Pet Love: ಬೆಕ್ಕುಗಳಿಗಾಗಿ ಮನೆಯನ್ನೇ ಕಟ್ಟಿದ ಉಜಿರೆಯ ದಂಪತಿ- ಇವರ ಪ್ರಾಣಿ ಪ್ರೀತಿ ಅಪಾರ! | Pet Love: A couple from Ujira built a house for cats – their love for animals is immense!

Pet Love: ಬೆಕ್ಕುಗಳಿಗಾಗಿ ಮನೆಯನ್ನೇ ಕಟ್ಟಿದ ಉಜಿರೆಯ ದಂಪತಿ- ಇವರ ಪ್ರಾಣಿ ಪ್ರೀತಿ ಅಪಾರ! | Pet Love: A couple from Ujira built a house for cats – their love for animals is immense!

Last Updated:

ಈ ಮನೆಯಲ್ಲಿ ಹುಟ್ಟಿ ಬೆಳೆದ ಒಂದು ಬೆಕ್ಕಿನ ಮರಿಯನ್ನೂ ಈ ದಂಪತಿ ಮಾರಾಟ ಮಾಡಿಲ್ಲ. ನಮ್ಮ ಮನೆಯಲ್ಲಿ ಹುಟ್ಟಿದ ಮರಿಗಳು ತಮ್ಮಲ್ಲಿಯೇ ಆಡಿಕೊಂಡು ಇರಬೇಕು ಅನ್ನೋದು ಅವರ ಆಸೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಆ ವೃದ್ಧ ದಂಪತಿ ಹರಕಲು ಮನೆಯಲ್ಲಿ ವಾಸ. ಸಣ್ಣ ಕೃಷಿ ಭೂಮಿ, 2 ದನ, 2 ಕರು, 150 ಕ್ಕೂ ಅಧಿಕ ಬೆಕ್ಕುಗಳು, ಒಂದಷ್ಟು ಕೋಳಿಗಳು ಇಷ್ಟೇ ಅವರ ಪ್ರಪಂಚ. ತಾವು ಹರಕಲು ಮನೆಯಲ್ಲಿದ್ದರೂ ಆ ವೃದ್ಧ ದಂಪತಿ ತನ್ನ ಮನೆಯಲ್ಲಿ ವಾಸವಿರುವ ಬೆಕ್ಕುಗಳಿಗೆ(Cats) ಆಶ್ರಮವನ್ನೇ ಕಟ್ಟಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಉಜಿರೆಯ ಮೀನಂದೇಲುವಿನ ರಾಜೇಶ್ ಗೌಡ ಮತ್ತು ಸೀತಮ್ಮ ದಂಪತಿ ತಮ್ಮಿಷ್ಟದ ಬೆಕ್ಕುಗಳಿಗೆ ತೋರಿಸಿದ ಪ್ರೀತಿಯ ಪ್ರತಿರೂಪ.

ನೂರವೈತ್ತಕ್ಕಿಂತಲೂ ಅಧಿಕ ಬೆಕ್ಕುಗಳನ್ನು ಸಾಕುತ್ತಿರುವ ರಾಜೇಶ್ ಗೌಡ ದಂಪತಿ ಬೆಕ್ಕುಗಳಿಗಾಗಿ ಮನೆಯೆದುರು ನೂತನ ಗೂಡು ನಿರ್ಮಿಸಿದ್ದಾರೆ. ಬೆಕ್ಕಿಗಳಿಗೂ ವ್ಯವಸ್ಥಿತವಾದ ಜಾಗ ಬೇಕು ಎಂಬ ಆಸೆಯಿಂದ ರಾಜೇಶ್ ಗೌಡ ಅವರು ಈ ನೂತನ ಗೂಡು ನಿರ್ಮಾಣ ಮಾಡಿದ್ದಾರೆ. ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು, ಕಾಡು ಪ್ರಾಣಿಗಳಿಂದ ಬೆಕ್ಕಿನ ಮರಿಗಳನ್ನು ಕಾಪಾಡಲು ಈ ನೂತನ ಗೂಡು ನಿರ್ಮಾಣ ಮಾಡಿದ್ದಾರೆ. ಈ ಗೂಡಿನಲ್ಲಿ ನೀರು, ಮಲಗಲು ಅಚ್ಚುಕಟ್ಟಾದ ವ್ಯವಸ್ಥೆ, ಗೂಡು ತೊಳೆಯಲು ನೀರಿನ ವ್ಯವಸ್ಥೆ, ಬೆಳಕಿನ ಸೌಕರ್ಯ ಮಾಡಲಾಗಿದೆ.

ಇದನ್ನೂ ಓದಿ: Dakshina Kannada: ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆ, ತುಂಬಿ ಹರಿಯುತ್ತಿರುವ ಹಳ್ಳ- ತೊರೆಗಳು!

ಕಳೆದ ಹನ್ನೊಂದು ವರ್ಷದಿಂದ ನಿರ್ಗತಿಕ ಬೆಕ್ಕುಗಳನ್ನು ಸಾಕುತ್ತಿರುವ ಈ ದಂಪತಿಗೆ ಮಕ್ಕಳಿಲ್ಲ.ಆದರೆ ಬೆಕ್ಕುಗಳಲ್ಲಿ ಮಕ್ಕಳನ್ನು ಕಂಡು, ರಸ್ತೆಯಲ್ಲಿ ಅನಾಥವಾಗಿರುವ ಬೆಕ್ಕಿನ ಮರಿಗಳನ್ನು ತಂದು ಅವುಗಳನ್ನು ಸಾಕುತ್ತಿದ್ದಾರೆ. ಆರ್ಥಿಕವಾಗಿ ಶಕ್ತರಲ್ಲವಾದರೂ ಬೆಕ್ಕುಗಳಿಗೆ ಈ ದಂಪತಿ ಕಡಿಮೆ ಮಾಡಿಲ್ಲ. ಈ ಮನೆಯಲ್ಲಿ ಹುಟ್ಟಿ ಬೆಳೆದ ಒಂದು ಬೆಕ್ಕಿನ ಮರಿಯನ್ನೂ ಈ ದಂಪತಿ ಮಾರಾಟ ಮಾಡಿಲ್ಲ. ನಮ್ಮ ಮನೆಯಲ್ಲಿ ಹುಟ್ಟಿದ ಮರಿಗಳು ತಮ್ಮಲ್ಲಿಯೇ ಆಡಿಕೊಂಡು ಇರಬೇಕು ಅನ್ನೋದು ಅವರ ಆಸೆ.

ಈ ಬೆಕ್ಕಿನ ಅರಮನೆ ಬೆಕ್ಕುಗಳಿಗೆ ಒಂದು ರೀತಿಯ ಆಶ್ರಮವಾಗಿದೆ. ನಿರ್ಗತಿಕ ಬೆಕ್ಕುಗಳಿಗೆ ಆಶ್ರಯವನ್ನು ಇಲ್ಲಿ ನೀಡುತ್ತಾರೆ‌. ಆದರೆ ಬೆಕ್ಕುಗಳ ಸಂಖ್ಯೆ ಜಾಸ್ತಿಯಾದಂತೆಯೇ ಅವುಗಳ ಖರ್ಚು-ವೆಚ್ಚವೂ ಜಾಸ್ತಿ. ಕೆಲವರು ಈ ಗೂಡಿಗೆ ತಮ್ಮ‌ ಮನೆಯ ಮರಿಗಳನ್ನು ಬಂದು ಬಿಡೋದು ಕೂಡಾ ಇದೆ. ಆದರೆ ಆರ್ಥಿಕ ಸ್ಥಿತಿವಂತರಲ್ಲದ ಈ ದಂಪತಿ, ಜನ ಸಹಾಯ ಮಾಡಿದರೆ ಅವುಗಳ ಲಾಲನೆ ಪಾಲನೆ ಮಾಡಬಹುದು ಅಂತಾ ಹೇಳುತ್ತಾರೆ.