Puttur: ಮಹಾಲಿಂಗೇಶ್ವರ ದೇವಸ್ಥಾನದ ಅಡುಗೆ ಮನೆಗೆ ವಿದ್ಯುತ್ಚಾಲಿತ ಸ್ಟೀಮ್ ಸಿಸ್ಟಮ್‌ ಅಳವಡಿಕೆ! | Puttur: Installation of an electric steam system in the kitchen of Mahalingeshwara Temple!

Puttur: ಮಹಾಲಿಂಗೇಶ್ವರ ದೇವಸ್ಥಾನದ ಅಡುಗೆ ಮನೆಗೆ ವಿದ್ಯುತ್ಚಾಲಿತ ಸ್ಟೀಮ್ ಸಿಸ್ಟಮ್‌ ಅಳವಡಿಕೆ! | Puttur: Installation of an electric steam system in the kitchen of Mahalingeshwara Temple!

Last Updated:

ಈ ಸ್ಟೀಮ್ ವ್ಯವಸ್ಥೆಯನ್ನು ಭಕ್ತಾದಿಗಳ ದೇಣಿಗೆಯ ಮೂಲಕ ಪ್ರಾರಂಭಿಸಲಾಗಿತ್ತು, ಕೆನರಾ ಬ್ಯಾಂಕ್ 10 ಲಕ್ಷ ರೂಪಾಯಿ, ಕರ್ನಾಟಕ ಬ್ಯಾಂಕ್ 5 ಲಕ್ಷ ಮತ್ತು ಇತರ ದಾನಿಗಳಿಂದ ಸಂಗ್ರಹಿಸಿ ಈ ಸ್ಟೀಮ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ಹತ್ತೂರ ಒಡೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ(Puttur Mahatobhara Mahalingeshwara Temple) ಬರುವ ಭಕ್ತಾದಿಗಳ(Devotees) ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಲಾರಂಭಿಸಿದೆ.‌ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಕಾರ್ಯಗಳಿಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಮಧ್ಯಾಹ್ನದ ಅನ್ನದಾನ(Annadana) ಸ್ವೀಕರಿಸುವ ಭಕ್ತಾದಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಅಡುಗೆ ಮನೆಗೆ ಇದೀಗ ಹೆಚ್ಚು ಸಾಮರ್ಥ್ಯದ ವಿದ್ಯುತ್ ಚಾಲಿತ ಸ್ಟೀಮ್ ವ್ಯವಸ್ಥೆಯನ್ನು(Electric steam system) ನೂತನವಾಗಿ ಮಾಡಲಾಗಿದೆ. ದಿನವೊಂದಕ್ಕೆ 500 ರಷ್ಟಿದ್ದ ಭಕ್ತರ ಸಂಖ್ಯೆ ಇತ್ತೀಚಿನ‌ ದಿನಗಳಲ್ಲಿ 3 ರಿಂದ 5 ಸಾವಿರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.

ಅಷ್ಟೇ ಸಂಖ್ಯೆಯ ಜನ ಮಧ್ಯಾಹ್ನದ ಅನ್ನದಾನಕ್ಕೂ ಬರುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಅನ್ನ ಬೇಯಿಸಲು ಈ ಸ್ಟೀಮ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹಿಂದೆ ಗ್ಯಾಸ್ ಬಳಸಿ‌ ಮಾಡಲಾಗುತ್ತಿದ್ದ ಅಡುಗೆಯ ಬದಲು‌ ಇನ್ನು ವಿದ್ಯುತ್ ಚಾಲಿತ ಸ್ಟೀಮ್ ಬಳಸಿ ಅನ್ನ ಬೇಯಿಸಲಾಗುತ್ತದೆ. ಈ ಸ್ಟೀಮ್ ವ್ಯವಸ್ಥೆಯನ್ನು ಭಕ್ತಾದಿಗಳ ದೇಣಿಗೆಯ ಮೂಲಕ ಪ್ರಾರಂಭಿಸಲಾಗಿತ್ತು, ಕೆನರಾ ಬ್ಯಾಂಕ್ 10 ಲಕ್ಷ ರೂಪಾಯಿ, ಕರ್ನಾಟಕ ಬ್ಯಾಂಕ್ 5 ಲಕ್ಷ ಮತ್ತು ಇತರ ದಾನಿಗಳಿಂದ ಸಂಗ್ರಹಿಸಿ ಈ ಸ್ಟೀಮ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಒಟ್ಟು 16.75 ಲಕ್ಷ ರೂಪಾಯಿಗಳು ಈ ಸ್ಟೀಮ್ ವ್ಯವಸ್ಥೆಗೆ ಖರ್ಚಾಗಿದ್ದು, ಭಕ್ತರ ಅನುಕೂಲದ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಕ್ಷೇತ್ರದಲ್ಲಿ ಮಾಡಲಾಗಿದೆ.

ಕ್ಷೇತ್ರವನ್ನು ಸಂಪೂರ್ಣ ಜೀರ್ಣೊದ್ಧಾರ ಮತ್ತು ಅಭಿವೃದ್ಧಿ ಮಾಡುವ ಉದ್ಧೇಶದಿಂದ ಮಾಸ್ಟರ್ ಪ್ಲಾನ್ ಸಭೆಯನ್ನು ಮೇ 9 ರಂದು ಬೆಂಗಳೂರಿನಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರು, ತಾಂತ್ರಿಕ ತಜ್ಞರು, ಅಧಿಕಾರಿಗಳು ಭಾಗವಹಿಸಲಿದ್ದು, ಕ್ಷೇತ್ರದ ಅಭಿವೃದ್ಧಿಯ ಚಿತ್ರಣವನ್ನು ಸರಕಾರದ ಮುಂದೆ ಇಡಲಾಗುತ್ತದೆ.

ಜೀರ್ಣೋದ್ಧಾರದ ಉದ್ಧೇಶದಿಂದ ಈಗಾಗಲೇ 20 ಸದಸ್ಯರ ಸಮಿತಿ ಪಟ್ಟಿಯನ್ನೂ ಮಾಡಲಾಗಿದ್ದು, ಇದನ್ನು ಸರಕಾರದ ಮುಂದಿಟ್ಟು, ಅಪ್ರೂವಲ್ ಪಡೆದು ಜೀರ್ಣೋದ್ದಾರ ಕಾರ್ಯ ಆರಂಭಿಸಲಾಗುತ್ತದೆ. ಸುಮಾರು 50 ರಿಂದ 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ‌ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದ್ದು, ರಾಜ್ಯದ ಎಲ್ಲಾ ಭಕ್ತರಿಗೆ ಹತ್ತೂರ ಒಡೆಯ ಮಹಾಲಿಂಗೇಶ್ವರನ ಸೇವೆ ಮಾಡುವ ಅವಕಾಶವನ್ನು ಕಲ್ಪಿಸುವ ಯೋಜನೆಯಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.