Ranji Trophy: ಶ್ರೇಯಸ್ ಗೋಪಾಲ್ 8 ವಿಕೆಟ್ ಆಟ ವ್ಯರ್ಥ! ಸೌರಾಷ್ಟ್ರಕ್ಕೆ ರೋಚಕ ಮುನ್ನಡೆ ತಂದುಕೊಟ್ಟ ಸಕಾರಿಯಾ | chetan Sakariya’s Spell Helps Saurashtra Grab 4-Run First Innings Lead | ಕ್ರೀಡೆ

Ranji Trophy: ಶ್ರೇಯಸ್ ಗೋಪಾಲ್ 8 ವಿಕೆಟ್ ಆಟ ವ್ಯರ್ಥ! ಸೌರಾಷ್ಟ್ರಕ್ಕೆ ರೋಚಕ ಮುನ್ನಡೆ ತಂದುಕೊಟ್ಟ ಸಕಾರಿಯಾ | chetan Sakariya’s Spell Helps Saurashtra Grab 4-Run First Innings Lead | ಕ್ರೀಡೆ

Last Updated:

10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚೇತನ್ ಸಕಾರಿಯ 29 ರನ್​ಗಳಿಸಿ ತಮ್ಮ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಕೇವಲ ಇನ್ನು ಒಂದು ದಿನದ ಆಟ ಬಾಕಿ ಉಳಿದಿರುವುದರಿಂದ ಈ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕ 3 ಅಂಕ ಪಡೆಯುವ ಅವಕಾಶವನ್ನ ಕಳೆದುಕೊಂಡಿದೆ.

ಕರ್ನಾಟಕ vs ಸೌರಾಷ್ಟ್ರಕರ್ನಾಟಕ vs ಸೌರಾಷ್ಟ್ರ
ಕರ್ನಾಟಕ vs ಸೌರಾಷ್ಟ್ರ

ಕರ್ನಾಟಕ ಮತ್ತು ಸೌರಾಷ್ಟ್ರ (Karnataka vs Saurashtra) ನುಡುವಿನ ರಣಜಿ (Ranji) ಪಂದ್ಯದ 3ನೇ ದಿನ ರೋಚಕ ಹಣಾಹಣಿಗೆ ಸಾಕ್ಷಿಯಾಗಿದೆ. ಎರಡೂ ತಂಡಗಳು ಇನ್ನಿಂಗ್ಸ್ ಮುನ್ನಡೆ ಪಡೆಯಲು ಅತ್ಯುತ್ತಮವಾಗಿ ಪೈಪೋಟಿ ನೀಡಿದವು. ಆದರೆ ಚೇತನ್ ಸಕಾರಿಯಾ ಕೊನೆಯಲ್ಲಿ ಸಿಡಿಸಿದ ಒಂದು ಸಿಕ್ಸರ್ ಕರ್ನಾಟಕಕ್ಕೆ ಹಿನ್ನಡೆಯನ್ನುಂಟು ಮಾಡಿತು. ಕರ್ನಾಟಕ ಮೊದಲ ಇನ್ನಿಂಗ್ಸ್​ನಲ್ಲಿ ಕರ್ನಾಟಕ ತಂಡ 372 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಸೌರಾಷ್ಟ್ರ 376ಕ್ಕೆ ಆಲೌಟ್ ಆಯಿತು. ಕೊನೆಯಲ್ಲಿ ಚೇತನ್ ಸಕಾರಿಯ 29 ರನ್​ಗಳಿಸಿ ತಮ್ಮ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಕೇವಲ ಇನ್ನು ಒಂದು ದಿನದ ಆಟ ಬಾಕಿ ಉಳಿದಿರುವುದರಿಂದ ಈ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕ 3 ಅಂಕ ಪಡೆಯುವ ಅವಕಾಶವನ್ನ ಕಳೆದುಕೊಂಡಿದೆ.

ಕರ್ನಾಟಕದ ಇನ್ನಿಂಗ್ಸ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ 96 ರನ್, ಕರುಣ್ ನಾಯರ್ 73, ಸ್ಮರಣ್ ರವಿಚಂದ್ರನ್ 77 ಹಾಗೂ ಶ್ರೇಯಸ್ ಗೋಪಾಲ್ 56, ಶೇಖರ್ ಶೆಟ್ಟಿ ಸಿಡಿಸಿದ 41 ರನ್​ಗಳ ನೆರವಿನಿಂದ 372 ರನ್​ಗಳಿಸಿತ್ತು. ಧರ್ಮೇಂದ್ರ ಜಡೇಜಾ 124 ರನ್​ಗಳಿಗೆ 7 ವಿಕೆಟ್ ಪಡೆದು ಕರ್ನಾಟಕ ದೊಡ್ಡ ಮೊತ್ತ ಪೇರಿಸಲು ತಡೆಗೋಡೆಯಾದರು. ಜಯದೇವ್ ಉನಾದ್ಕಟ್ ಯುವರಾಜ್​ಸಿನ್ಹಾ ದೋಡಿಯಾ ಹಾಗೂ ಸಮ್ಮರ್ ಗಜ್ಜರ್ ತಲಾ 1 ವಿಕೆಟ್ ಪಡೆದರು.

ಮೊದಲ ವಿಕೆಟ್​ಗೆ ಶತಕದ ಜೊತೆಯಾಟ

ನಂತರ ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 39.4 ಓವರ್​ಗಳಲ್ಲಿ 140 ರನ್​ಗಳಿಸಿತು. ಈ ಸಂದರ್ಭದಲ್ಲಿ ಸೌರಾಷ್ಟ್ರ ಸಂಪೂರ್ಣ ಪ್ರಾಬಲ್ಯ ಸಾಧಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಂತರ ಶ್ರೇಯಸ್ ಗೋಪಾಲ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾ ಮಾಡಿದರು. 41 ರನ್​ಗಳಿಸಿದ್ದ ಹಾರ್ವಿಕ್ ದೇಸಾಯಿಯನ್ನ ಮೊಹ್ಶಿನ್ ಖಾನ್ ವಿಕೆಟ್ ಉಡಾಯಿಸಿ ಬ್ರೇಕ್ ಕೊಟ್ಟರೆ, ನಂತರ ಗೋಪಾಲ್ 148 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ 90 ರನ್​ಗಳಿಸಿದ್ದ ಚಿರಾಗ್ ಜನಿ ವಿಕೆಟ್ ಪಡೆದು ಮತ್ತೊಂದು ಬ್ರೇಕ್ ನೀಡಿದರು.

ಆರಂಭಿಕರ ನಂತರ ಬಂದ ಜಯ್ ಗೋಹ್ಲಿ ಕೇವಲ 3 ರನ್​ಗಳಿಸಿ ಗೋಪಾಲ್ ಬೌಲಿಂಗ್​​ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಅನ್ಶ್​ ಗೋಸಾಯ್ 19 ರನ್​ಗಳಿಸಿ ಸ್ಮರಣ್​ಗೆ ಕ್ಯಾಚ್ ನೀಡಿದರು.

ಕರ್ನಾಟಕಕ್ಕೆ ಮೇಲುಗೈ ತಂದುಕೊಟ್ಟಿದ್ದ ಗೋಪಾಲ್

2ನೇ ದಿನದಾಟಕ್ಕೆ 200 ರನ್​ಗಳಿಸಿದ್ದ ಸೌರಾಷ್ಟ್ರ 4 ವಿಕೆಟ್ ಕಳೆದುಕೊಂಡಿತ್ತು. ಮುನ್ನಡೆಗಾಗಿ 3ನೇ ದಿನ ಇನ್ನೂ 173 ರನ್​ಗಳಿಸಬೇಕುತ್ತು. ನಿನ್ನಡೆ ಬ್ಯಾಟಿಂಗ್ ಕಾಯ್ಸದಿರಿಸಿದ್ದ ಅರ್ಪಿತ್ ವಾಸವದಾ ಹಾಗೂ ಪ್ರೇರಕ್ ಮಂಕಡ್ ಇಂದು 66 ರನ್​ ಸೇರಿಸಿದರು, ಮಂಕಡ್ 27 ರನ್​ಗಳಿಸಿ ಗೋಪಾಲ್​ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಅರ್ಪಿತ್ ಜೊತೆ ಸೇರಿದ ಗಜ್ಜರ್ 5ನೇ ವಿಕೆಟ್​ಗೆ 54 ರನ್​ ಸೇರಿಸಿದರು. ಈ ಹಂತದಲ್ಲಿ ವಾಸವದಾ ಕೂಡ 58 ರನ್​ಗಳಿಸಿ ಗೋಪಾಲ್​ಗೆ 5ನೇ ಬಲಿಯಾದರು.

ಅರ್ಪಿತ್ ವಿಕೆಟ್ ಬೀಳುತ್ತಿದ್ದಂತೆ ಕರ್ನಾಟಕ ತಂಡ ಮೇಲುಗೈ ಸಾಧಿಸಿತು. 234ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರ ಗೋಪಾಲ್ ದಾಳಿಗೆ ತತ್ತರಿಸಿ 318 ರನ್​ಗಳಾಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಇದರಲ್ಲಿ 6 ವಿಕೆಟ್ ಗೋಪಾಲ್ ಪಡೆದರು. ಮುನ್ನಡೆ ಪಡೆಯಲು ಸೌರಾಷ್ಟ್ರಕ್ಕೆ ಇನ್ನೂ55 ರನ್​ಗಳ ಅವಶ್ಯಕತೆ ಇತ್ತು. ಆದರೆ ಗಜ್ಜರ್ 122 ಎಸೆತಗಳಲ್ಲಿ 45 ರನ್, 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚೇತನ್ ಸಕಾರಿಯಾ 72 ಎಸೆತಗಳಲ್ಲಿ 3 ಸಿಕ್ಸರ್​ಗಳ ನೆರವಿನಿಂದ 29 ರನ್​ಗಳಿಸಿ 4 ರನ್​ಗಳ ಮುನ್ನಡೆ ಪಡೆಯಲು ನೆರವಾದರು.

ಮುನ್ನಡೆ ತಂದುಕೊಟ್ಟ ಸಕಾರಿಯಾ

ಸಕಾರಿಯಾ 9ನೇ ವಿಕೆಟ್​ಗೆ ಗಜ್ಜರ್ ಜೊತೆಗೆ 24 ರನ್ ಹಾಗೂ 10ನೇ ವಿಕೆಟ್ ಜೊತೆಯಾಟದಲ್ಲಿ ಯುವರಾಜ್​ಸಿನ್ಹಾ ಜೊತೆಗೆ 34 ರನ್​ಗಳ ಜೊತೆಯಾಟ ನಡೆಸಿ ಮುನ್ನಡೆ ತಂಡದುಕೊಡಲು ನೆರವಾದರು. ಶ್ರೇಯಾಸ್ ಗೋಪಾಲ್ 8 ವಿಕೆಟ್ ಪಡೆದರೆ, ಶಿಖರ್ ಶೆಟ್ಟಿ ಹಾಗೂ ಮೊಹ್ಶಿನ್ ಖಾನ್ ತಲಾ 1 ವಿಕೆಟ್ ಪಡೆದರು.

ಕರ್ನಾಟಕ ತಂಡ 3ನೇ ದಿನದಾಟದ ಅಂತ್ಯಕ್ಕೆ 28 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 89 ರನ್​ಗಳಿಸಿದೆ. ನಾಯಕ ಮಯಾಂಕ್ ಅಗರ್ವಾಲ್ ಅಜೇಯ 31, ದೇವದತ್ ಪಡಿಕ್ಕಲ್ ಅಜೇಯ 18 ರನ್​ಗಳಿಸಿದರು. ನಿಕಿನ್ ಜೋಶ್ 34 ರನ್​ಗಳಿಸಿ ಔಟ್ ಆದರು.