Last Updated:
ಸುಲಭಗುರಿ ಬೆನ್ನಟ್ಟಿದ ಆರ್ಸಿಬಿ ಪವರ್ಪ್ಲೇ ಮುಗಿಯುವುದರೊಳಗೆ ತಮ್ಮ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಅದ್ಭುತ ಜೊತೆಯಾಟ ಆಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಐಪಿಎಲ್ (IPL) 2025ರ 46ನೇ ಪಂದ್ಯದಲ್ಲಿ ಡೆಲ್ಲಿಯ ಅರುಣ್ ಜೇಟ್ಲಿ (Arun Jaitley) ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯ ಜರುಗಿತು. ಈ ಪಂದ್ಯವನ್ನು ಸೇಡಿನ ಸಮರ ಎಂದೇ ಬಿಂಬಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 162 ರನ್ ಗಳ ಸಾಮಾನ್ಯ ಮೊತ್ತ ಕಲೆಹಾಕಿತು. ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ (virat kohli) ಹಾಗೂ ಕೆಎಲ್ ರಾಹುಲ್ (KL Rahul) ನಡುವೆ ಮಾತಿನ ಚಕಮಕಿ ಉಂಟಾಯಿತು.
ಪಂದ್ಯದ ಗತಿ ಬದಲಿಸಿದ ಕೊಹ್ಲಿ-ಕೃನಾಲ್
ಈ ಸುಲಭಗುರಿ ಬೆನ್ನಟ್ಟಿದ ಆರ್ಸಿಬಿ ಪವರ್ಪ್ಲೇ ಮುಗಿಯುವುದರೊಳಗೆ ತಮ್ಮ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಅದ್ಭುತ ಜೊತೆಯಾಟ ಆಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಇನ್ನೂ ಪಂದ್ಯಕ್ಕೂ ಮುನ್ನವೇ ಈ ಮ್ಯಾಚ್ ಅನ್ನು ಸೇಡಿನ ಸಮರ ಎಂದು ಬಿಂಬಿಸಲಾಗಿತ್ತು. ಅದಕ್ಕೆ ಕಾರಣ ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಮಾಡಿದ ಸಂಭ್ರಮಾಚರಣೆ. ಸದ್ಯ ಇಂದಿನ ಪಂದ್ಯ ವಿರಾಟ್ ಕೊಹ್ಲಿಯ ತವರಿನಲ್ಲಿ ನಡೆದಿದ್ದು, ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಮೂಲಕ ಆರ್ಸಿಬಿ ಪಂದ್ಯ ಗೆಲ್ಲಲು ನೆರವಾದರು.
ಚೇಸಿಂಗ್ ಸಂದರ್ಭದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಡಿಸಿ ವಿಕೆಟ್ ಕೀಪರ್ ಕನ್ನಡಿಗ ಕೆಎಲ್ ರಾಹುಲ್ ನಡುವೆ ಮಾತಿನ ಚಕಮಖಿ ನಡೆದಿದ್ದು, ಮೈದಾನದಲ್ಲಿ ವೀಕ್ಷಕರ ಕುತೂಹಲಕ್ಕೆ ಕಾರಣವಾಯಿತು. ಮಾತ್ರವಲ್ಲ ಡೆಲ್ಲಿ ಹಾಗೂ ಆರ್ಸಿಬಿ ಪಂದ್ಯದ ಬಿಸಿ ಹೆಚ್ಚಿಸಿತು.
Heated Conversation Between KL & Kohli pic.twitter.com/KxluLj61HR
— Popa 🇮🇳 (@MagnesiumKohli) April 27, 2025
ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತುವ ಜವಾಬ್ದಾರಿ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ಶಾಂತಚಿತ್ತದಿಂದ ಕಾಣುತ್ತಿದ್ದರು. ಆದರೆ ಅವರ ಮತ್ತು ವಿಕೆಟ್ ಕೀಪರ್ ಕೆಎಲ್ ರಾಹುಲ್ ನಡುವಿನ ಮಾತಿನ ಚಕಮಕಿ ಇಬ್ಬರ ನಡುವಿನ ಮಾತಿನ ಸಂಘರ್ಷಕ್ಕೆ ಕಾರಣವಾಯಿತು.
ಇದನ್ನೂ ಓದಿ: Rishabh Pant: 9 ಪಂದ್ಯ, 6ರಲ್ಲಿ ಒಂದಂಕಿಗೆ ಔಟ್! ಪಂತ್ ನೀವು ಬದಲಾಗೋದೆ ಇಲ್ವಾ? ಎಲ್ಎಸ್ಜಿ ನಾಯಕನ ವಿರುದ್ಧ ಫ್ಯಾನ್ಸ್ ಗರಂ
ಆರ್ಸಿಬಿ ಇನ್ನಿಂಗ್ಸ್ನ ಮಧ್ಯದಲ್ಲಿ ಈ ಘಟನೆ ಸಂಭವಿಸಿದೆ. ಪಾಟಿದಾರ್ ರನ್ಔಟ್ ಆದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಕೊಹ್ಲಿ ರಾಹುಲ್ಗೆ ಏನನ್ನೋ ಹೇಳುವ ಮೂಲಕ ಜಗಳ ತೆಗೆದಿದ್ದಾರೆ. ಆದರೆ, ಆ ಕ್ಷಣದಲ್ಲಿ ಕೆಎಲ್ ರಾಹುಲ್ ಕೊಹ್ಲಿ ಅವರನ್ನು ಅಸಹಾಯಕರಂತೆ ನೋಡಿದ್ದು ಕಂಡು ಬಂದಿತು. ಆ ಸಂದರ್ಭದಲ್ಲಿ ಇಬ್ಬರ ನಡುವಿನ ಕಲಹಕ್ಕೆ ಕಾರಣವಾಯಿತು. ಆ ಸಂದರ್ಭದಲ್ಲಿ ಟೀಂ ಇಂಡಿಯಾದ ಇಬ್ಬರು ಶ್ರೇಷ್ಠ ಆಟಗಾರರ ನಡುವಿನ ಕಲಹ ಅಭಿಮಾನಿಗಳನ್ನು ರೋಮಾಂಚನಗೊಳಿಸಿತು.
ಸ್ಪರ್ಧಾತ್ಮಕ ಮನೋಭಾವಕ್ಕೆ ಹೆಸರುವಾಸಿಯಾದ ಇಬ್ಬರೂ ಆಟಗಾರರು. ಈ ಘಟನೆಯನ್ನು ಮುದುವರೆಸದೇ ಅಲ್ಲಿಯೇ ಬಿಟ್ಟು ಕ್ರೀಡಾ ಸ್ಪೂರ್ತಿ ತೋರಿದ್ದು ಕೂಡ ಕಂಡು ಬಂದಿತು. ಅಂತಿಮವಾಗಿ ಆರ್ಸಿಬಿ 18.3 ಓವರ್ಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಇನ್ನೂ ಉಭಯ ಆಟಗಾರರು ಪಂದ್ಯದ ನಡುವೆ ಜಗಳ ಆಡಿದ್ದರೂ ಕೂಡ ಪಂದ್ಯ ಮುಗಿದ ಬಳಿಕ ಹಸ್ತಲಾಘವ ಮಾಡಿ ಕೋಪಕ್ಕೆ ಇತಿಶ್ರೀ ಹಾಡಿದರು.
April 27, 2025 11:28 PM IST