ್ನು ಎಲ್ಬಿಡಬ್ಲ್ಯೂ ಎಂದು ಘೋಷಿಸಿದರು.

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಡಿಫೆಂಡ್ ಮಾಡಿ ಗೆದ್ದ ಟಾಪ್ 10 ತಂಡಗಳು ಇಲ್ಲಿವೆ

ಆದರೆ, ಮರುಪ್ರಸಾರದಲ್ಲಿ ಚೆಂಡು ಔಟ್​​ಸೈಡ್​ ಲೆಗ್​​ನಿಂದ ಹೊರಗಿನಿಂದ ಬಂದಿರುವುದು ಕಂಡುಬಂದಿತು. ರಹಾನೆ ರಿವ್ಯೂಗೆ ಹೋಗಿದ್ದರೆ, ಅವರು ಔಟ್ ಆಗುತ್ತಿರಲಿಲ್ಲ. ಆಗ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ವಾಸ್ತವವಾಗಿ, ಆ ಹೊತ್ತಿಗೆ KKR ಇನ್ನೂ ಎರಡು ಡಿಆರ್​ಎಸ್​ ಬಾಕಿ ಉಳಿಸಿಕೊಂಡಿತ್ತು ಎಂಬುದು ಗಮನಾರ್ಹ. ತನ್ನದೇ ಆದ ತಪ್ಪಿನಿಂದಾಗಿ ತಂಡದ ಸೋಲು ಕಾಣಬೇಕಾಯಿತು ಎಂದು ರಹಾನೆ ತಿಳಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, 15.3 ಓವರ್​ಗಳಲ್ಲಿ ತನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 111 ರನ್​ಗಳಿಗೆ ಆಲೌಟ್ ಆದರೆ,112 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್ 15.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕಂಡು ಕೇವಲ 95ಕ್ಕೆ ಆಲೌಟ್ ಆಯಿತು. ಚಹಾಲ್ 4 ವಿಕೆಟ್ ಪಡೆದು ತಂಡಕ್ಕೆ ಸುಲಭ ಜಯ ತಂದುಕೊಟ್ಟರು.