RCB Fans: ‘ಈ ಸಲ ಕಪ್ ನಮ್ದೇ’ ಆದ್ರೆ, ಸಿಎಂ ಸಿದ್ದರಾಮಯ್ಯಗೆ RCB ಫ್ಯಾನ್ಸ್ ಕಡೆಯಿಂದ ಸ್ಪೆಷಲ್ ಮನವಿ! ಪತ್ರ ಬರೆದ ಅಭಿಮಾನಿ| Special appeal from RCB fans to CM Siddaramaiah Fans write a letter

RCB Fans: ‘ಈ ಸಲ ಕಪ್ ನಮ್ದೇ’ ಆದ್ರೆ, ಸಿಎಂ ಸಿದ್ದರಾಮಯ್ಯಗೆ RCB ಫ್ಯಾನ್ಸ್ ಕಡೆಯಿಂದ ಸ್ಪೆಷಲ್ ಮನವಿ! ಪತ್ರ ಬರೆದ ಅಭಿಮಾನಿ| Special appeal from RCB fans to CM Siddaramaiah Fans write a letter

Last Updated:

ಈ ಸಲ ಕಪ್ ನಮ್ದೆ ಅಂತ ಆರ್​ಸಿಬಿ ಫ್ಯಾನ್ಸ್​ ಕೂಗಿ ಕೂಗಿ ಹೇಳ್ತಿದ್ದಾರೆ. ಇದರ ನಡುವೆಯೇ ಆರ್​ಸಿಬಿ ಅಭಿಮಾನಿಯೊಬ್ಬ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಪೆಷಲ್ ಮನವಿಯೊಂದನ್ನ ಮಾಡಿದ್ದಾರೆ.

News18News18
News18

ಬೆಂಗಳೂರು (ಮೇ 30): ಪ್ಲೇ ಆಫ್​ನಲ್ಲಿ ಪಂಜಾಬ್​ ವಿರುದ್ಧ ಆರ್​ಸಿಬಿ (RCB) ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶಿಸಿದೆ. 18 ವರ್ಷಗಳಿಂದ ಕಾಯ್ತಿರುವ ಆರ್​ಸಿಬಿ ಫ್ಯಾನ್ಸ್ (RCB Fans) ಕನಸು ಈ ಬಾರಿ ನನಸಾಗುತ್ತೆ ಎನ್ನುವ ನಿರೀಕ್ಷೆ ಹೆಚ್ಚಿದೆ. ಈ ಸಲ ಕಪ್ ನಮ್ದೆ ಅಂತ ಆರ್​ಸಿಬಿ ಫ್ಯಾನ್ಸ್​ ಕೂಗಿ ಕೂಗಿ ಹೇಳ್ತಿದ್ದಾರೆ. ಇದರ ನಡುವೆಯೇ ಆರ್​ಸಿಬಿ ಅಭಿಮಾನಿಯೊಬ್ಬ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಸ್ಪೆಷಲ್ ಮನವಿಯೊಂದನ್ನ ಮಾಡಿದ್ದಾರೆ. ಏನದು?

ಆರ್​ಸಿಬಿ ಅಭಿಮಾನಿ ಪತ್ರ ವೈರಲ್​

ಪಂಜಾಬ್​ ತಂಡಕ್ಕೆ ಸೋಲುಣಿಸುವ ಮೂಲಕ ಒಂಬತ್ತು ವರ್ಷಗಳ ಬಳಿಕ RCB ತಂಡ ಫೈನಲ್​ಗೆ ಲಗ್ಗೆ ಇಟ್ಟಿದೆ. ಅಭಿಮಾನಿಗಳ ಖುಷಿ ಹೇಳತೀರದಾಗಿದೆ. ಈ ಬಾರಿ ಕಪ್ ನಮ್ದೆ ಎನ್ನುವುದನ್ನು ಅಭಿಮಾನಿಗಳು ಇಡೀ ದೇಶಕ್ಕೆ ಮುಟ್ಟಿಸಿದ್ದಾರೆ. ಇದರ ನಡುವೆಯೇ ಆರ್ ಸಿ ಬಿ ಅಭಿಮಾನಿ ಬರೆದ ಪತ್ರವೊಂದು ವೈರಲ್ ಆಗ್ತಿದೆ. ಪತ್ರದಲ್ಲಿ ಏನಿದೆ?

ಆರ್‌ಸಿಬಿ ಗೆದ್ದ ದಿನ ರಜೆ ಘೋಷಣೆ ಮಾಡಿ

ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಗೆದ್ದ ದಿನ ರಜೆ ಘೋಷಣೆ ಮಾಡ್ಬೇಕು ಎಂದು ಪತ್ರದಲ್ಲಿ ಬರೆದಿದ್ದಾನೆ. ಎಲ್ಲರ ಮನೆಯಲ್ಲೂ ಸಂಭ್ರಮ ಮನೆ ಮಾಡಿರುತ್ತೆ. ಎಲ್ಲಾ ಕಡೆ ಸೆಲಬ್ರೇಷನ್​ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಅಭಿಮಾನಿ ಪತ್ರದಲ್ಲಿ ಬರೆದಿದ್ದಾರೆ.

ಸಿದ್ದರಾಮಯ್ಯಗೆ ಸ್ಪೆಷಲ್ ಮನವಿ

ಆರ್‌ಸಿಬಿ ಫೈನಲ್‌ ತಲಪುತ್ತಿದ್ದಂತೆ ಈ ಅಭಿಮಾನಿಯೊಬ್ಬ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

“RCB ಫ್ಯಾನ್ಸ್ ಹಬ್ಬ” ದಿನ ಮಾಡಿ

ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡುವಂತೆಯೂ ಮನವಿ ಮಾಡಿದ್ದಾರೆ. ಕಪ್ ಗೆದ್ದ ಬಳಿಕ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತೆ. ಪ್ರತೀ ಮನೆ ಮನೆಯಲ್ಲೂ ಹಬ್ಬದ ವಾತವರಣ ಇರುತ್ತೆ. ಜೂನ್ 3ರಂದು ಕರ್ನಾಟಕ ರಾಜ್ಯ “RCB ಫ್ಯಾನ್ಸ್ ಹಬ್ಬ” ಎಂದು ಘೋಷಿಸಿ ಪ್ರತಿ ವರ್ಷ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡುವಂತೆಯೂ ಮನವಿ ಮಾಡಲಾಗಿದೆ.

ಮೊಹಾಲಿಯಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ XI ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಅಂತರದ ಭರ್ಜರಿ ಜಯ ಗಳಿಸಿ ಫೈನಲ್ಸ್ ಪ್ರವೇಶಿಸಿದೆ. ಬರೊಬ್ಬರಿ 9 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ತಂಡ ಫೈನಲ್ ಪ್ರವೇಶಿಸಿದ್ದು,  ಅಭಿಮಾನಿಗಳಲ್ಲಿ ಫುಲ್ ಖುಷ್ ಆಗಿದ್ದಾರೆ.