MS Dhoni: ಕೊನೆಗೂ ಧೋನಿ ಅಷ್ಟು ಲೇಟ್‌ ಆಗಿ ಬ್ಯಾಟಿಂಗ್‌ಗೆ ಬರ್ತಿರೋ ಕಾರಣ ರಿವೀಲ್‌!Dhoni batting at number 9 raises questions from former cricketers

MS Dhoni: ಕೊನೆಗೂ ಧೋನಿ ಅಷ್ಟು ಲೇಟ್‌ ಆಗಿ ಬ್ಯಾಟಿಂಗ್‌ಗೆ ಬರ್ತಿರೋ ಕಾರಣ ರಿವೀಲ್‌!Dhoni batting at number 9 raises questions from former cricketers

ಧೋನಿ 9ನೇ ಕ್ರಮಾಂಕದಲ್ಲಿ ಆಡ್ತಿರೋದ್ಯಾಕೆ?

ಆದರೆ ಮೊನ್ನೆ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧದ ಪಂದ್ಯದಲ್ಲಿ ಯಾರೂ ಸಹ ಊಹಿಸಿರದ ಒಂಬತ್ತನೇಯ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮೈದಾನಕ್ಕೆ ಇಳಿದು ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದ್ದು ಅಲ್ಲದೆ, ಇದರ ಹಿಂದಿನ ತರ್ಕವನ್ನು ಅನೇಕ ಸಿಎಸ್‌ಕೆ ತಂಡದ ಮಾಜಿ ಆಟಗಾರರು ಸಹ ಪ್ರಶ್ನೆ ಮಾಡುವಂತಾಯಿತು.

ಒಂಬತ್ತನೇಯ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇದೇ ಕಾರಣನಾ?

ಮಾಜಿ ಸಿಎಸ್‌ಕೆ ನಾಯಕ ಇತ್ತೀಚೆಗೆ ಮೊಣಕಾಲು ಗಾಯ ಮತ್ತು ಭಾರತದ ಟ್ವೆಂಟಿ20 ವಿಶ್ವಕಪ್ ತಂಡಕ್ಕೆ ಸ್ಪರ್ಧಿಸಿರುವ ಸಿಎಸ್‌ಕೆ ತಂಡದ ಸದಸ್ಯರು ಮತ್ತು ಅವರಿಗಿಂತ ಮೇಲಿರುವವರು ಸಾಕಷ್ಟು ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣಗಳಿಂದಾಗಿ ಅವರು ತೀರಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರಬೇಕಾಯಿತು ಅಂತ ಹೇಳಲಾಗುತ್ತಿದೆ.

ಶನಿವಾರ, ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಧೋನಿಯನ್ನು 9ನೇ ಕ್ರಮಾಂಕದಲ್ಲಿ ಕಳುಹಿಸಿರುವ ಕ್ರಮವು ಮತ್ತು ಆ ಪಂದ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಇಬ್ಬರು ಮಾಜಿ ಸಿಎಸ್‌ಕೆ ಆಟಗಾರರು ಸೇರಿದಂತೆ ಹಲವಾರು ಮಾಜಿ ಭಾರತದ ಕ್ರಿಕೆಟಿಗರನ್ನು ಗೊಂದಲಕ್ಕೀಡು ಮಾಡಿತು.

ಅಶ್ವಿನ್‌ ಆದಮೇಲೆ ಬ್ಯಾಟಿಂಗ್‌ಗೆ ಬಂದ ಧೋನಿ!

ತವರಿನಲ್ಲಿ ಆಡುವಾಗ ಸಿಎಸ್‌ಕೆ ತಂಡಕ್ಕೆ 28 ಎಸೆತಗಳಲ್ಲಿ 98 ರನ್‌ಗಳು ಬೇಕಾಗಿದ್ದವು. ರವಿಚಂದ್ರನ್ ಅಶ್ವಿನ್ 8 ಎಸೆತಗಳಲ್ಲಿ 11 ರನ್ ಗಳಿಸಿ ಫಿಲ್ ಸಾಲ್ಟ್‌ಗೆ ಔಟ್ ಆದರು. ನಂತರ 16ನೇ ಓವರ್‌ನ ಮಧ್ಯದಲ್ಲಿ ಧೋನಿ ಅವರು ಮೈದಾನಕ್ಕೆ ಇಳಿದರು.ತಂಡಕ್ಕೆ ಬೇಕಾದ ರನ್‌ರೇಟ್ ಬಗ್ಗೆಯಾದರೂ ತಂಡದವರು ಆಲೋಚನೆ ಮಾಡಬೇಕಿತ್ತು.

ಇದನ್ನೂ ಓದಿ: ಧೋನಿ ಬಂಗ್ಲೆ ನೋಡಿದ್ರಾ? ಕೊಹ್ಲಿ ಐಶಾರಾಮಿ ಮನೆ ಹೇಗಿದೆ? ಸ್ಟಾರ್ ಕ್ರಿಕೆಟಿಗರ ಅದ್ಭುತ ಹೌಸ್‌ಗಳು ಹೇಗಿವೆ ನೋಡಿ

ಧೋನಿಯ ಬ್ಯಾಟಿಂಗ್ ಸಾಮರ್ಥ್ಯ ಅಶ್ವಿನ್ ಅವರಿಗಿಂತ ಸಹಜವಾಗಿ ಹೆಚ್ಚಾಗಿದೆ. ಹಾಗಾಗಿ ಕನಿಷ್ಠ ಪಕ್ಷ ಸಿಎಸ್‌ಕೆ ತಂಡದ ನಿವ್ವಳ ರನ್‌ರೇಟ್ ಅನ್ನು ತಲುಪಲು ಧೋನಿ ಅವರು ಸಹಾಯ ಮಾಡಬಹುದಿತ್ತು ಎಂದು ಪರಿಗಣಿಸಿ ಈ ನಿರ್ಧಾರವನ್ನು ಪ್ರಶ್ನಿಸಲಾಗಿದೆ.

ಇರ್ಫಾನ್‌ ಪಠಾಣ್‌ ಬರೆದಿದ್ದು ಏನು?

“ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ತಂಡಕ್ಕೆ ಇದು ಸೂಕ್ತವಾದ ನಿರ್ಧಾರವಾಗುವುದಿಲ್ಲ” ಎಂದು ಮಾಜಿ ಸಿಎಸ್‌ಕೆ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ಮಾಜಿ ಸಿಎಸ್‌ಕೆ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಾಮೆಂಟ್ ಮಾಡಿ “ಆರ್‌ಸಿಬಿಗೆ ಮಹತ್ವದ ಗೆಲುವು ಅದು. ಚೆಪಾಕ್‌ನ ಕೋಟೆಯಲ್ಲಿ ಒಂದು ಗೆಲುವು ಈ ವರ್ಷದ ಅವರ ಅಭಿಯಾನಕ್ಕೆ ದೊಡ್ಡ ಉತ್ತೇಜನ ನೀಡುತ್ತದೆ.

ಧೋನಿ 9ನೇ ಸ್ಥಾನದಲ್ಲಿ ಬಂದಿರುವುದು ಅರ್ಥಪೂರ್ಣವಾಗಿರಲಿಲ್ಲ. ಅವರು ಮೊದಲೇ ಬ್ಯಾಟಿಂಗ್ ಮಾಡಲು ಬಂದಿದ್ರೆ ಸಿಎಸ್‌ಕೆ ತಂಡಕ್ಕೆ ಸ್ವಲ್ಪ ಸಹಾಯವಾಗುತ್ತಿತ್ತು,” ಅಂತ ಹೇಳಿದರು. ಧೋನಿ ಅವರ ಸಿಎಸ್‌ಕೆ ತಂಡ 197 ರನ್‌ಗಳ ಗುರಿಯನ್ನು ಬೆನ್ನಟ್ಟಿ 146/8 ಸ್ಕೋರ್ ಗಳಿಸಲಷ್ಟೆ ಶಕ್ತವಾಯಿತು, ಆಗ 16 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದ ಧೋನಿ ಅವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದವು.

ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ, 43 ವರ್ಷದ ಧೋನಿಗೆ ಕಠಿಣ ಪರಿಸ್ಥಿತಿಯಿಂದ ಪಂದ್ಯಗಳನ್ನು ಗೆಲ್ಲಲು ಸಾಕಷ್ಟು ಸಮಯ ಸಿಗುವಂತೆ ಧೋನಿಯನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಂದೆ ಕಳುಹಿಸುವಂತೆ ಸಿಎಸ್‌ಕೆ ತಂಡಕ್ಕೆ ಸಲಹೆ ನೀಡಿದರು.