Pahalgam Terror Attack: ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರ ಸಾವಿಗೆ ಖಂಡನೆ; ಐಪಿಎಲ್ನಿಂದ ಮಹತ್ವದ ನಿರ್ಧಾರ​ | Pahalgam Terror Attack SRH vs MI Match to Pay Tribute with Black Armbands and No Fireworks

Pahalgam Terror Attack: ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರ ಸಾವಿಗೆ ಖಂಡನೆ; ಐಪಿಎಲ್ನಿಂದ ಮಹತ್ವದ ನಿರ್ಧಾರ​ | Pahalgam Terror Attack SRH vs MI Match to Pay Tribute with Black Armbands and No Fireworks

ಒಂದು ನಿಮಿಷ ಮೌನಾಚರಣೆ, ಕಪ್ಪು ಪಟ್ಟಿ ಧರಿಸಿ ಆಟ

ಹಿಂದೂಸ್ತಾನ್ ಟೈಮ್ಸ್‌ಗೆ ವರದಿ ಪ್ರಕಾರ, ಆಟಗಾರರು ಮತ್ತು ಅಂಪೈರ್​ಗಳು ಉಗ್ರರ ದಾಳಿಯಿಂದ ಸಾವನ್ನಪ್ಪಿದವರಿಗೆ ಗೌರವ ಸೂಚಿಸಲು ಕಪ್ಪು ಪಟ್ಟಿಗಳನ್ನು ಧರಿಸಲಿದ್ದಾರೆ. ಪಂದ್ಯದ ಆರಂಭದ ಮೊದಲು ಒಂದು ನಿಮಿಷದ ಮೌನಾಚರಣೆಯನ್ನೂ ಆಯೋಜಿಸಲಾಗಿದೆ. ಈ ದಾಳಿಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ. ಇಂದಿನ ಪಂದ್ಯದಲ್ಲಿ ಚೀರ್‌ಲೀಡರ್‌ಗಳು ಮತ್ತು ಪಟಾಕಿಗಳಿರುವುದಿಲ್ಲ. ವಿಶೇಷ ಲೈಟಿಂಗ್​​ ಪ್ರದರ್ಶನವೂ ಇರುವುದಿಲ್ಲ ಆಟಗಾರರು ಮತ್ತು ತೀರ್ಪುಗಾರರು ಕಪ್ಪು ಪಟ್ಟಿಗಳನ್ನು ಧರಿಸಲಿದ್ದಾರೆ. ಮತ್ತು ಪಂದ್ಯದ ಮೊದಲು ಒಂದು ನಿಮಿಷದ ಮೌನವಿರುತ್ತದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಇದನ್ನೂ ಓದಿ: Pahalgam Attack: ಈ ಕ್ರೂರ ಕೃತ್ಯಕ್ಕೆ ನ್ಯಾಯ ಸಿಗಲಿ ಎಂದ ವಿರಾಟ್ ಕೊಹ್ಲಿ! ಗಿಲ್‌, ಪಾಂಡ್ಯ ದಾಳಿ ಬಗ್ಗೆ ಹೇಳಿದ್ದೇನು?

26 ಪ್ರವಾಸಿಗರನ್ನ ಬಲಿ ತೆಗೆದುಕೊಂಡ ಉಗ್ರರು

ಕಾಶ್ಮೀರ ಪೊಲೀಸರ ಪ್ರಕಾರ, ನಾಲ್ಕು ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ಪ್ರವಾಸಿಗರನ್ನ ಹಿಂದೂ ಅಥವಾ ಮುಸ್ಲಿಮರೆಂದು ಪ್ರಶ್ನಿಸಿ, ಮುಖ್ಯವಾಗಿ ಹಿಂದು ಎಂದವರನ್ನ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಪ್ರವಾಸಿಗರನ್ನ ಉಗ್ರರು ಬಲಿ ತೆಗೆದುಕೊಂಡಿದ್ದಾರೆ. ಈ ದಾಳಿಯ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸೌದಿ ಅರೇಬಿಯಾದ ಭೇಟಿಯನ್ನು ಕಡಿತಗೊಳಿಸಿ ದೆಹಲಿಗೆ ಮರಳಿದ್ದಾರೆ.

ಕ್ರಿಕೆಟಿಗರಿಂದ ಸಂತಾಪ

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಇನ್‌ಸ್ಟಾಗ್ರಾಮ್‌ನಲ್ಲಿ, “ಪಹಲ್ಗಾಮ್‌ನಲ್ಲಿ ಮುಗ್ದ ಪ್ರವಾಸಿಗರ ಮೇಲಿನ ದಾಳಿಯಿಂದ ಆಘಾತಗೊಂಡಿದ್ದೇನೆ. ಬಾಧಿತ ಕುಟುಂಬಗಳಿಗೆ ಭಾರತ ಮತ್ತು ವಿಶ್ವ ಒಗ್ಗಟ್ಟಾಗಿ ನಿಲ್ಲುತ್ತದೆ,” ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ಕೊಹ್ಲಿ, “ಪಹಲ್ಗಾಮ್‌ನ ದುಷ್ಕೃತ್ಯದಿಂದ ತೀವ್ರವಾಗಿ ದುಃಖಿತನಾಗಿದ್ದೇನೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ ಸಲ್ಲಿಸುತ್ತೇವೆ, ಅವರ ಪ್ರೀತಿಪಾತ್ರರನ್ನ ಕಳೆದುಕೊಂಡಿರುವುದಕ್ಕೆ ನ್ಯಾಯ ಒದಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Pahalgam Attack: ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ 26 ಜನರು ಯಾರ್ಯಾರು ಗೊತ್ತಾ? ಫುಲ್​ ಲಿಸ್ಟ್​ ಇಲ್ಲಿದೆ ನೋಡಿ!

ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ, ” ಪಹಲ್ಗಾಮ್ ಸುದ್ದಿ ಕೇಳಿ ವಿಷಾದಗೊಂಡಿದ್ದೇನೆ. ಬಾಧಿತರ ಕುಟುಂಬಗಳ ಜೊತೆಗಿದ್ದೇನೆ,” ಎಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನ ಮಾರ್ಗದರ್ಶಕ ಕೆವಿನ್ ಪೀಟರ್ಸನ್ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.

ಹಾಕಿ ತಾರೆ ಪಿಆರ್ ಶ್ರೀಜೇಷ್ ಎಕ್ಸ್‌ನಲ್ಲಿ, “ಖಂಡನೆ ಸಾಲದು, ನ್ಯಾಯ ಸಿಗಲೇಬೇಕು. ಭಯೋತ್ಪಾದನೆ ಗೆಲ್ಲಲು ಬಿಡಬಾರದು,” ಎಂದು ತಿಳಿಸಿದ್ದಾರೆ. ಒಲಿಂಪಿಕ್ ವಿಜೇತ ಅಭಿನವ್ ಬಿಂದ್ರಾ, “ಈ ಭಯಾನಕ ದಾಳಿಯಿಂದ ಹೃದಯ ಒಡದಿದೆ. ದ್ವೇಷ ಮತ್ತು ಹಿಂಸೆಗೆ ವಿಶ್ವದಲ್ಲಿ ಸ್ಥಾನವಿಲ್ಲ,” ಎಂದಿದ್ದಾರೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, “ಕಾಶ್ಮೀರದ ಸೌಂದರ್ಯವನ್ನು ಕಂಡವನಾಗಿ, ಈ ದಾಳಿ ನೋವುಂಟುಮಾಡಿದೆ. ಭಾರತವನ್ನು ಅಸ್ಥಿರಗೊಳಿಸುವವರನ್ನ ಬಿಡಬಾರದು” ಎಂದು ಆಗ್ರಹಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ, “ಜಮ್ಮು ಕಾಶ್ಮೀರದ ದಾಳಿಯಿಂದ ದುಃಖಿತನಾಗಿದ್ದೇನೆ. ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ,” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಜಸ್ಪ್ರೀತ್ ಬುಮ್ರಾ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಇತರ ಕ್ರೀಡಾಪಟುಗಳು ಶೋಕ ವ್ಯಕ್ತಪಡಿಸಿದ್ದಾರೆ. ಗಂಭೀರ್, “ಈ ದಾಳಿಗೆ ಕಾರಣರಾದವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಭಾರತ ತಕ್ಕ ಪ್ರತಿಕ್ರಿಯೆ ನೀಡುತ್ತದೆ,” ಎಂದಿದ್ದಾರೆ.