National Flag: ಹರಿದ ರಾಷ್ಟ್ರಧ್ವಜಕ್ಕೆ ಸಿಕ್ತು ಮುಕ್ತಿ- ಬಾನೆತ್ತರದಲ್ಲಿ ಹಾರಾಡ್ತಿದೆ ಹೊಸ ತಿರಂಗ! | The torn national flag has found freedom – a new tricolor is flying in the sky!

National Flag: ಹರಿದ ರಾಷ್ಟ್ರಧ್ವಜಕ್ಕೆ ಸಿಕ್ತು ಮುಕ್ತಿ- ಬಾನೆತ್ತರದಲ್ಲಿ ಹಾರಾಡ್ತಿದೆ ಹೊಸ ತಿರಂಗ! | The torn national flag has found freedom – a new tricolor is flying in the sky!

Last Updated:

ಆದರೆ ತೊಕ್ಕೊಟ್ಟುವಿನಲ್ಲಿ ಕಳೆದ ಎರಡು ದಿನಗಳಿಂದ ಧ್ವಜ ಹಾರುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನ ಹರಿಸಿರಿರಲಿಲ್ಲ. ಈ ಬಗ್ಗೆ ವರದಿ ಬೆನ್ನಲ್ಲೇ ಹರಿದ ರಾಷ್ಟ್ರಧ್ವಜವನ್ನು ತೆಗೆದು ಹೊಸ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಉಳ್ಳಾಲದ ತೊಕ್ಕೊಟ್ಟಿನಲ್ಲಿ(Ullal Tokkottu) ಹರಿದು ವಿರೂಪಗೊಂಡು ರಾಷ್ಟ್ರಧ್ವಜ(National Flag) ಹಾರುತ್ತಿದ್ದ ಬಗ್ಗೆ ಲೋಕಲ್ 18 ನಲ್ಲಿ ವರದಿ ಮಾಡಲಾಗಿತ್ತು. ವರದಿ ಬೆನ್ನಲ್ಲೇ ಹರಿದ ರಾಷ್ಟ್ರಧ್ವಜಕ್ಕೆ ಮುಕ್ತಿ ಸಿಕ್ಕಿದ್ದು, ಬಾನೆತ್ತರದಲ್ಲಿ ಹೊಸ ತಿರಂಗ ಹಾರುತ್ತಿದೆ.

ಉಳ್ಳಾಲದಲ್ಲಿ ಹಾರಾಡ್ತಿದೆ ಹರಿದ ರಾಷ್ಟ್ರ ಧ್ವಜ-ಕಣ್ಮುಚ್ಚಿ ಕುಳಿತಿದ್ದಾರಾ ಅಧಿಕಾರಿಗಳು ಎಂಬ ತಲೆಬರಹದಲ್ಲಿ ಲೋಕಲ್ 18 ನಲ್ಲಿ ವರದಿ ಪ್ರಕಟವಾಗಿತ್ತು. ಧ್ವಜ ಸಂಹಿತೆಯ ಪ್ರಕಾರ ಹರಿದುಹೋದ ರಾಷ್ಟ್ರಧ್ವಜವನ್ನು ಹಾರಿಸುವಂತಿಲ್ಲ. ಆದರೆ ತೊಕ್ಕೊಟ್ಟುವಿನಲ್ಲಿ ಕಳೆದ ಎರಡು ದಿನಗಳಿಂದ ಧ್ವಜ ಹಾರುತ್ತಿದ್ದರೂ ಅಧಿಕಾರಿಗಳು ಮಾತ್ರ ಗಮನ ಹರಿಸಿರಿರಲಿಲ್ಲ. ಈ ಬಗ್ಗೆ ವರದಿ ಬೆನ್ನಲ್ಲೇ ಹರಿದ ರಾಷ್ಟ್ರಧ್ವಜವನ್ನು ತೆಗೆದು ಹೊಸ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.

110 ಅಡಿ ಎತ್ತರದ ಈ ಧ್ವಜಸ್ತಂಭವನ್ನು 2022ರ ಆಗಸ್ಟ್ 15ರಂದು ಲೋಕಾರ್ಪಣೆಗೊಳಿಸಲಾಗಿತ್ತು. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಮಂಗಳೂರಿನ ಅತೀ ಎತ್ತರದ ಧ್ವಜಸ್ತಂಭವಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.