Mango Festival: ಧಾರವಾಡದಲ್ಲಿ ಮಿಯಾಜಾಕಿ ಮಾವಿನ ಮೋಡಿ: ಕೆಜಿಗೆ 10 ಸಾವಿರ, ರೈತರ ಮೊಗದಲ್ಲಿ ಮಂದಹಾಸ | Dharwad Miyazaki Mango Fair 10000 Rupees for one mango sale

Mango Festival: ಧಾರವಾಡದಲ್ಲಿ ಮಿಯಾಜಾಕಿ ಮಾವಿನ ಮೋಡಿ: ಕೆಜಿಗೆ 10 ಸಾವಿರ, ರೈತರ ಮೊಗದಲ್ಲಿ ಮಂದಹಾಸ | Dharwad Miyazaki Mango Fair 10000 Rupees for one mango sale

ಪ್ರತಿವರ್ಷ ಏಪ್ರಿಲ್ -ಮೇ ತಿಂಗಳು ಬಂದರೆ ಸಾಕು

ಮಾವು ಚಪ್ಪರಿಸುವ ಆ ಸುಂದರ ಸವಿಗಾಲ ಆರಂಭವಾಗಿದೆ.ಮಾವಿನ ರುಚಿಯೇ ಅಂಥದ್ದು. ಅದರಲ್ಲೂ ರಾಜ್ಯದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯೋ ಧಾರವಾಡ ಜಿಲ್ಲೆಯ ಆಪೋಸಾ ಹಾಗೂ ಮಿಯಾಜಾಕಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಮಾವು ರಾಜಾ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣು ಗ್ರಾಹಕರನ್ನು ಕೈ ಬಿಸಿ ಕರೆಯುತ್ತೇವೆ.ಈ ಬಾರಿ ಮೀಯಾ ಜಾಕಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಧಾರವಾಡದ ಪ್ರಮೋದ ಗಾಂವಕರ್ ಎಂಬ ಮಾವು ಬೆಳೆಗಾರ ತಮ್ಮ ಮಾವಿನ ತೋಟದಲ್ಲಿ ಈ ಹಣ್ಣು ಬೆಳೆದಿದ್ದು, 12 ಹಣ್ಣಿಗೆ ಬರೋಬರಿ ಒಂದು ಲಕ್ಷ ಇಪ್ಪತ್ತು ಸಾವಿರ ರೂ.ಒಂದು ಹಣ್ಣಿಗೆ 10 ಸಾವಿರೂಪಾಯಿಗೆ ಮಾರಟವಾಗಿ ರೈತರ ಮೊಗದಗಲ್ಲಿ ಮಂದಹಾಸ ಮೂಡಿಸಿದೆ.

ಮಿಯಾಜಾಕಿ ಸದ್ದು

ಧಾರವಾಡದಲ್ಲಿ 5 ದಿನಗಳ‌ ಕಾಲ‌ ಕೃಷಿ ಇಲಾಖೆ ಆಯೋಜಿಸಿದ ಮಾವು ಮೇಳದ ಆರಂಭದ ಒಂದೇ ದಿನದಲ್ಲಿ ಮೀಯಾ ಜಾಕಿ ಹಣ್ಣು 10 ಸಾವಿರೂಪಾಯಿಗೆ ಮಾರಾಟವಾಗಿದೆ ಗಮನ ಸೆಳೆದಿದೆ. ಕಳೆದ ವರ್ಷದಂತೆ ಈ ವರ್ಷವೂ ‘ಧಾರವಾಡ ಮಾವು ಮೇಳದಲ್ಲಿ ಮಿಯಾಜಾಕಿ ಸದ್ದು ಮಾಡುತ್ತಿದ್ದು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಒಂದು ಹಣ್ಣನ್ನು ಗ್ರಾಹಕರೊಬ್ಬರು 10 ಸಾವಿರ ರೂ.ಗೆ ಖರೀದಿಸಿದ್ದರು. ಈ ಸಲ ಒಂದೇ ಗಿಡದಲ್ಲಿ ಬರೋಬ್ಬರಿ 25 ಹಣ್ಣು ಬಂದಿದ್ದು, ಧಾರವಾಡ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಾವು ಬೆಳೆಗಾರ ರೈತರಿಂದ ಪ್ರಮೋದ ಗಾಂವಕರ ಮಾತನಾಡಿ, ಧಾರವಾಡದಲ್ಲಿ ಮಾವು ಮೇಳ ಆಯೋಜನೆ ಮಾಡಿರುವುದು ಸಂತಸ ಮೂಡಿಸಿದೆ.3 ದಿನದ ಬದಲಾಗಿ 5 ದಿನದವರೆಗೂ ಆಯೋಜನೆ ಮಾಡಿದರೆ ಒಳ್ಳೆಯದಾಗುತ್ತದೆ.ನಾವು ಬೆಳೆದ ಮಿಯಾಜಾಕಿ ಹಣ್ಣು ಒಳ್ಳೆಯ ಪಲ ನೀಡಿದೆ.ಒಂದು ಹಣ್ಣಿಗೆ 10 ಸಾವಿರ ರೂಪಾಯಿ ನಿಗದಿ ಮಾಡಿದ್ದೇವೆ ಹಾಗೂ ಅಪೋಸ ಹಣ್ಣು ಧಾರವಾಡದಲ್ಲಿ ಉತ್ತಮ ಫಲ‌ ನೀಡಿದೆ. ಇದು ದೇಶ ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ.

ಮಾವಿನ ಮೇಳ

ತೋಟಗಾರಿಕೆ ಇಲಾಖೆಯಿಂದ ಮೇಳ ಆಯೋಜನೆ

ಮಾವು ಮೇಳದಲ್ಲಿ ಗ್ರಾಹಕ ಬಸವರಾಜ ಗೋಕಾವಿ ಮಾತನಾಡಿ, ತೋಟಗಾರಿಕೆ ಇಲಾಖೆ ಇಂತಹ ಮೇಳವನ್ನು ಆಯೋಜನೆ ಮಾಡಿರುವುದು ರೈತರಿಗೆ ಹಾಗೂ ಜನರಿಗೆ ಅನಕೂಲವಾಗಿದೆ. ಮಾರುಕಟ್ಟೆ ಒಂದೇ ಬೆಲೆಗೆ ಹಣ್ಣುಗಳು ಸಿಗುವುದಿಲ್ಲ ಇಲ್ಲಿ ಎಲ್ಲಾ ರೀತಿಯ ಹಣ್ಣುಗಳು ಒಂದೇ ಜಾಗದಲ್ಲಿ ಸಿಗುವುದರಿಂದ ಸಂತಸ ತಂದಿದೆ. ನಮ್ಮ ಧಾರವಾಡ ಹಣ್ಣಾದ ಮೀಯಾ ಜಾಕಿ ದೇಶ ವಿದೇಶಕ್ಕೆ ಮಾರಟವಾಗುತ್ತದೆ ಎಂದರೆ ಖುಷಿ ಆಗುತ್ತದೆ.

ಇನ್ನು ಧಾರವಾಡ ಜಿಲ್ಲೆಯಲ್ಲಿ ಮಾವು ಪ್ರಮುಖ ಬೆಳೆಯಾಗಿದೆ. ಒಟ್ಟು 29,610 ಎಕರೆಯಲ್ಲಿ ಅಂದಾಜು 8,881 ರೈತರು ಮಾವು ಬೆಳೆಯುತ್ತಿದ್ದಾರೆ. ಸಾಂಪ್ರದಾಯಕವಾಗಿ ಎಕರೆಗೆ 4 ಟನ್ ಇಳುವರಿ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಇಳುವರಿಯಲ್ಲಿ ಕುಂಠಿತವಾಗಿದೆ. ಎಕರೆಗೆ 1 ಟನ್​ನಂತೆ ಜಿಲ್ಲೆಯಿಂದ ಒಟ್ಟು 29,000 ಟನ್ ಇಳುವರಿಯನ್ನು ಅಂದಾಜಿಸಬಹುದಾಗಿದೆ.

ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಧಾರವಾಡ ಜಿಲ್ಲೆಯು ಸಾಂಪ್ರದಾಯಕವಾಗಿ ಮಾವು ಬೆಳೆಯುವ ರಾಜ್ಯದ ಮುಖ್ಯ ಭಾಗವಾಗಿದ್ದು, ಪ್ರಮಖವಾಗಿ ಧಾರವಾಡ, ಕಲಘಟಗಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕುಗಳಲ್ಲಿ ಮಾವು ಬೆಳೆಯನ್ನು ಬೆಳೆಯಲು ಸೂಕ್ತವಾದ ವಾತಾವರಣವಿರುವುದರಿಂದ ಉತ್ತಮ ಮಾವು ಬೆಳೆಯನ್ನು ಬೆಳೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಪ್ಯಾಶನ್ ಆಗಿ ತೆಗೆದುಕೊಂಡು ಬೆಳೆಯುವ ಗಾವ್ಕರ್ ಅವರು 100 ವಿಧವಾದ ಮಾವು ಬೆಳೆದಿದ್ದಾರೆ. ಅದರಲ್ಲಿ ಸ್ವರ್ಣರೇಖಾ, ಮಿಯಾಜಾಕಿ ಅದರಲ್ಲಿ ಹೈ ಕ್ವಾಲಿಟಿ, ಅತಿ ಹೆಚ್ಚು ಬೆಲೆ ಇರುವ ಮಾವುಗಳನ್ನು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಅವುಗಳಿಗೆ ಭಾರಿ ಬೇಡಿಕೆ ಇದೆ. ಮಾವು ಬೆಳೆಗಾರರಿಗೆ ಇದರ ಬಗ್ಗೆ ಮಾಹಿತಿ ನೀಡುವ ಅಗತ್ಯವಿದ್ದು, ತೋಟಗಾರಿಕೆ ಇಲಾಖೆಯಿಂದ ಪ್ರಗತಿಪರ ಮಾವು ಬೆಳೆಗಾರ ರೈತರಿಂದ ಪ್ರಮೋದ ಗಾಂವಕರ ಅವರ ಮಾವಿನ ತೋಟಕ್ಕೆ ಭೇಟಿ ಕಾರ್ಯಕ್ರಮ ಏರ್ಪಡಿಸಿ ಮೂಲಕ ರೈತರಿಗೆ ಅನುಕೂಲವಾಗುವಂತೆ ಆಗುತ್ತದೆ.