MS Dhoni: ನನ್ನಿಂದಲ್ಲ, ಅವರಿಬ್ಬರ ಆಟದಿಂದ ಈ ಪಂದ್ಯ ಗೆದ್ವಿ​! ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಗೆ ಸಲ್ಲಬೇಕೆಂದ ಧೋನಿ |

MS Dhoni: ನನ್ನಿಂದಲ್ಲ, ಅವರಿಬ್ಬರ ಆಟದಿಂದ ಈ ಪಂದ್ಯ ಗೆದ್ವಿ​! ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಗೆ ಸಲ್ಲಬೇಕೆಂದ ಧೋನಿ |

Last Updated:

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಐಪಿಎಲ್ 2025ರ 30ನೇ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ 5 ವಿಕೆಟ್‌ಗಳ ರೋಮಾಂಚಕ ಗೆಲುವು ತಂದರು. ಧೋನಿ 26 ಅಜೇಯ ರನ್‌ಗಳೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.

ಎಂಎಸ್ ಧೋನಿಎಂಎಸ್ ಧೋನಿ
ಎಂಎಸ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿ (MS Dhoni) ಐಪಿಎಲ್ 2025ರ 30ನೇ ಪಂದ್ಯದಲ್ಲಿ ತಮ್ಮ ವಿಶಿಷ್ಟ ಫಿನಿಶಿಂಗ್ ಶೈಲಿಯೊಂದಿಗೆ ಲಖನೌ ಸೂಪರ್‌ಜೈಂಟ್ಸ್ (LSG) ವಿರುದ್ಧ 5 ವಿಕೆಟ್‌ಗಳ ರೋಮಾಂಚಕ ಗೆಲುವು ತಂದಿತು. ಆದರೆ ಭಾರತ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ತಮ್ಮ ಒಳ್ಳೆಯ ಸ್ವಭಾವದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ತಂಡದ ಆಟಗಾರರ ಕಠಿಣ ಪರಿಶ್ರಮಕ್ಕೆ ಮನ್ನಣೆ ನೀಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಧೋನಿ ಇತ್ತೀಚೆಗೆ ಆ ಅಂಶವನ್ನು ಸಾಬೀತುಪಡಿಸಿದರು. ಐಪಿಎಲ್ 2025 ರ ಋತುವಿನ ಭಾಗವಾಗಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೋಮವಾರ ಲಖನೌದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳಿಂದ ಜಯಗಳಿಸಿತು. ಸತತ ಐದು ಸೋಲುಗಳ ನಂತರ ಸಿಕ್ಕ ಗೆಲುವಾಗಿದೆ.

ಗೆಲುವಿನ ಗಡಿ ದಾಟಿಸಿದ ಧೋನಿ

ಕೊನೆಯ ಓವರ್ ವರೆಗೆ ರೋಮಾಂಚನಕಾರಿಯಾಗಿದ್ದ ಈ ಪಂದ್ಯದಲ್ಲಿ, ಧೋನಿ (11 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 26 ಅಜೇಯ) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಚೆನ್ನೈ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸೋಲಿನತ್ತ ವಾಲುತ್ತಿದ್ದ ಪಂದ್ಯವನ್ನ ತಮ್ಮದೇ ಅದ್ಭುತ ಬ್ಯಾಟಿಂಗ್ ಮೂಲಕ ಗೆಲುವಿನ ಗಡಿ ದಾಟಿಸಿದರು. ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಪಂದ್ಯದ ನಂತರದ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಈ ಪ್ರಶಸ್ತಿ ತನಗೆ ನೀಡುತ್ತಿರುವುದು ಅಚ್ಚರಿ ತಂದಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ಸತತ 5 ಸೋಲುಗಳ ಬಳಿಕ ಕೊನೆಗೂ ಗೆದ್ದ ಚೆನ್ನೈ! ಲಖನೌ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ನಾಯಕ ಧೋನಿ

ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಬ್ಬರಿಗೆ ಸಲ್ಲಬೇಕಿತ್ತು

6 ವರ್ಷಗಳ ಬಳಿಕ 18ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದು ಹೇಗನಿಸಿತು? ಎಂದು ಆತಿಥೇಯ ಮುರಳಿ ಕಾರ್ತಿಕ್ ಕೇಳಿದಾಗ, ಧೋನಿ ವಿಭಿನ್ನವಾಗಿ ಪ್ರತಿಕ್ರಿಯಿಸಿದರು.

” ನನಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಏಕೆ ನೀಡಲಾಗುತ್ತಿದೆ?’ ನಾನು ಯೋಚಿಸುತ್ತಿದ್ದೇನೆ. ಈ ಪ್ರಶಸ್ತಿಗೆ ಇನ್ನೂ ಕೆಲವರು ಇದ್ದಾರೆ. ನೂರ್ ಅಹ್ಮದ್ ಮತ್ತು ರವೀಂದ್ರ ಜಡೇಜಾ ನನಗಿಂತ ಉತ್ತಮವಾಗಿ ಪ್ರದರ್ಶನ ನೀಡಿದರು. ಇಬ್ಬರೂ ಮಧ್ಯಮ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು” ಎಂದು ಧೋನಿ ಹೇಳಿದರು. ಈ ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿದ ನೂರ್ ಅಹ್ಮದ್ ವಿಕೆಟ್ ಪಡೆಯದೆ ಕೇವಲ 13 ರನ್ ಮಾತ್ರ ನೀಡಿದರು. ಮತ್ತೊಂದೆಡೆ, ಜಡೇಜಾ ಮೂರು ಓವರ್‌ಗಳಲ್ಲಿ 24 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು.

ಪಂದ್ಯದ ಹೈಲೈಟ್ಸ್

ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್‌ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 166 ರನ್ ಗಳಿಸಿತು. ರಿಷಭ್ ಪಂತ್ (49 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 63) ಅರ್ಧಶತಕದೊಂದಿಗೆ ಮಿಂಚಿದರು. ಚೆನ್ನೈ ಬೌಲರ್‌ಗಳಲ್ಲಿ ರವೀಂದ್ರ ಜಡೇಜಾ (2/24) ಮತ್ತು ಮತೀಶಾ ಪತೀರಣ (2/45) ತಲಾ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಮತ್ತು ಅನ್ಶುಲ್ ಕಾಂಬೋಜ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ಲಖನೌ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ಧೋನಿ! 11 ವರ್ಷಗಳ ಹಿಂದಿನ ದಾಖಲೆ ಉಡೀಸ್

ನಂತರ ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 168 ರನ್ ಗಳಿಸುವ ಮೂಲಕ ಜಯ ಸಾಧಿಸಿತು. ಧೋನಿ (11 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 26 ನಾಟೌಟ್), ಶಿವಂ ದುಬೆ (37 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 43 ನಾಟೌಟ್), ರಚಿನ್ ರವೀಂದ್ರ (22 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 37), ಮತ್ತು ಪದಾರ್ಪಣೆ ಆಟಗಾರ ಶೇಖ್ ರಶೀದ್ (19 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 27) ಉತ್ತಮ ಪ್ರದರ್ಶನ ನೀಡಿದರು. ಲಖನೌ ಸೂಪರ್‌ಜೈಂಟ್ಸ್ ಪರ ರವಿ ಬಿಷ್ಣೋಯ್ (2/18) ಎರಡು ವಿಕೆಟ್ ಪಡೆದರೆ, ದಿಗ್ವೇಜ್ ರಾಠಿ, ಆವೇಶ್ ಖಾನ್ ಮತ್ತು ಐಡೆನ್ ಮಾರ್ಕ್ರಾಮ್ ತಲಾ ಒಂದು ವಿಕೆಟ್ ಪಡೆದರು. ಸಿಎಸ್‌ಕೆ ಸೋಲು ಖಚಿತ ಎಂಬಂತೆ ಕಂಡಿದ್ದ ಪರಿಸ್ಥಿತಿಯಲ್ಲಿ, ಧೋನಿ ಆಕ್ರಮಣಕಾರಿಯಾಗಿ ಆಟವಾಡಿ ಪಂದ್ಯದ ಗತಿಯನ್ನು ತಿರುಗಿಸಿದರು.