Last Updated:
ಒಳಗೆ ಹೋದ್ರೇನೇ ಗೊತ್ತಾಗೋದು, ಪಿಜಿಗಳ ತಳುಕುಬಳುಕು. ಇದೂ ಕೂಡಾ ಇಂತದ್ದೇ ಪಿಜಿ. ಈ ಪೀಜಿಯ ದುಸ್ಥಿತಿ ಬಗ್ಗೆ ಗೂಗಲ್ನಲ್ಲಿ ವಿದ್ಯಾರ್ಥಿಯೊಬ್ಬ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು, ನೆಗೆಟಿವ್ ರಿವ್ಯೂ ಬೇರೆ ಮಾಡಿದ್ದ. ಇದನ್ನ ನೋಡಿದ ಪಿಜಿ ಮಾಲೀಕರು ಕೆರಳಿ ಕೆಂಡವಾಗಿದ್ದಾರೆ. ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟ ಸಿಟ್ಟಿಗೆ ಮನಸೋ ಇಚ್ಛೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಂಗಳೂರು: ಪಿಜಿಯಲ್ಲಿದ್ದ ವಿದ್ಯಾರ್ಥಿ (Student) ಅಲ್ಲಿನ ಅವ್ಯಸ್ಥೆ ಕಂಡು ರೋಸಿ ಹೋಗಿದ್ದ. ಪಿಜಿ ಖಾಲಿ ಮಾಡುವಾಗ ಗೂಗಲ್ನಲ್ಲಿ ನೆಗೆಟಿವ್ ಕಮೆಂಟ್ (Negative comment) ಮಾಡಿದ್ದ. ಇದನ್ನ ನೋಡಿದ ಪಿಜಿ ಓನರ್ (PG Owner) ಅಮಾಯಕನ ಮೇಲೆ ಅಟ್ಟಹಾಸ ಮೆರೆದಿದ್ದಾರೆ.
ರಿವ್ಯೂ ಡಿಲೀಟ್ ಮಾಡುವಂತೆ ಓನರ್ ಧಮ್ಕಿ!
ಈಗೀಗೆಲ್ಲಾ ಗಲ್ಲಿ ಗಲ್ಲಿಯಲ್ಲೂ ಪಿಜಿಗಳಾಗಿವೆ. ನಗರ ಪ್ರದೇಶಗಳಲ್ಲಂತೂ ಪಿಜಿಗಳಿಲ್ಲದ ಏರಿಯಾಗಳೇ ಇಲ್ಲ. ಹೀಗಾಗಿಯೇ ಪಿಜಿ ಮಾಲೀಕರು ಕೂಡಾ ಕಾಂಪಿಟೇಷನ್ಗೆ ಬಿದ್ದಿರೋದು. ನಮ್ಮಲ್ಲಿ ಸಿಕ್ಕಾಪಟ್ಟೆ ಹೈಜಿನ್, ನಮ್ಮಲ್ಲಿರೋದೆಲ್ಲಾ ಹೈಫೈ ರೂಮ್ಸ್ ಅಂತಾ ಶೋಆಫ್ ಕೊಡ್ತಾರೆ. ಆದ್ರೆ, ಒಳಗೆ ಹೋದ್ರೇನೇ ಗೊತ್ತಾಗೋದು, ಪಿಜಿಗಳ ತಳುಕುಬಳುಕು. ಇದೂ ಕೂಡಾ ಇಂತದ್ದೇ ಪಿಜಿ. ಈ ಪೀಜಿಯ ದುಸ್ಥಿತಿ ಬಗ್ಗೆ ಗೂಗಲ್ನಲ್ಲಿ ವಿದ್ಯಾರ್ಥಿಯೊಬ್ಬ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು, ನೆಗೆಟಿವ್ ರಿವ್ಯೂ ಬೇರೆ ಮಾಡಿದ್ದ. ಇದನ್ನ ನೋಡಿದ ಪಿಜಿ ಮಾಲೀಕರು ಕೆರಳಿ ಕೆಂಡವಾಗಿದ್ದಾರೆ. ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟ ಸಿಟ್ಟಿಗೆ ಮನಸೋ ಇಚ್ಛೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಮೆಂಟ್ ಕಾಳಗ, ತತ್ತರಿಸಿದ ಅಮಾಯಕ!
ಕಲಬುರಗಿ ಮೂಲದ ವಿಕಾಸ್, ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ. ಊರು ಬಿಟ್ಟು ಊರಿಗೆ ಬಂದಿದ್ರಿಂದ ಕದ್ರಿಯಲ್ಲಿರುವ ಕುಕ್ಕೆಶ್ರೀ ಬಾಯ್ಸ್ ಪಿಜಿಯಲ್ಲೇ ಉಳಿದುಕೊಂಡಿದ್ದ. ಯಾವಾಗ ಈ ಪಿಜಿ ಸೆಟ್ ಆಗ್ಲಿಲ್ವೋ, ಅದನ್ನ ಬಿಟ್ಟು ಬೇರೆ ಕಡೆ ರೂಂ ಮಾಡಿದ್ದ. ಪಿಜಿ ಬಿಡೋ ಟೈಮ್ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ನೆಗೆಟಿವ್ ಕಾಮೆಂಟ್ ಮಾಡಿದ್ದ. ಇದನ್ನು ಗಮನಿಸಿದ ಪಿಜಿ ಮಾಲಕ ಸಂತೋಷ್, ಮೊದಲು ನಿನ್ನ ರಿವ್ಯೂ ಡಿಲೀಟ್ ಮಾಡು ಅಂತಾ ಧಮ್ಕಿ ಹಾಕಿದ್ದಾನೆ. ಆದ್ರೆ, ವಿಕಾಸ್ ಕ್ಯಾರೆ ಎಂದಿರರ್ಲಿಲ್ಲ. ಹೀಗಾಗಿ ಮೂರು ದಿನದ ಹಿಂದೆ ಗ್ಯಾಂಗ್ ಕಟ್ಕೊಂಡು ಬಂದು ಹಲ್ಲೆ ಮಾಡಿದ್ದಾರಂತೆ.
ಇದನ್ನೂ ಓದಿ: Mysuru: ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ವದಂತಿ; ಬಿಸಿನೆಸ್ ಡಲ್, ವ್ಯಾಪಾರಿಗಳು ಹೇಳೋದೇನು?
ಕುಕ್ಕೆಶ್ರೀ ಪಿಜಿಯಲ್ಲಿ ಒಬ್ಬೊಬ್ಬರಿಗೆ 7 ಸಾವಿರ ರೂಪಾಯಿ ಫೀಸ್ ಕಟ್ಟಿಸಿಕೊಳ್ತಿದ್ದಾರಂತೆ. ಆದರೆ, ದುಡ್ಡಿಗೆ ತಕ್ಕಂತೆ ಫೆಸಿಲಿಟಿ ಕೊಡ್ತಿಲ್ವಂತೆ. ಈ ಬಗ್ಗೆ ಪಿಜಿ ಮಾಲೀಕರನ್ನ ಕೇಳಿದರೆ, ಇದೆಲ್ಲ ಸುಳ್ಳು. ಬೇರೆ ಕಡೆಯ ಫೋಟೋವನ್ನ ತೋರಿಸಿ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ ಎಂದಿದ್ದಾರೆ. ಒಟ್ನಲ್ಲಿ ಹೊಡೆತ ತಿಂದ ವಿದ್ಯಾರ್ಥಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಕ್ರಮ ಕೈಗೊಳ್ತಾರಾ ಕಾದು ನೋಡ್ಬೇಕು. (ವರದಿ: ಕಿಶನ್ ಶೆಟ್ಟಿ, ನ್ಯೂಸ್18, ಮಂಗಳೂರು)
Dakshina Kannada,Karnataka
March 21, 2025 7:04 AM IST