Pahalgam Terror Attack: ಇಲ್ಲಿಗೆ ನಿಲ್ಲಿಸಿ, ಪಾಕಿಸ್ತಾನದ ಜೊತೆ ಕ್ರಿಕೆಟ್​​ ಆಡಬೇಡಿ, ಕೊಹ್ಲಿ ಸ್ನೇಹಿತನಿಂದ ಬಿಸಿಸಿಐಗೆ ಒತ್ತಾಯ | No Cricket with Pakistan Ex-Indian Cricketer s Fiery Response to Pahalgam Attack

Pahalgam Terror Attack: ಇಲ್ಲಿಗೆ ನಿಲ್ಲಿಸಿ, ಪಾಕಿಸ್ತಾನದ ಜೊತೆ ಕ್ರಿಕೆಟ್​​ ಆಡಬೇಡಿ, ಕೊಹ್ಲಿ ಸ್ನೇಹಿತನಿಂದ ಬಿಸಿಸಿಐಗೆ ಒತ್ತಾಯ | No Cricket with Pakistan Ex-Indian Cricketer s Fiery Response to Pahalgam Attack

ಕೊಲ್ಲುವುದೇ ಕ್ರೀಡೆಯಂತಿದೆ

ಗೋಸ್ವಾಮಿ ತಮ್ಮ ಹೇಳಿಕೆಯಲ್ಲಿ, “ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ಇಂದಿನಿಂದ ನಿಲ್ಲಿಸಬೇಕು. ಕ್ರೀಡೆ ಮತ್ತು ರಾಜಕೀಯವನ್ನು ಬೆರೆಸಬಾರದೆಂದು ಹೇಳುವ ಕೆಲವು ಮಾಜಿ ಪಾಕಿಸ್ತಾನ ಕ್ರಿಕೆಟಿಗರು, ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಆ ದೇಶಕ್ಕೆ ಕಳುಹಿಸದಿರುವ ಬಗ್ಗೆ ಟೀಕಿಸಿದ್ದರು. ಆದರೆ, ಮುಗ್ಧ ಭಾರತೀಯರನ್ನು ಕೊಲ್ಲುವುದು ಅವರ ರಾಷ್ಟ್ರೀಯ ಕ್ರೀಡೆಯಂತಿದೆ. ನಾವು ಬ್ಯಾಟ್-ಚೆಂಡಿನಿಂದಲ್ಲ, ಅವರದೇ ಭಾಷೆಯಲ್ಲಿ ಉತ್ತರಿಸಬೇಕು,” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: IPL Fixing: ರಾಜಸ್ಥಾನ್ ರಾಯಲ್ಸ್ ಮೇಲೆ ಬಿಜೆಪಿ ಶಾಸಕನಿಂದ ಮ್ಯಾಚ್ ಫಿಕ್ಸಿಂಗ್ ಆರೋಪ: ಮೌನ ಮುರಿದ BCCI

ರಕ್ತಪಾತ ಮನಸ್ಸನ್ನ ನುಚ್ಚು ನೂರು ಮಾಡಿದೆ

ಲೆಜೆಂಡ್​ ಲೀಗ್ ವೇಳೆ ನಾನು ಪಹಲ್ಗಾಮ್‌ಗೆ ಭೇಟಿ ನೀಡಿದ್ದೆ, ಅಲ್ಲಿನ ಜನರನ್ನ ಭೇಟಿ ಮಾಡಿದಾಗ ಅವರ ಕಣ್ಣಲ್ಲಿ ಕಣಿವೆಯಲ್ಲಿ ಶಾಂತಿ ಮತ್ತು ಭರವಸೆ ಮರಳುತ್ತಿದೆ ಎಂದು ಭಾವಿಸಿದ್ದೆ. ಈಗ ಮತ್ತೆ ರಕ್ತಪಾತವಾಗುತ್ತಿರುವುದನ್ನ ನೋಡಿದರೆ ಅದು ನಿಮ್ಮ ಮನ್ನಸ್ಸನ್ನ ನುಚ್ಚು ನೂರು ಮಾಡುತ್ತದೆ. ನಮ್ಮ ಜನರು ಸಾಯುವಾಗ ನಾವು ಎಷ್ಟು ಬಾರಿ ಸುಮ್ಮನಿರಬೇಕು, ಆಟವಾಡುವುದನ್ನ ಮುಂದುವರಿಸಬೇಕು, ಇನ್ನು ಮುಂದೆ ಆಗಾಗಲೇ ಬಾರದು, ಈ ಬಾರಿ ಖಂಡಿತ ನೋ ಎನ್ನಬೇಕೆಂದು ತಿಳಿಸಿದ್ದಾರೆ.

13 ವರ್ಷಗಳಿಂದ ನಡೆಯುತ್ತಿಲ್ಲ ದ್ವಿಪಕ್ಷೀಯ ಸರಣಿ

2012-13 ರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯನ್ನು ನಿಲ್ಲಿಸಲಾಗಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿತ್ತು ಮತ್ತು ಭಾರತ ತಂಡವು ದುಬೈನಲ್ಲಿ ನಡೆದ ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳನ್ನು ಆಡಿತ್ತು. ಇದೀಗ ಮಹಿಳಾ ಏಕದಿನ ವಿಶ್ವಕಪ್ ಭಾರತದಲ್ಳೇ ನಡೆಯುತ್ತಿದೆ. ಪಾಕಿಸ್ತಾನ ಮಹಿಳಾ ತಂಡ ಭಾರತಕ್ಕೆ ಆಗಮಿಸುವ ಸಾಧ್ಯತೆ ಇಲ್ಲ. ಶ್ರೀಲಂಕಾ ಅಥವಾ ದುಬೈನಲ್ಲಿ ನಡೆಯಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ:  ಲಖನೌ ಮಾಲೀಕನಿಗೆ ತವರಿನ ಅಭಿಮಾನಿಗಳ ಮುಂದೆ ಕೂಲ್​ ಆಗಿಯೇ ತಿರುಗೇಟು ಕೊಟ್ಟ ರಾಹುಲ್!

ಕೊಹ್ಲಿ ಜೊತೆ ಅಂಡರ್ 19 ಆಡಿದ್ದ ಕ್ರಿಕೆಟರ್

2008ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಗೋಸ್ವಾಮಿ, ನಂತರ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಪ್ರತಿನಿಧಿಸಿದ್ದರು. ಅಲ್ಲದೆ, ಭಾರತದ ಅಂಡರ್-19 ತಂಡದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಆಡಿದ ಅನುಭವವನ್ನು ಹೊಂದಿದ್ದಾರೆ. ಈ ದಾಳಿಯಿಂದ ಉಂಟಾದ ಆಘಾತದ ನಡುವೆ, ಕ್ರೀಡಾಪಟುಗಳು ಒಗ್ಗಟ್ಟಿನಿಂದ ಈ ದುರಂತವನ್ನು ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗೋಸ್ವಾಮಿಯವರ ಈ ಕರೆ, ಕ್ರಿಕೆಟ್ ಸಂಬಂಧಗಳ ಮೇಲೆ ರಾಜಕೀಯ ಮತ್ತು ಭದ್ರತಾ ವಿಷಯಗಳ ಪ್ರಭಾವವನ್ನು ಮತ್ತೊಮ್ಮೆ ಚರ್ಚೆಗೆ ಒಡ್ಡಿದೆ.