Rajat Patidar: ರಜತ್ ಪಾಟಿದಾರ್ ಮಾಡಿದ ಎಡವಟ್ಟಿಗೆ ಪಚೀತಿಗೆ ಒಳಗಾದ ಕೊಹ್ಲಿ, ಡಿವಿಲಿಯರ್ಸ್! ವಿಧಿಯಿಲ್ಲದೆ ಪೊಲೀಸರ ಮೊರೆ ಹೋದ RCB ಕ್ಯಾಪ್ಟನ್ | RCB Captain Rajat Patidar’s Old Phone Number Mix-Up: Chhattisgarh Teens Get Calls from Virat Kohli, AB de Villiers | ಕ್ರೀಡೆ

Rajat Patidar: ರಜತ್ ಪಾಟಿದಾರ್ ಮಾಡಿದ ಎಡವಟ್ಟಿಗೆ ಪಚೀತಿಗೆ ಒಳಗಾದ ಕೊಹ್ಲಿ, ಡಿವಿಲಿಯರ್ಸ್! ವಿಧಿಯಿಲ್ಲದೆ ಪೊಲೀಸರ ಮೊರೆ ಹೋದ RCB ಕ್ಯಾಪ್ಟನ್ | RCB Captain Rajat Patidar’s Old Phone Number Mix-Up: Chhattisgarh Teens Get Calls from Virat Kohli, AB de Villiers | ಕ್ರೀಡೆ

Last Updated:


ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಮನೀಶ್ ಎಂಬ ವ್ಯಕ್ತಿ ದಿನಸಿ ಅಂಗಡಿ ಗುಮಾಸ್ತನಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಸ್ನೇಹಿತ ಖೇಮ್ ರಾಜ್ ಅವರೊಂದಿಗೆ ಹೊಸ ಸಿಮ್ ಕಾರ್ಡ್ ಖರೀದಿಸಿದ್ದರು. ಆನ್ ಮಾಡುತ್ತಿದ್ದಂತೆ ಕೊಹ್ಲಿ ಸೇರಿ ಆರ್​ಸಿಬಿ ಕ್ರಿಕೆಟಿಗರ ಕರೆಗಳನ್ನ ಸ್ವೀಕರಿಸಲು ಶುರು ಮಾಡಿದ್ದಾರೆ.

ವಿರಾಟ್ ಕೊಹ್ಲಿ- ರಜತ್ ಪಾಟೀದಾರ್ವಿರಾಟ್ ಕೊಹ್ಲಿ- ರಜತ್ ಪಾಟೀದಾರ್
ವಿರಾಟ್ ಕೊಹ್ಲಿ- ರಜತ್ ಪಾಟೀದಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟಿದಾರ್ (Rajat Patidar) ವಿಚಿತ್ರ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಅವರ ತಪ್ಪಿನಿಂದಾಗಿ, ದಿನಸಿ ಅಂಗಡಿ ಗುಮಾಸ್ತರೊಬ್ಬರು, ಆರ್‌ಸಿಬಿ ಲೆಜೆಂಡರಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ತೊಂದರೆಗೆ ಸಿಲುಕುವಂತಾಗಿದೆ. ಪ್ರಸ್ತುತ, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ

ಛತ್ತೀಸ್‌ಗಢದ ವ್ಯಕ್ತಿಗೆ ಪಾಟೀದಾರ್ ನಂಬರ್

ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಮನೀಶ್ ಎಂಬ ವ್ಯಕ್ತಿ ದಿನಸಿ ಅಂಗಡಿ ಗುಮಾಸ್ತನಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಸ್ನೇಹಿತ ಖೇಮ್ ರಾಜ್ ಅವರೊಂದಿಗೆ ಹೊಸ ಸಿಮ್ ಕಾರ್ಡ್ ಖರೀದಿಸಿದ್ದರು. ಅದನ್ನು ಸಕ್ರಿಯಗೊಳಿಸಿದ ನಂತರ, ಅವರು ಅದನ್ನು ತಮ್ಮ ಮೊಬೈಲ್‌ನಲ್ಲಿ ಇರಿಸಿ ವಾಟ್ಸಾಪ್ ಅನ್ನು ಸ್ಥಾಪಿಸಿದರು. ಪ್ರೊಫೈಲ್ ಚಿತ್ರವಾಗಿ ರಜತ್ ಪಾಟಿದಾರ್ ಅವರ ಫೋಟೋವನ್ನು ನೋಡಿ ಅವರು ಆಶ್ಚರ್ಯಚಕಿತರಾದರು. ಇದು ಯಾವುದೋ ತಾಂತ್ರಿಕ ದೋಷವಾಗಿರಬಹುದು ಎಂದು ಭಾವಿಸಿ ಅವರು ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಶೀಘ್ರದಲ್ಲೇ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಿಂದ ವಾಟ್ಸಾಪ್ ಕರೆಗಳು ಮತ್ತು ವೀಡಿಯೊ ಕರೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು.

ಯುವಕರಿಗೆ ಕರೆ ಮಾಡಿದ ರಜತ್

ಮನೀಶ್ ಇದು ಒಂದು ರೀತಿಯ ತಮಾಷೆ ಎಂದು ಭಾವಿಸಿದರು. ಯಾರೋ ತನ್ನನ್ನ ಆಟವಾಡಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಭಾವಿಸಿದರು. ತಮ್ಮ ಸಂಖ್ಯೆ ಬೇರೆಯವರಿಗೆ ಹೋಗಿರುವುದನ್ನು ಅರಿತುಕೊಂಡ ರಜತ್ ಪಾಟಿದಾರ್ ಯುವಕರಿಗೆ ಕರೆ ಮಾಡಿ ನಂಬರ್ ಪಡೆಯಲು ಪ್ರಯತ್ನಿಸಿದ್ದಾರೆ. ಅವರು ಮನೀಶ್‌ಗೆ ಕರೆ ಮಾಡಿ ಆ ಸಂಖ್ಯೆಯನ್ನು ತಮಗೆ ನೀಡುವಂತೆ ಕೇಳಿದ್ದಾರೆ. ಇದು ಪಾಟಿದಾರ್​ ಕರೆ ಮಾಡಿದಾಗ ತಮಾಷೆ ಎಂದು ಭಾವಿಸಿದ, ಮನೀಶ್ ನೀನು ಪಾಟಿದಾರ್ ಆದರೆ, ನಾನು ಧೋನಿ ಎಂದು ವ್ಯಂಗ್ಯವಾಡಿದ್ದಾರೆ. ಆದರೆ ನಾನು ನಿಜವಾಗಲೂ ರಜತ್ ಪಾಟಿದಾರ್, ಅದಕ್ಕೆ ಆ ನಂಬರ್​ಗೆ ಪ್ರಮುಖ ವ್ಯಕ್ತಿಗಳಿಂದ ಕರೆಗಳು ಬರುತ್ತಿವೆ ಮತ್ತು ಅಗತ್ಯವಿದ್ದರೆ ಸ್ಥಳೀಯ ಪೊಲೀಸರನ್ನು ಕಳುಹಿಸುವುದಾಗಿ ಹೇಳಿದ್ದಾರೆ.

ಪೊಲೀಸರ ಮೂಲಕ ನಂಬರ್ ವಾಪಸ್

ಪಾಟೀದಾರ್ ಪೋನ್ ಮಾಡಿದ ಕೆಲವೇ ನಿಮಿಷಗಳಲ್ಲಿ, ಸ್ಥಳೀಯ ಪೊಲೀಸರು ಮನೀಶ್ ಅವರ ಮನೆಗೆ ತಲುಪಿದ್ದಾರೆ. ಇದರಿಂದ ಆಶ್ಚರ್ಯಚಕಿತರಾದ ಮನೀಶ್ ಮತ್ತು ಖೇಮ್ ರಾಜ್ ಅವರು ಆ ಸಂಖ್ಯೆ ರಜತ್ ಪಾಟಿದಾರ್ ಅವರದ್ದಾಗಿದೆ ಎಂದು ನಂಬಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ರಜತ್ ಪಾಟಿದಾರ್ ಅವರೊಂದಿಗೆ ತಾವು ಮಾತನಾಡಿದ್ದೇವೆ ಎಂದು ಸಂಭ್ರಮಿಸಿದ್ದಾರೆ. ನಂತರ ಅವರು ಸಿಮ್ ಅನ್ನು ಹಿಂತಿರುಗಿಸಿದ್ದಾರೆ.

90 ದಿನಗಳವರೆಗೆ ಬಳಸದಿದ್ದಕ್ಕೆ ಸಂಕಷ್ಟ

ರಜತ್ ಪಟಿದಾರ್ ಅವರು 90 ದಿನಗಳವರೆಗೆ ಆ ಫೋನ್ ಸಂಖ್ಯೆಯನ್ನು ಬಳಸಿರಲಿಲ್ಲ. ಟೆಲಿಕಾಂ ನಿಯಮಗಳ ಪ್ರಕಾರ, ಸಂಪರ್ಕವನ್ನು ರದ್ದುಗೊಳಿಸಿ ಹೊಸ ಗ್ರಾಹಕರಿಗೆ ನೀಡಲಾಗುತ್ತದೆ. ಈ ಕ್ರಮದಲ್ಲಿ, ಸಂಖ್ಯೆ ಮನೀಶ್ಗೆ ಸಿಕ್ಕಿದೆ. ಇದರ ಅರಿವಿಲ್ಲದ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ರಜತ್ ಪಟಿದಾರ್ ಅವರೊಂದಿಗೆ ಮಾತನಾಡಲು ಆ ಸಂಖ್ಯೆಗೆ ಕರೆ ಮಾಡಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Rajat Patidar: ರಜತ್ ಪಾಟಿದಾರ್ ಮಾಡಿದ ಎಡವಟ್ಟಿಗೆ ಪಚೀತಿಗೆ ಒಳಗಾದ ಕೊಹ್ಲಿ, ಡಿವಿಲಿಯರ್ಸ್! ವಿಧಿಯಿಲ್ಲದೆ ಪೊಲೀಸರ ಮೊರೆ ಹೋದ RCB ಕ್ಯಾಪ್ಟನ್