Punjab Kings: ‘ನಾನು ಮಾಡಿದ ಆ ತಪ್ಪಿಗೆ ಶ್ರೇಯಸ್ ಅಯ್ಯರ್ ನನಗೆ ಕಪಾಳಮೋಕ್ಷ ಮಾಡಬೇಕಿತ್ತು’! ಪಂಜಾಬ್ ಸ್ಟಾರ್ ಬ್ಯಾಟರ್ ಹೀಗಂದಿದ್ಯಾಕೆ? | shreyas Iyer should Slap me because i had a huge mistake Shashank Singh admitted his mistake vs MI

Punjab Kings: ‘ನಾನು ಮಾಡಿದ ಆ ತಪ್ಪಿಗೆ ಶ್ರೇಯಸ್ ಅಯ್ಯರ್ ನನಗೆ ಕಪಾಳಮೋಕ್ಷ ಮಾಡಬೇಕಿತ್ತು’! ಪಂಜಾಬ್ ಸ್ಟಾರ್ ಬ್ಯಾಟರ್ ಹೀಗಂದಿದ್ಯಾಕೆ? | shreyas Iyer should Slap me because i had a huge mistake Shashank Singh admitted his mistake vs MI

Last Updated:

ಐಪಿಎಲ್‌ನಲ್ಲಿ ಪಂಜಾಬ್ ತಂಡದ ಸಾಧನೆಯನ್ನು ಯಾರೂ ಕೂಡ ಕಡೆಗಣಿಸುವಂತಿರಲಿಲ್ಲ. ಈ ನಡುವೆ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಉಪನಾಯಕ ಶಶಾಂಕ್ ಸಿಂಗ್ ವಿರುದ್ಧ ಕಿಡಿಕಾರಿದ್ದ ಘಟನೆ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅಯ್ಯರ್-ಶಶಾಂಕ್ ಸಿಂಗ್ಅಯ್ಯರ್-ಶಶಾಂಕ್ ಸಿಂಗ್
ಅಯ್ಯರ್-ಶಶಾಂಕ್ ಸಿಂಗ್

ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ತೋರಿದ ಪಂಜಾಬ್ ಕಿಂಗ್ಸ್ (PBKS) ತಂಡ ಟೂರ್ನಿಯಲ್ಲಿ ಫೈನಲ್ ತಲುಪಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ವಿರೋಚಿತ ಸೋಲು ಅನುಭಿಸುವ ಮೂಲಕ ನಿರಾಸೆ ಅನುಭವಿಸಿದೆ. ಆದ್ರೆ, ಟೂರ್ನಿಯಲ್ಲಿ ಆ ತಂಡದ ಸಾಧನೆಯನ್ನು ಯಾರೂ ಕೂಡ ಕಡೆಗಣಿಸುವಂತಿರಲಿಲ್ಲ. ಈ ನಡುವೆ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಉಪನಾಯಕ ಶಶಾಂಕ್ ಸಿಂಗ್ (Shashank Singh) ವಿರುದ್ಧ ಕಿಡಿಕಾರಿದ್ದ ಘಟನೆ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹೌದು, ಪಂಜಾಬ್ ನಾಯಕ ಅಯ್ಯರ್ ಆಕ್ರೋಶದ ಬಳಿಕ ಉಪನಾಯಕ ಶಶಾಂಕ್ ಸಿಂಗ್ ಇದೇ ಮೊದಲ ಬಾರಿಗೆ ಅಂದಿನ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್ 2025 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ಅನಗತ್ಯವಾಗಿ ಶಶಾಂಕ್ ಸಿಂಗ್ ಅವರು ರನೌಟ್ ಆಗಿದ್ದರು. ಇದರಿಂದ ಕೋಪಗೊಂಡ ಅಯ್ಯರ್ ಕಟುವಾಗಿ ಶಶಾಂಕ್ ವಿರುದ್ಧ ಕಿಡಿಕಾರಿದ್ದರು. ಇದಾದ ಬಳಿಕ ಅಯ್ಯರ್ ವಿರುದ್ಧ ಅನೇಕ ಟೀಕೆಗಳು ವ್ಯಕ್ತವಾಗಿತ್ತು.

ನಾಕೌಟ್ ಪಂದ್ಯದಲ್ಲಿ ಪಿಬಿಕೆಎಸ್‌ನ ಚೇಸಿಂಗ್ ಸಂದರ್ಭದಲ್ಲಿ ನಾಯಕ ಶ್ರೇಯಸ್ 41 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿ ಮುಂಬೈ ವಿರುದ್ಧ ದಾಖಲೆಯ 204 ರನ್‌ಗಳ ಗುರಿಯನ್ನು ಬೆನ್ನಟ್ಟಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಆದರೆ 17 ನೇ ಓವರ್‌ನಲ್ಲಿ ಶಶಾಂಕ್ 2 ರನ್‌ಗಳನ್ನು ಸುಲಭವಾಗಿ ಪಡೆಯಬಹುದಿತ್ತು. ಆದ್ರೆ, ಅವರು ಬೇಜವಾಬ್ದಾರಿಯುತವಾಗಿ ರನೌಟ್ ಆಗಿ ಹೊರನಡೆದರು. ಈ ರನೌಟ್ ತುಂಬಾ ದುಬಾರಿಯಾಗಿತ್ತು. ಪಂದ್ಯದ ನಂತರದ ಹ್ಯಾಂಡ್‌ಶೇಕ್‌ ನೀಡುವ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಅವರು ಶಶಾಂಕ್ ಅವರನ್ನು ನಿಂದಿಸುತ್ತಿರುವುದು ಕಂಡುಬಂದಿತು.

ನನಗೆ ಅಯ್ಯರ್ ಕಪಾಳ ಮೋಕ್ಷ ಮಾಡಬೇಕಿತ್ತು!

ಈ ಬಗ್ಗೆ ಮಾತನಾಡಿದ ಶಶಾಂಕ್, “ನಾನು ಅದಕ್ಕೆ ಅರ್ಹ, ಅಯ್ಯರ್ ನನಗೆ ಕಪಾಳಮೋಕ್ಷ ಮಾಡಬೇಕಿತ್ತು. ನಾನು ಮಾಡಿದ ಆ ತಪ್ಪಿನಿಂದ ನನ್ನ ತಂದೆ ಫೈನಲ್ ತನಕ ನನ್ನೊಂದಿಗೆ ಮಾತನಾಡಲಿಲ್ಲ” ಎಂದು ಶಶಾಂಕ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು . “ನಾನು ಅವರ ಕೋಪಕ್ಕೆ ಒಳಗಾಗುವುದರಲ್ಲಿ ಅರ್ಥವಿದೆ. ಕಾರಣ ನಾನು ಗಾರ್ಡನ್‌ನಲ್ಲಿ ನಡೆದುಕೊಂಡಂತೆಯೂ ಹೋಗಲಿಲ್ಲ. ಬದಲಾಗಿ ಬೀಚ್‌ನಲ್ಲಿ ವಾಕ್ ಮಾಡಿದಂತೆ ರನ್ ಓಡುತ್ತಿದ್ದೆ ಹಾಗಾಗಿ ನಾನು ರನೌಟ್ ಆದೆ. ನನ್ನ ಬೇಜವಾಬ್ದಾರಿಯುತ ಆಟ ತಂಡದ ಮೇಲೆ ಏನು ಪರಿಣಾಮ ಬೀರಿತು ಎಂದು ಬಳಿಕ ನನಗೆ ಅರಿವಾಯಿತು. ಆದ್ರೆ, ಶ್ರೇಯಸ್ ಘಟನೆಯ ಬಳಿಕ ನನ್ನನ್ನು ಊಟಕ್ಕೆ ಕರೆದುಕೊಂಡು ಹೋದರು ಎಂದರು.

ಪಿಬಿಕೆಎಸ್ ತಂಡವು ಎಂಐ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಅರ್ಹತೆ ಪಡೆಯಿತು ಆದರೆ ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ರಜತ್ ಪಾಟಿದಾರ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೋತ ಕಾರಣ ಪಂಜಾಬ್ ತನ್ನ ಮೊದಲ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಶ್ರೇಯಸ್ ಅಯ್ಯರ್ ಗಿಂತ ಉತ್ತಮ ನಾಯಕ ಇಲ್ಲ

ಶಶಾಂಕ್ ಸಿಂಗ್ ಅವರು ಶ್ರೇಯಸ್ ಅವರ ನಾಯಕತ್ವದ ಕುರಿತು ಮಾತನಾಡಿ, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಸರಳ ಸ್ವಭಾವದ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ. ನಾನು ಇತರರೊಂದಿಗೆ ಏನು ಮಾತನಾಡಿದ್ದೇನೆ ಮತ್ತು ನೋಡಿದ್ದೇನೆ, ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಅಯ್ಯರ್‌ಗಿಂತ ಉತ್ತಮ ನಾಯಕ ಇಲ್ಲ. ಅವರು ನಮಗೆ ಸ್ವಾತಂತ್ರ್ಯ ನೀಡುತ್ತಾರೆ. ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಾರೆ. ಶ್ರೇಯಸ್‌ಗೆ ಒಂದು ಮನೋಭಾವವಿದೆ ಎಂದು ಯಾರೂ ಹೇಳುವುದಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಯುವಕರು ಅವರ ಜೊತೆ ಚಿಲ್ ಮಾಡುತ್ತಾರೆ ಎಂದರು.