RCB vs KKR IPL 2025: ಭುವನೇಶ್ವರ್ ಕುಮಾರ್ ಔಟ್, ರಜತ್ ಪಾಟಿದಾರ್ ಹೇಳಿದ್ದೇನು? | Bhuvneshwar Kumar IPL 2025 Opener Snub franchise Reveals the Reason

RCB vs KKR IPL 2025: ಭುವನೇಶ್ವರ್ ಕುಮಾರ್ ಔಟ್, ರಜತ್ ಪಾಟಿದಾರ್ ಹೇಳಿದ್ದೇನು? | Bhuvneshwar Kumar IPL 2025 Opener Snub franchise Reveals the Reason

ರಜತ್ ಪಾಟಿದಾರ ಹೇಳಿದ್ದೇನು?

ಪಿಚ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಸಿಬಿ ನಾಯಕ ರಜತ್ ಪಟಿದಾರ್ ಹೇಳಿದ್ದಾರೆ. ಟಾಸ್​ ಗೆದ್ದ ನಂತರ ಮಾತನಾಡಿದ ಅವರು, ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಪಿಚ್ ನೋಡಲು ಕಠಿಣವಾಗಿ ಕಾಣುತ್ತದೆ. ಆರ್‌ಸಿಬಿ ತಂಡವನ್ನು ಮುನ್ನಡೆಸಲು ಇದು ನನಗೆ ಸಿಕ್ಕ ಉತ್ತಮ ಅವಕಾಶ. ಇದು ನನಗೆ ಶ್ರೇಷ್ಠ ಆಟಗಾರರಿಂದ ಕಲಿಯಲು ಒಳ್ಳೆಯ ಅವಕಾಶ. ಕಳೆದ 10-15 ದಿನಗಳಿಂದ ನಾವು ಈ ಋತುವಿಗಾಗಿ ಚೆನ್ನಾಗಿ ತಯಾರಿ ನಡೆಸುತ್ತಿದ್ದೇವೆ. ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆ ಕೆಲವು ಗೊಂದಲಗಳಿವೆ. ಈ ಪಂದ್ಯದಲ್ಲಿ ನಾವು ಮೂವರು ಬೌಲರ್‌ಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಮೈದಾನಕ್ಕೆ ಇಳಿಯುತ್ತಿದ್ದೇವೆ ಎಂದು ರಜತ್ ಪಾಟಿದಾರ್ ಹೇಳಿದರು.

ಇದನ್ನೂ ಓದಿ: IPL 2025: ಈ ಕಾರಣದಿಂದ ಆರ್‌ಸಿಬಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆಯುವ ಸಾಧ್ಯತೆ! ಆಸೀಸ್​ ಲೆಜೆಂಡ್​ ಭವಿಷ್ಯ

ಯುವ ವೇಗಿಗೆ ಚಾನ್ಸ್

ಈ ಪಂದ್ಯದಲ್ಲಿ ಆಸೀಸ್ ವೇಗಿ ಹೇಜಲ್​ವುಡ್​ ತಂಡದ ಟಾಪ್ ವೇಗಿಯಾಗಿದ್ದರೆ, ಯಶ್ ದಯಾಳ್ ಹಾಗೂ ರಸಿಕ್ ಸಲಾಮ್​ ಭಾರತೀಯ ವೇಗಿಗಳಾಗಿದ್ದಾರೆ. ಸುಯಾಶ್ ಶರ್ಮಾ ಹಾಗೂ ಕೃನಾಲ್ ಸ್ಪಿನ್​ ವಿಭಾಗದಲ್ಲಿದ್ದಾರೆ. ಅವಶ್ಯಕತೆ ಬಿದ್ದರೆ ಲಿವಿಂಗ್​​ಸ್ಟೋನ್​ ಕೂಢ ಬೌಲಿಂಗ್ ಮಾಡಲಿದ್ದಾರೆ.

ಸಣ್ಣ ಗಾಯದ ಕಾರಣ ಭುವಿ ಔಟ್

ಈ ಪಂದ್ಯದಲ್ಲಿ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಅನುಪಸ್ಥಿತಿಯಿಂದ ಆರ್‌ಸಿಬಿ ಅಭಿಮಾನಿಗಳು ಅಚ್ಚರಿಗೊಂಡರು. ಆದರೆ ಸಣ್ಣ ಗಾಯದಿಂದಾಗಿ ಭುವನೇಶ್ವರ್ ಕುಮಾರ್ ಅವರನ್ನು ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಆರ್‌ಸಿಬಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಅವರು ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅವರ ಸ್ಥಾನದಲ್ಲಿ ಯುವ ವೇಗಿ ರಸಿಕ್ ದಾಲ್ ಸಲಾಂ ಅವರಿಗೆ ಅವಕಾಶ ಸಿಕ್ಕಿತು.

ಇದನ್ನೂ ಓದಿ: Cricket: ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸರ್‌ಗೆ ಹೊಡೆಸಿಕೊಳ್ಳದ ಲೆಜೆಂಡರಿ ಬೌಲರ್‌ಗಳಿವರು!

ಪ್ಲೇಯಿಂಗ್ ಇಲೆವೆನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಕ್ ದಾರ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ(ಸಿ), ರಿಂಕು ಸಿಂಗ್, ಅಂಗ್ಕ್ರಿಶ್ ರಘುವಂಶಿ, ಸುನಿಲ್ ನರೈನ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.