Last Updated:
ಈ ಮಾವಿನ ಕಾರಣಕ್ಕೇ ಬಂಗನಪಲ್ಲಿ ಎನ್ನುವ ಗ್ರಾಮವೂ ದೇಶದಲ್ಲಿ ಗುರುತಿಸಿಕೊಂಡಿರೋದು. ಏಪ್ರಿಲ್ ನಿಂದ ಜೂನ್ ತನಕ ಈ ಮಾವಿನ ಕಟಾವು ಮಾಡಲಾಗಿ, ಆ ಬಳಿಕ ಮಾವನ್ನು ದೇಶ ಮತ್ತು ವಿದೇಶೀ ಮಾರುಕಟ್ಟೆಗೂ ರಫ್ತು ಮಾಡಲಾಗುತ್ತದೆ.
ದಕ್ಷಿಣ ಕನ್ನಡ: ಹಣ್ಣುಗಳ ರಾಜ ಮಾವಿನ ಹಣ್ಣೆಂದರೆ(Mango Fruit) ಯಾರಿಗೆ ಇಷ್ಟವಿಲ್ಲ ಹೇಳಿ. ಮಾವಿನ ಸೀಸನ್ ಬಂದಾಗ ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ(Market) ಅದೆಷ್ಟೇ ಬೆಲೆ ಇದ್ದರೂ, ಒಮ್ಮೆಯಾದರೂ ಮಾವಿನ ರುಚಿ ನೋಡದೆ ಸುಮ್ಮನೆ ಇರೋರು ವಿರಳವೇ. ಮಾವಿನಲ್ಲಿ ಹಲವು ಜಾತಿಯ ಮಾವುಗಳಿದ್ದು, ಒಂದೊಂದು ಹಣ್ಣು ಅದರ ಗುಣಲಕ್ಷಣಗಳಿಂದಾಗಿ ಜನರ ಫೇವರೇಟ್ ಆಗಿದೆ. ಕೆಲವು ಹಣ್ಣುಗಳು(Some Fruits) ತುಂಬಾನೆ ಸಿಹಿಯಾಗಿದ್ದರೆ, ಇನ್ನು ಕೆಲವು ಕಡಿಮೆ ಸಿಹಿ ಹೊಂದಿರುತ್ತದೆ. ಇನ್ನು ಕೆಲವು ಕೊಂಚ ಸಿಹಿ, ಕೊಂಚ ಹುಳಿಯಾಗಿದ್ದು, ಒಬ್ಬೊಬ್ಬರು ಒಂದೊಂದು ರುಚಿಯ(Taste) ಮಾವಿಗೆ ಹೊಂದಿಕೊಳ್ಳುತ್ತಾರೆ.
ಮಾವುಗಳನ್ನು ಎಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತೋ, ಅದೇ ಊರು ಅಥವಾ ಪ್ರದೇಶದ ಹೆಸರಿನಲ್ಲಿ ಆ ಮಾವುಗಳು ಗುರುತಿಸಲ್ಪಡುತ್ತದೆ. ಆಂಧ್ರಪ್ರದೇಶದ ಬಂಗನಪಲ್ಲಿ ಎನ್ನುವ ಪ್ರದೇಶದಲ್ಲಿ ಬೆಳೆಯಲಾಗುವ ಮಾವಿಗೆ ಬಂಗನಪಲ್ಲಿ ಮಾವು ಎಂದೇ ಹೆಸರಿಸಲಾಗಿದೆ. ಆಕಾರದಲ್ಲಿ ದೊಡ್ಡ ಗಾತ್ರವನ್ನು ಹೊಂದಿರೋ ಈ ಮಾವು ತನ್ನ ಗಾತ್ರ ಮತ್ತು ರುಚಿಗೆ ಅತ್ಯಂತ ಫೇಮಸ್ ಆಗಿದೆ. ಈ ಮಾವಿನ ಕಾರಣಕ್ಕೇ ಬಂಗನಪಲ್ಲಿ ಎನ್ನುವ ಗ್ರಾಮವೂ ದೇಶದಲ್ಲಿ ಗುರುತಿಸಿಕೊಂಡಿರೋದು. ಏಪ್ರಿಲ್ ನಿಂದ ಜೂನ್ ತನಕ ಈ ಮಾವಿನ ಕಟಾವು ಮಾಡಲಾಗಿ, ಆ ಬಳಿಕ ಮಾವನ್ನು ದೇಶ ಮತ್ತು ವಿದೇಶೀ ಮಾರುಕಟ್ಟೆಗೂ ರಫ್ತು ಮಾಡಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಬಂಗನಪಲ್ಲಿ ಮಾವಿಗೆ ಜಿಲ್ಲೆಯಲ್ಲಿ ಭಾರೀ ಬೇಡಿಕೆಯಿದೆ. ಗಾತ್ರದ ಜೊತೆಗೆ ಉತ್ತಮ ರುಚಿಯನ್ನು ಹೊಂದಿರುವ ಈ ಮಾವಿನಲ್ಲಿ ವೇಸ್ಟೇಜ್ ಪ್ರಮಾಣ ಕೇವಲ ಸುಮಾರು 5 ಶೇಕಡಾ ಮಾತ್ರವಾಗಿದೆ. ಇದರ ಸಿಪ್ಪೆಯೂ ಅತ್ಯಂತ ರುಚಿಕರವಾದ ಕಾರಣ ಸಿಪ್ಪೆಯನ್ನೂ ಜಗಿದು ತಿನ್ನಲು ರುಚಿಕರವಾಗಿರುತ್ತೆ. ಇತರ ಹಣ್ಣುಗಳಿಗೆ ಹೋಲಿಸಿದಲ್ಲಿ ದರವೂ ಕೈಗೆಟಕುವಂತಿರುವುದರಿಂದ ಜಿಲ್ಲೆಯ ಜನ ಹೆಚ್ಚಾಗಿ ತಮ್ಮ ಮೊದಲ ಆಯ್ಕೆಯನ್ನಾಗಿ ಈ ಮಾವನ್ನೇ ನೆಚ್ಚಿಕೊಂಡಿದ್ದಾರೆ.
ಇದೀಗ ಈ ಮಾವು ಲೋಡುಗಟ್ಟೆ ಪ್ರಮಾಣದಲ್ಲಿ ಮಂಗಳೂರು ಮಾರುಕಟ್ಟೆಗೆ ಬರಲಾರಂಭಿಸಿದ್ದು, ಮಂಗಳೂರಿನಿಂದಲೇ ಜಿಲ್ಲೆಯ ಹಲವೆಡೆ ವಿತರಣೆಯಾಗುತ್ತಿದೆ. ತಿನ್ನಲು ಮತ್ತು ಜ್ಯೂಸ್ ಮಾಡಿ ಕುಡಿಯಲು ಅತ್ಯಂತ ಉಪಯೋಗಿಯಾಗಿರುವ ಈ ಮಾವಿನ ರುಚಿಗೆ ಜಿಲ್ಲೆಯ ಫಿದಾ ಆಗಿದ್ದಾರೆ ಎಂದರೂ ತಪ್ಪಾಗಲಾರದು.
Dakshina Kannada,Karnataka