Puttur Rally: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ವರ್ಷಾಚರಣೆ, ಪುತ್ತೂರಿನಲ್ಲಿ ಏಕತಾ ರ‍್ಯಾಲಿ! | Sardar Vallabhbhai Patel | ದಕ್ಷಿಣ ಕನ್ನಡ

Puttur Rally: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ವರ್ಷಾಚರಣೆ, ಪುತ್ತೂರಿನಲ್ಲಿ ಏಕತಾ ರ‍್ಯಾಲಿ! | Sardar Vallabhbhai Patel | ದಕ್ಷಿಣ ಕನ್ನಡ

Last Updated:

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಪ್ರಯುಕ್ತ ಪುತ್ತೂರಿನಲ್ಲಿ ಏಕತಾ ಜಾಥಾ ನಡೆಯಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಭಾರತ (India) ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ 150 ನೇ ಜನ್ಮ ವರ್ಷಾಚರಣೆಯನ್ನು ಕೇಂದ್ರ ಸರಕಾರದ ಸೂಚನೆಯಂತೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Puttur) ಜಿಲ್ಲಾ ಮಟ್ಟದ ಏಕತಾ ಜಾಥಾ (Ekta Rally) ಹಮ್ಮಿಕೊಳ್ಳಲಾಗಿತ್ತು. ಭಾರತದಲ್ಲಿ 565 ಸಂಸ್ಥಾನಗಳನ್ನು ಭಾರತದ ಜತೆ ಸೇರಿಸಿಕೊಂಡವರು ಪಟೇಲ್ ಅವರು. ವಿಶ್ವದಲ್ಲೇ ಎತ್ತರದ ಅವರ ಮೂರ್ತಿಯನ್ನು ಮೋದಿಯವರು ಕೇವಡಿಯ ಗ್ರಾಮದಲ್ಲಿ ನಿರ್ಮಿಸಿದರು. ಪಟೇಲರ 150 ನೇ ಜನ್ಮ ದಿನದ ಪ್ರಯುಕ್ತ ದೇಶದೆಲ್ಲೆಡೆ ಏಕತಾ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

ಪಟೇಲರ ಏಕತಾ ರ‍್ಯಾಲಿ

ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ದಕ್ಷಿಣಕನ್ನಡ ಜಿಲ್ಲಾಡಳಿತ, ಮೇರಾ ಯುವ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ, ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಪುತ್ತೂರು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಪುತ್ತೂರು ತಾಲೂಕು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಘಟಕ ಸಹಕಾರದೊಂದಿಗೆ ಜಾಥಾ ನಡೆಯಿತು.

ಏಕತಾ ಜಾಥಾ

ಬೆಳಗ್ಗೆ 8.30 ಕ್ಕೆ ನೆಹರುನಗರ ವಿವೇಕಾನಂದ ಕಾಲೇಜು ಆವರಣದಲ್ಲಿರುವ ವಿವೇಕಾನಂದ ಮೂರ್ತಿಯ ಬಳಿಯಿಂದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಏಕತಾ ಜಾಥಾ ನಡೆಯಿತು.